ಚಿಂತಾಮಣಿ:ಚಿಕ್ಕಬಳ್ಳಾಪುರ ಜಿಲ್ಲೆಯ ರೇಷ್ಮೆ ನಗರಿ ಶಿಡ್ಲಘಟ್ಟ ನಗರಸಭೆ ಆಯುಕ್ತ ಅಮೃತಗೌಡಗೆ ಬ್ಯಾನರ್ತೆರವುಗೊ ಳಿಸಿದ ವಿಚಾರಕ್ಕೆ ಬೆದರಿಕೆಯೊಡ್ಡಿ ಬೆಂಕಿ ಹಚ್ಚಿ ಸುಟ್ಟು ಹಾಕುವುದಾಗಿ ಧಮ್ಮಿ ಹಾಕಿ ವಿವಾದಕ್ಕೆ ಗುರಿಯಾಗಿದ್ದ ಮಾಜಿ ಕಾಂಗ್ರೆಸ್ ಮುಖಂಡ ರಾಜೀವ್ಗೌಡ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಲು ನಿರಾಕರಿಸಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.
ಜನವರಿ 14 ರಂದು ರಾಜೀವ್ಗೌಡ ವಿರುದ್ಧ ನಗರಸಭೆ ಆಯುಕ್ತ ಅಮೃತಗೌಡ ಹಾಗೂ ಜೆಡಿಎಸ್ ಮುಖಂಡ ಶ್ರೀನಿವಾಸಗೌಡ ಎಂಬುವರು ಪ್ರತ್ಯೇಕ ದೂರು ನೀಡಿದ್ದರು.ಈ ಹಿನ್ನಲೆಯಲ್ಲಿ ಬಂಧನ ಬೀತಿಯಿಂದ ರಾಜೀವ್ ಗೌಡ ತಲೆ ಮರೆಸಿಕೊಂಡು ಸೋಮವಾರ ಜಿಲ್ಲೆಯ ಒಳೀಸರ ತಂಡ ಬೀಸಿದ ಬಲೆಗೆ ಕೇರಳದಲ್ಲಿ ಬಂಧನಕ್ಕೆ ಒಳಗಾಗಿದ್ದ ಮಂಗಳವಾರ ಜಿಲ್ಲೆಯ ಪೊಲೀಸರ ತನಿಖಾ ತಂಡ ರಾಜೀವ್ ಗೌಡನನ್ನು ವೈದ್ಯಕೀಯ ತಪಾಸಣೆಯ ನಂತರ ಶಿಡ್ಲಘಟ್ಟ ಪಟ್ಟಣದಲ್ಲಿರುವ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರಿಪಡಿಸಿದ್ದರು.ಆದರೆ ನ್ಯಾಯಾಲಯ ಮಧ್ಯಂತರ ವಿಚಾರಣೆಗೆ ಒಳಪಡಿಸಿ ಜಾಮೀನು ಮಂಜೂರು ಮಾಡಲು ನಿರಾಕರಿಸಿದೆ ಹಿನ್ನೆಲೆಯಲ್ಲಿ ಚಿಂತಾಮಣಿ ನಗರದ ಆಶ್ರಯ ಬಡಾವಣೆಯಲ್ಲಿರುವ ಕಾರಾಗೃಹದಲ್ಲಿ ಇಡಲಾಗಿದೆ.
ಇಂದು ಬೆಳಗ್ಗೆಯಿಂದಲೇ ರಾಜೀವ್ ಗೌಡ ರನ್ನು ಭೇಟಿ ಮಾಡಲು ಅವರ ಅಭಿಮಾನಿಗಳು ಕಾರಾಗೃಹದ ಬಳಿ ಬಂದಾಗ ಜೈಲಿನ ಸಿಬ್ಬಂದಿ ಬೇಟಿ ಮಾಡಲು ಅವಕಾಶ ಕಲ್ಪಿಸಿ ಕೊಡಲಿಲ್ಲ ಅವರ ಕುಟುಂಬಸ್ಥರಿಗೆ ಮಾತ್ರ ಭೇಟಿ ಮಾಡಲು ಅವಕಾಶ ಮಾಡಿಕೊಡಲಾಗಿತ್ತು.
ರಾಜೀವ್ ಗೌಡ ರವರಿಗೆ ಜೈಲಿನ ಒಳಗಡೆ ಯಾವುದೇ ಪ್ರತ್ಯೇಕ ಕೊಠಡಿ ನೀಡಲಿಲ್ಲ.ಹಾಗೂ ಹೊರಗಿನ ಊಟಕ್ಕೆ ಯಾವುದೇ ಅವಕಾಶ ಇರಲಿಲ್ಲ.
ಇದನ್ನು ಓದಿದ್ದೀರಾ..? ಹೊನ್ನುಡಿ ಪ್ರಭಾಕರ್ ನಿಧನಕ್ಕೆ ಪತ್ರಕರ್ತರ ಸಂಘದ ವತಿಯಿಂದ ಸಂತಾಪ ಹಾಗೂ ನುಡಿ ನಮನ
ಇಂದು ಬೆಳಗ್ಗೆ 10:30 ರಿಂದ ಒಂದು ಗಂಟೆವರೆಗೆ ಮಾತ್ರ ಭೇಟಿಗೆ ಅವಕಾಶ ಕಲ್ಪಿಸಿ ಕೊಡಲಾಗಿತ್ತು ಎಂದು ಗೊತ್ತಾಗಿದೆ.





