ರಾಮನಗರ | ಅಂಚೆ ಕಚೇರಿಗೆ ಸಾರ್ವಜನಿಕರ ಮುತ್ತಿಗೆ; ಸಮಸ್ಯೆ ಪರಿಹರಿಸುವುದಾಗಿ ಪೋಸ್ಟ್‌ಮಾಸ್ಟರ್‌ ಭರವಸೆ

Date:

ಪಿಂಚಣಿ ಸೇರಿದಂತೆ ಸರ್ಕಾರದ ಸವಲತ್ತುಗಳಿಂದ ಬರುವ ಹಣವನ್ನು ಪೋಸ್ಟ್‌‌ಮ್ಯಾನ್‌ ಸರಿಯಾಗಿ ಕೊಡದೆ ಅಲೆದಾಡಿಸುತ್ತಿದ್ದಾರೆ ಎಂದು ಆರೋಪಿಸಿ ರಾಮನಗರ ಜಿಲ್ಲೆಯ ಕನಕಪುರದ ವೆಂಕಟರಾಯನದೊಡ್ಡಿ ಅಂಚೆ ಕಚೇರಿಗೆ ಸಾರ್ವಜನಿಕರು ಸೋಮವಾರ ಮುತ್ತಿಗೆ ಹಾಕಿದ್ದರು.

“ವೆಂಕಟರಾಯನದೊಡ್ಡಿ ಅಂಚೆ ಕಚೇರಿಯಲ್ಲಿ ಕೆಲಸ ಮಾಡುವ ಪೋಸ್ಟ್‌ಮ್ಯಾನ್‌ ರಮೇಶ್‌ ಅವರು ಸರ್ಕಾರದಿಂದ ವಿವಿಧ ಯೋಜನೆಯಲ್ಲಿ ಬರುವ ಹಣವನ್ನು ಹಳ್ಳಿಗಳಿಗೆ ಬಂದು ಸರಿಯಾಗಿ ಕೊಡುತ್ತಿಲ್ಲ. ತಮಗೆ ₹10,000, ₹15,000 ಹಣ ಬೇಕಿದ್ದರೆ ಕಾದು ಕುಳಿತು ₹5,000ದಂತೆ ಮೂರು ದಿನ ಪಡೆಯಬೇಕಾದ ಸ್ಥಿತಿ ಉಂಟಾಗಿದೆ” ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

“ಅಂಜೆ ಕಚೇರಿಯಲ್ಲಿ ಹಣ ಪಡೆಯಬೇಕಿದ್ದರೆ ಮುಂಚಿತವಾಗಿ ಪಾಸ್‌ ಪುಸ್ತಕ  ಕೊಡಬೇಕು, ಅದರಲ್ಲಿ ದಿನಕ್ಕೆ ₹35,000 ಮಾತ್ರ ಕೊಡುತ್ತಿದ್ದು, ₹5,000ದಂತೆ ಏಳು ಜನಕ್ಕೆ ಹಣ ಕೊಟ್ಟು ಹಣ ಖಾಲಿ ಆಗಿದೆ ಎಂದು ಹೇಳುತ್ತಾರೆ. ಅಂಚೆ ಕಚೇರಿಗೆ ಬಂದರೂ ಹಣ ಸಿಗದೆ ಹಿಂದಿರುಗಬೇಕಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಕೆಲವು ಸಮಯ ಪೋಸ್ಟ್‌ಮ್ಯಾನ್‌ ಮತ್ತು ಸಾರ್ವಜನಿಕರ ನಡುವೆ ಗದ್ದಲ ನಡೆಯಿತು. ನಮ್ಮ ಹಣವನ್ನು ನಮಗೆ ಕೊಡಿ, ಇಲ್ಲವಾದಲ್ಲಿ ಹಣ ಕೊಡಲು ಆಗುವುದಿಲ್ಲವೆಂದು ಬರೆದುಕೊಡಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಅಂಚೆ ಇಲಾಖೆಯಲ್ಲಿ ಹಣದ ಮಿತಿ ಇರುತ್ತದೆ. ಅದನ್ನು ನಮ್ಮ ವೈಯಕ್ತಿಕವಾಗಿ ರಿಸ್ಕ್‌ ತೆಗೆದುಕೊಂಡು ಜನರಿಗೆ ಹಂಚಬೇಕಿದೆ. ಹಿಂದಿನ ದಿನಗಳಲ್ಲಿ ಪಿಂಚಣಿ ಮಾತ್ರ ಕೊಡಬೇಕಿತ್ತು. ಈಗ ಹಲವಾರು ರೀತಿಯಲ್ಲಿ ಹಣ ಬರುತ್ತಿದ್ದು, ಅದನ್ನು ಇಲ್ಲಿಂದಲೇ ಕೊಡಬೇಕಿದೆ. ಅಷ್ಟು ಹಣ ತಂದು ಇಲ್ಲಿ ಕೊಡಲು, ಹಣಕ್ಕೆ ಇಲ್ಲಿ ಭದ್ರತೆಯಿಲ್ಲ” ಎಂದು ಪೋಸ್ಟ್‌ಮ್ಯಾನ್‌ ರಮೇಶ್‌ ವಿವರಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ವಿಜಯಪುರ | ಅಂಗನವಾಡಿ ನೌಕರರ ಹೋರಾಟ; ಖಾತೆಗೆ ಜಮೆಯಾಯಿತು 2019ರ ಗೌರವ ಧನ

ಸ್ಥಳದಲ್ಲಿ ಜಮಾಯಿಸಿದ್ದ ಜನರನ್ನು ನಿಯಂತ್ರಿಸಲಾಗದೆ ಪೋಸ್ಟ್‌ಮ್ಯಾನ್‌ ಅಲ್ಲಿಂದ ಪೋಸ್ಟ್‌ಮಾಸ್ಟರ್‌ಗೆ ಕರೆ ಮಾಡಿ ಅಲ್ಲಿನ ಸಮಸ್ಯೆಯ ಬಗ್ಗೆ ತಿಳಿಸಿದರು. ಪೋಸ್ಟ್‌ ಮಾಸ್ಟರ್‌ ವಿಜಯಕುಮಾರ್‌ ಜನರನ್ನು ಸಮಾಧಾನ ಮಾಡಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ ಮುಂದೆ ಸಮಸ್ಯೆ ಬರದಂತೆ ಪರಿಹರಿಸಿಕೊಡುವ ಭರವಸೆ ನೀಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...