ರಾಮನಗರದಲ್ಲಿ ಮಗುವಿನ ಹುಟ್ಟುಹಬ್ಬವನ್ನು ವಿನೂತನವಾಗಿ ಆಚರಿಸಿದ್ದು, ಆ ಮಗುವಿನ ಪೋಷಕರು ಪ್ರಸ್ತುತ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಮೇಘನಾ ಮತ್ತು ಅಕ್ಷಯ್ ಎಂಬ ಸಂಗಾತಿಗಳು ಸಮಾನ ಮನಸ್ಕರೊಂದಿಗೆ ಸೇರಿಕೊಂಡು ತಮ್ಮ ಮಗು(ಸೂಫಿ)ವಿನ ಮೂರನೇ ವರ್ಷದ ಹುಟ್ಟುಹಬ್ಬವನ್ನು ವಿನೂತನವಾಗಿ ಆಚರಿಸಿದ್ದಾರೆ.
ಬಿಹಾರದ ಚುನಾವಣೆ ವೇಳೆ ನಡೆದಂತಹ ಮತಗಳ್ಳತನವನ್ನು ವಿರೋಧಿಸಿ ʼವೋಟ್ ಚೋರಿʼ ಎಂಬ ಫಲಕವನ್ನು ಅಳವಡಿಸಿದ್ದ ದೃಶ್ಯ ಹುಟ್ಟುಹಬ್ಬದಲ್ಲಿ ಗಮನ ಸೆಳೆಯಿತು. ಅಲ್ಲದೆ ಬುದ್ಧ, ಬಸವ, ಅಂಬೇಡ್ಕರ್, ಮಂಟೇಸ್ವಾಮಿಯವರ ಕುರಿತ ಕ್ರಾಂತಿಗೀತೆಗಳು ಸ್ಥಳೀಯರನ್ನು ನಿಬ್ಬೆರಗಾಗಿಸಿದವು.
ಇದೇ ವೇಳೆ ಅಕ್ಷಯ್ ಅವರು ಮಾತನಾಡಿ, ಪ್ರಸ್ತುತ ವ್ಯವಸ್ಥೆ, ಪ್ರಜಾಪ್ರಭುತ್ವ ದೇಶದಲ್ಲಿ ನಡೆಯುತ್ತಿರುವ ದುಃಸ್ಥಿತಿಗಳ ಕುರಿತು ಹೇಳುತ್ತ ಗದ್ಗದಿತರಾದರು.

ಬಳಿಕ ಮಗುವಿನ ಕೈಯಲ್ಲಿ ಕೇಕ್ ಕತ್ತರಿಸಿ ನೆರೆದಿದ್ದ ಎಲ್ಲರಿಗೂ ಸಿಹಿ ಹಂಚಿದರು. ಬಳಿಕ ಎಲ್ಲರಿಗೂ ಭರ್ಜರಿ ಬಾಡೂಟದ ವ್ಯವಸ್ಥೆ ಮಾಡಲಾಗಿತ್ತು. ನೆರೆದಿದ್ದ ಎಲ್ಲ ಸಮಾನ ಮನಸ್ಕರು, ಮಕ್ಕಳು ಹಾಗೂ ಸ್ಥಳೀಯರು, ಕಲಾವಿದರು ಮಗುವಿಗೆ ಶುಭಾಷಯಗಳನ್ನು ತಿಳಿಸಿ ಹಾರೈಸಿದರು. ರುಚಿಯಾದ ಭೋಜನ ಸವಿದು ತೆರಳಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ : ಸಾರಿಗೆ ಇಲಾಖೆಗೆ ಒಂದೇ ದಿನ ಗಡುವು: ನಾಳೆ ಬಸ್ ಬಿಟ್ಟಿಲ್ಲ ಎಂದರೆ ವಿದ್ಯಾರ್ಥಿಗಳಿಂದ ಪ್ರತಿಭಟನೆಯ ಎಚ್ಚರಿಕೆ
ಕೌಶಲ್ಯ ತರಬೇತಿಗಾರ್ತಿ ಅಮೃತ, ಬಿ ಟಿವಿ ವರದಿಗಾರ ಆನಂದ, ಟಿವಿ 9 ವರದಿಗಾರರಾದ ಮಹೇಶ್, ಸೋಮಶೇಖರ್, ಪೀಪಲ್ ಮೀಡಿಯಾ ಕ್ಯಾಮೆರಾ ಪರ್ಸನ್ ವಿಜಯ್, ಅಭಿ, ವರದಿಗಾರ್ತಿ ಶ್ರವಂತಿ, ಕಲಾವಿದ ಶ್ರೀನಿವಾಸ್, ಅಡವಿ ಸಂಸ್ಥಾಪಕ
ಹನುಮಂತ, ಸ್ಪಂದನ ಸಂಸ್ಥಾಪಕಿ ಮಾಲಿನಿ ಅಂತರ್ಜನಂ, ಸ್ಪಂದನ ಒಡನಾಡಿಗಳಾದ ಅಶ್ವಥ, ಕಾವ್ಯ, ಆಶಾ, ಸಿಐಟಿಯು ರಾಜ್ಯ ಕಾರ್ಯದರ್ಶಿ ರಾಘವೇಂದ್ರ, ಸಿಐಟಿಯು ರಾಮನಗರ ತಾಲೂಕು ಕಾರ್ಯದರ್ಶಿ ಇಬ್ರಾಹಿಂ, ಕ್ರಿಸ್ಟಲ್ ಗ್ರಾನೈಟ್ ಮತ್ತು ಮಾರ್ಬಲ್ ಪ್ರೈವೇಟ್ ಲಿಮಿಟೆಡ್ ಕಾರ್ಮಿಕರ ಸಂಘದ ಅಧ್ಯಕ್ಷ ಗೋಪಾಲ್, ರಾಕೇಶ್, ಕಲಾವಿದರಾದ ಚೆಲುವರಾಜು, ಮಂಟೇದ ಲಿಂಗಯ್ಯ, ವೀರ ಸ್ವಾಮಿ, ತರುಣ್, ಗೋವಿಂದರಾಜು ಸೇರಿದಂತೆ ನೆರೆಹೊರೆಯವರಾದ ವರಲಕ್ಷ್ಮಿ, ಪ್ರಮೀಳಾ, ಶಾಂತಮ್ಮ, ವೀಣಾ, ಸ್ವಾಮಿ ಸೇರಿದಂತೆ ಪುಟಾಣಿ ಮಕ್ಕಳು ಇದ್ದರು.





