ರಾಮನಗರ | ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಆನೆ-ಮಾನವ ಸಂಘರ್ಷ; ಇದಕ್ಕಿಲ್ಲವೇ ಪರಿಹಾರ?

Date:

ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ತಿಪ್ಪೂರು ಗ್ರಾಮದ ರೈತ ಶಿವರುದ್ರ (42) ಜುಲೈ 6ರ ಬೆಳಗಿನ ಜಾವ 3 ಗಂಟೆಗೆ ಜಮೀನಿಗೆ ನೀರು ಹಾಯಿಸಲೆಂದು ಹೋಗಿದ್ದಾಗ, ಒಂಟಿ ಆನೆಯೊಂದು ದಾಳಿ ನಡೆಸಿ ಭೀಕರವಾಗಿ ಕೊಂದಿದೆ.

ಸಾಮಾನ್ಯವಾಗಿ ಆನೆಗಳು ಹೆಚ್ಚಾಗಿ ಬೆಳಗ್ಗೆ ಇಲ್ಲವೇ ಸಂಜೆಯ ವೇಳೆ ದಾಳಿ ನಡೆಸುತ್ತಿದೆ. ರಾಮನಗರ ಜಿಲ್ಲೆಯ ತೆಂಗಿನಕಲ್ಲು, ನರಿಕಲ್ಲು, ಕಬ್ಬಾಳು, ಬಿಳಿಕಲ್ಲು, ಹಂದಿಗುಂದಿ, ಚಿಕ್ಕಕೆಮ್ಮಣ್ಣುಗುಡ್ಡೆ, ಬೆಳಕೆರೆ, ಚಿಕ್ಕಬೆಟ್ಟ, ಶಿವಾಲದಪ್ಪನ ತಪ್ಪಲು, ಮುತ್ತತ್ತಿ, ಸಂಗಮ ಅರಣ್ಯ ಪ್ರದೇಶಗಳಲ್ಲಿ ನಿರಂತರವಾಗಿ ಜನಗಳ ಮೇಲೆ ದಾಳಿ ಇಡುತ್ತಿವೆ.

ಕಳೆದ ಮೂರು ವರ್ಷಗಳಲ್ಲಿ ಇದು ಒಂಬತ್ತನೆಯ ಸಾವು. ಈ ಸಾವುಗಳನ್ನು ತಪ್ಪಿಸಲು ಅರಣ್ಯ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕಿದೆ. ಎಲ್ಲಿ ಆನೆಗಳ ಸಂಖ್ಯೆ ಹೆಚ್ಚಾಗಿದೆ? ಅವುಗಳು ನಡೆದಾಡುವ ದಾರಿಗಳು ಯಾವುದು? ಕಾಡಾನೆಗಳ ಗುಂಪು ಯಾವ ಹೊತ್ತಿನಲ್ಲಿ, ಯಾವ ಭಾಗಗಳಲ್ಲಿ ಇರುತ್ತವೆ ಎಂಬ ಸಂಗತಿಗಳ ಬಗ್ಗೆ ಅಧ್ಯಯನ ನಡೆಸಬೇಕಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
ರಾಮನಗರ 2
ಆನೆ ದಾಳಿಯಿಂದ ಮೃತಪಟ್ಟ ತಿಪ್ಪೂರು ಗ್ರಾಮದ ರೈತ ಶಿವರುದ್ರ

ಆನೆಗಳು ಓಡಾಡುವ ಪ್ರದೇಶಗಳಲ್ಲಿ ಬರುವ ಹಳ್ಳಿಗಳ ಜನರಿಗೆ ಹಾಗೂ ಸಂಘರ್ಷಕ್ಕೆ ಗುರಿಯಾಗಬಹುದಾದ ಪ್ರದೇಶಗಳಲ್ಲಿನ ಜನರಿಗೆ ಮುಂಚಿತವಾಗಿ ಮಾಹಿತಿ ನೀಡುವುದನ್ನು ರೂಢಿಸಬೇಕಿದೆ. ಈ ಮುಂಜಾಗ್ರತಾ ಕ್ರಮಗಳು ಇಂತ ಅನಾಹುತಗಳನ್ನು ಯಶಸ್ವಿಯಾಗಿ ತಡೆಗಟ್ಟುತ್ತವೆ.

ಕೆಲವು ಕಡೆ ಆನೆಗಳು ಸಹಜವಾಗಿ ಓಡಾಡುತ್ತಿದ್ದ ದಾರಿಗಳಲ್ಲಿ ಅಡಚಣೆ ಹೆಚ್ಚಿದ್ದರಿಂದ ಅನಿವಾರ್ಯವಾಗಿ ಹೊಲ-ಗದ್ದೆಗಳಲ್ಲಿ ಓಡಾಡಲು ಶುರು ಮಾಡಿದ್ದರಿಂದ ಬೆಳೆ ನಾಶ ಹಾಗೂ ಮಾನವನೊಂದಿಗಿನ ಸಂಘರ್ಷ ಹೆಚ್ಚಾಗಿದೆ. ಆನೆ ಓಡಾಡುವ ದಾರಿ ಛಿದ್ರಗೊಂಡಿರುವುದು, ಒತ್ತುವರಿ ಆಗಿರುವುದು, ಕಾಡು ನಾಶದಂತ ಮಾನವನಿಂದಾದ ಅನಾಹುತಗಳಿಂದ ಆನೆಗಳ ಚಟುವಟಿಕೆ ದಿಕ್ಕು ತಪ್ಪುತ್ತಿದೆ.

ಆನೆ ದಾಳಿಗೆ ವ್ಯಕ್ತಿ ಬಲಿ

ರಾಮನಗರ ಜಿಲ್ಲೆಯ ಬಾಧಿತ ಪ್ರದೇಶದ ರೈತರುಗಳು ಕಳೆದ ಜೂನ್ 27ರಂದು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಿದ ಸಂದರ್ಭದಲ್ಲಿ ತಮ್ಮ ತಮ್ಮ ಜಮೀನುಗಳನ್ನು ಅಲ್ಲಿನ ಬೆಳೆ ಬದುಕುಗಳನ್ನು ಅರಣ್ಯ ಇಲಾಖೆ ಗುತ್ತಿಗೆ ಮೇಲೆ ಒಪ್ಪಂದ ಮಾಡಿಕೊಂಡು ವಹಿಸಿಕೊಳ್ಳಲು ಆಗ್ರಹಿಸಿತ್ತು. ಆದರೆ, ರೈತರ ಬೇಡಿಕೆಗಳಿಗೆ ಇನ್ನೂ ಸರ್ಕಾರ ಮಣೆ ಹಾಕಿಲ್ಲ.

ಇದಕ್ಕಿಲ್ಲವೇ ಪರಿಹಾರ?

ಇದಕ್ಕೊಂದು ಶಾಶ್ವತ ಪರಿಹಾರ ಇಲ್ಲವೇ? ಆನೆಗಳು ಓಡಾಡುವ ಜಾಗವನ್ನು ನಿಖರವಾಗಿ ಗುರುತಿಸಿ, ಆ ಜಾಗಗಳನ್ನು ಸರಕಾರವೇ ಕೊಂಡು, ಆ ಪ್ರದೇಶಗಳನ್ನು ಆನೆಗಳಿಗಾಗಿಯೇ ಮೀಸಲಿಡುವುದು. ಆ ಭಾಗದ ಜನರಿಗೆ ಅವುಗಳ ಚಲನವಲನಗಳನ್ನು ಮುಂಚಿತವಾಗಿಯೇ ಮೊಬೈಲ್ ಮೂಲಕ ಮುಟ್ಟಿಸುವ ಕೆಲಸವನ್ನು ಅರಣ್ಯಾಧಿಕಾರಿಗಳು ಮಾಡಬೇಕಿದೆ.

ಆನೆಗಳ ಹಾವಳಿ 3

1975ರಿಂದ ಈಚೆಗೆ ಕರ್ನಾಟಕದಲ್ಲಿ ಶೇ 40ರಕ್ಕಿಂತ ಹೆಚ್ಚು ಪ್ರದೇಶ ಮಾನವ ಅತಿಕ್ರಮಣಕ್ಕೆ ಒಳಗಾಗಿದೆ ಎಂದು ಅಂಕಿ-ಅಂಶಗಳು ಹೇಳುತ್ತವೆ. ಆನೆಗಳು ಬದಲಾದ ಸನ್ನಿವೇಶಕ್ಕೆ ಹೊಂದಿಕೊಂಡು ಬದುಕುತ್ತಿವೆ. ಮಾನವ ಕೂಡ ಹೊಂದಿಕೊಳ್ಳುವುದು ಅನಿವಾರ್ಯವಾಗಿದೆ. ಎಲ್ಲೆಲ್ಲಿ ಅನೆಗಳ ಓಡಾಟ ಹೆಚ್ಚಾಗಿದೆಯೋ ಆ ಭಾಗಗಳಲ್ಲಿ ವಾಸಿಸುವವರಿಗೆ ಆನೆಗಳ ಮನೋಧರ್ಮವನ್ನು ತಿಳಿಸುವ ಕೆಲಸವನ್ನು ಸರಕಾರ ತುರ್ತಾಗಿ ಮಾಡಬೇಕಿದೆ. ಸಂಘರ್ಷಕ್ಕೆ ಕಾರಣವಾಗುತ್ತಿರುವ ಒಂದೊಂದು ಅಂಶವನ್ನು ಗುರುತಿಸಿ, ಸೂಕ್ತವಾದ ಪರಿಹಾರವನ್ನು ಹುಡುಕುವ ಪ್ರಯತ್ನವನ್ನು ಮಾಡುವ ಮೂಲಕ, ಮಾನವ-ಆನೆಗಳ ನಡುವಿನ ಸಂಘರ್ಷಕ್ಕೆ ತಿಲಾಂಜಲಿ ಇಡಬೇಕಿದೆ.

ನಗರಕೆರೆ ಜಗದೀಶ್, ಮಂಡ್ಯ ಫೀಲ್ಡ್ ಕೋರ್ಡಿನೇಟರ್

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...