ಸಂಕಷ್ಟದಲ್ಲಿದೆ ಪಾದರಕ್ಷೆ ತಯಾರಿಸುವ ಸಮಗಾರ ಸಮುದಾಯ; ಸ್ಪಂದಿಸಬೇಕಿದೆ ಸರ್ಕಾರ

Date:

ಸಮಗಾರ ಸಮುದಾಯ ಎಂದಾಗ ನೆನಪಿಗೆ ಬರುವುದು ಶರಣ ಸಮಗಾರ ಹರಳಯ್ಯನವರು. ಹರಳಯ್ಯ ಅವರು ಬಸವಣ್ಣನವರರಿಗೆ ಶರಣು ಎಂದರೆ, ಪ್ರತಿಯಾಗಿ ಬಸವಣ್ಣನವರು ಶರಣು ಶರಣಾರ್ಥಿ ಹರಳ್ಳಯನವರೆ ಎನ್ನುತ್ತಿದ್ದರು. ಇದಂರಿಂದ ಹರಳಯ್ಯನವರಿಗೆ ಗರಬಡಿಂತಾಗಿ, ‘ಪ್ರಪಂಚವೇ ಜಗದ್ಗುರು, ಭಕ್ತಿ ಭಂಡಾರಿ, ಅಣ್ಣ ಬಸವಣ್ಣ ಎಂದು ಕರೆಯುವಂತಹ ನಮ್ಮ ಕಲ್ಯಾಣದ ಪ್ರಧಾನಿ ಹಾಗೂ ದಿನ ನಿತ್ಯ 1.96 ಲಕ್ಷ ಶರಣರಿಗೆ ದಾಸೋಹ ಮಾಡುತ್ತಿರುವ ಬಸವಣ್ಣನವರು ನನ್ನಂತಹ ಸಾಮಾನ್ಯನಿಗೆ ಎರಡು ಸಲ ಶರಣು ಎಂದರಲ್ಲಾ ಈ ಹೊರೆಯನ್ನು ಹೇಗೆ ಕಡಿಮೆಮಾಡಿಕೊಳ್ಳಲಿ’ ಎಂಬ ಚಿಂತೆಯಲ್ಲಿದ್ದರು. ಆಗ, ಶರಣೆ ಕಲ್ಯಾಣಮ್ಮರ ವಿಚಾರದಂತೆ ದಂಪತಿಗಳಿಬ್ಬರು ತಮ್ಮ ತೊಡೆಯ ಚರ್ಮದಿಂದ ತಯಾರಿಸಿದ ಚಮ್ಮಾವುಗೆಗಳನ್ನು ಬಸವಣ್ಣನವರಿಗೆ ನೀಡಲು ತೆರಳಿದ್ದರು. ಬಸವಣ್ಣನವರು ‘ಈ ಶರಣರ ಚಮ್ಮಾವುಗೆ ಪೃಥ್ವಿ ಸಮಾಬಾರದು ಸರಿಯಲ್ಲ ನೋಡಾ ಈ ಚಮ್ಮಾವುಗೆಗಳನ್ನು ತೊಡಲು ನಾನು ಯೋಗ್ಯನಲ್ಲ’ ಎಂದು ಕಳುಹಿಸಿಕೊಡುತ್ತಾರೆ.

ಇಂತಹ ಅಪರೂಪದ ಮತ್ತು ಸತ್ಯ ಶುದ್ಧದಿ ಕಾಯಕ ಮಾಡುವ ಸಮಗಾರ ಸಮುದಾಯವು ಇಂದು ಆರ್ಥಿಕ ಸಂಕಷ್ಟದಲ್ಲಿದೆ. ಆಧುನಿಕರಣದ ಭರಾಟೆಯಲ್ಲಿ ಚರ್ಮದಿಂದ ತಯಾರಿಸಿದ ಪಾದರಕ್ಷೆಗಳನ್ನು ಧರಿಸುವವರ ಸಂಖ್ಯೆಯು ಕಡಿಮೆಯಾಗಿದೆ. ಚಮ್ಮಾರಿಕೆ ಕುಲಕಸುಬು ನಂಬಿಕೊಂಡು ಬದುಕುತ್ತಿರುವ ಬಡ ಕುಟುಂಬಗಳ ಬದುಕು ಆಧುನಿಕತೆಯ ಹೊಡೆತಕ್ಕೆ ನಲುಗಿ ಹೋಗಿದೆ. ಹೊಸ ಶೈಲಿಯ ವಿವಿಧ ನಮೂನೆಯ ಚಪ್ಪಲಿಗಳನ್ನು ಶೋರೂಂ ಅಂಗಡಿಗಳಲ್ಲಿ ದೊಡ್ಡ ಮೊತ್ತಕ್ಕೆ ಖರೀದಿಸುವ ಜನ, ಅದೇ ಚಪ್ಪಲಿ ಹರಿದು ಹೋದಾಗ ಚಮ್ಮಾರರ ಹತ್ತಿರ ಹೊಲಿಸಿಕೊಳ್ಳಲು ಬರುತ್ತಾರೆ. ಒಂದೆರಡು ರೂಪಾಯಿಗೂ ಚೌಕಾಸಿ ಮಾಡುತ್ತಾರೆ. ಬೂಟುಗಳನ್ನು ಪಾಲಿಸು ಮಾಡಿ ಹೊಳೆಯುವಂತೆ ಮಾಡುವ ಈ ಚಮ್ಮಾರರ ಬದುಕು ಮಾತ್ರ ಇಂದಿಗೂ ಮಸುಕಾಗಿದೆ.

ಚಮ್ಮಾರ/ಸಮಗಾರ ಸಮುದಾಯ ತಯಾರಿಸಿದ ಚರ್ಮದ ಚಪ್ಪಲಿಗಳಿಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆಯಿಲ್ಲ. ಬೀದಿ ಬದಿಗಳಲ್ಲಿ ಹರಿದ ಚಪ್ಪಲಿಗಳನ್ನು ಸರಿ ಮಾಡುವ ಕಾಯಕದಿಂದಲೇ ಅನೇಕ ಕುಟುಂಬಗಳು ಇಂದಿಗೂ ಜೀವನ ನಡೆಸುತ್ತಿವೆ‌‌.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ತಮ್ಮ ಸಂಕಷ್ಟಗಳ ಬಗ್ಗೆ ಈದಿನ.ಕಾಮ್‌ ಜೊತೆ ಮಾತನಾಡಿದ ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ಚಮ್ಮಾರಿಕೆ ಕೆಲಸ ಮಾಡುವ ಹನಮಂತ ಸಮಗಾರ, “ಸುಮಾರು 30 ವರ್ಷಗಳಿಂದ ಚಪ್ಪಲಿ ಹೊಲಿಯುವ ಕಾಯಕ ಮಾಡಿಕೊಂಡು ಬಂದಿದ್ದೇವೆ. ಮುಂಜಾನೆಯಿಂದ ಸಂಜೆಯವರೆಗೆ ದುಡಿದರೂ 200 ರೂಪಾಯಿ ಸಿಗುವುದು ಕಷ್ಟ. ಇದರ ಮಧ್ಯೆ ಜನರು ಒಂದೆರಡು ರೂಪಾಯಿಗಳಿಗೆ ಚೌಕಾಸಿ ಮಾಡುತ್ತಾರೆ. ಆದರೂ ಬದುಕಿನ ಬಂಡಿ ಸಾಗಿಸಬೇಕಲ್ಲ. ಬೇರೆ ಕೆಲಸ ಗೊತ್ತಿಲ್ಲ. ಈ ಉದ್ಯೋಗ ಮಾಡಿಕೊಂಡೆ ಜೀವನಾ ಮಾಡ್ತಿದ್ದಿವಿ” ಎಂದರು.

“ನಮ್ಮ ಸಮುದಾಯವು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವುದು ಸಹ ಕಷ್ಟವಿದೆ. ನನ್ನ ಸ್ವಂತ ಮಗ ತಾನೆ ಸ್ವತಃ ದುಡಿದು ಮುಂಜಾನೆ ಪೇಪರ್ ಹಾಕಿ, ನಂತರ ಬೀದಿ ಬೀದಿ ಐಸ್ಕ್ರೀಂ ಮಾರಾಟ ಮಾಡಿ ಪಿಯುಸಿ ಶಿಕ್ಷಣ ಪಡೆದಿದ್ದಾನೆ. ಆದರೆ, ಮುಂದೆ ಕಲಿಸುವುದು ಸಾಧ್ಯವಾಗಲಿಲ್ಲ. ಹೊಟ್ಟೆ ತುಂಬಿಸಿ ಕೊಳ್ಳುವುದು ಕಷ್ಟವಾಗಿದೆ. ಇನ್ನೂ ಶಿಕ್ಷಣ ಹೇಗೆ ಕಲಿಸೋದು. ಸ್ಥಳೀಯ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ, ಸರ್ಕಾರವಾಗಲಿ ಇದುವರೆಗೆ ನಮ್ಮ ಸಮುದಾಯದ ಜನರಿಗೆ ಯಾವುದೇ ಸಹಾಯ ಮಾಡಿಲ್ಲ. ಸರ್ಕಾರದಿಂದ ಬರುವ ರೇಷನ್ ಅಕ್ಕಿ ನಮ್ಮ ಹೊಟ್ಟೆ ತುಂಬಿಸುತ್ತಿದೆ” ಎಂದು ತಮ್ಮ ನೋವನ್ನು ತೋಡಿಕೊಂಡರು.

ಸಮಗಾರ, ಚಮ್ಮಾರ, ಮೋಚಿ, ಮೋಚಿಗಾರ, ಚಾಂಬಾರ್, ಚಂಬಾಗ ಹೀಗೆ ವಿವಿಧ ಭಾಗಗಳಲ್ಲಿ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಈ ಸಮುದಾಯದ ಜನರು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಈ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ. ಕೊಲ್ಲಾಪುರದ ಚರ್ಮದ ಚಪ್ಪಲಿಗಳು ಉತ್ತರ ಕರ್ನಾಟಕದ ಭಾಗದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿವೆ. ಈ ಚಪ್ಪಲಿಗಳನ್ನು ತಯಾರಿಸುವವರು ನಮ್ಮ ಕರ್ನಾಟಕದ ಸಮಗಾರ ಸಮುದಾಯದವರೇ ಆಗಿದ್ದಾರೆ.

ಬೀದಿ ಬದಿಯಲ್ಲಿ ಚಪ್ಪಲಿ ತಯಾರಿಸುವ, ಹೊಲಿಯುವ ಕಾಯಕ ಮಾಡುವ ಸಮಗಾರ ಸಮುದಾಯದ ಜನರಿಗೆ ಸರ್ಕಾರವು ಆರ್ಥಿಕ ಸಹಾಯ ನೀಡಬೇಕಿದೆ. ಅವರ ಮಕ್ಕಳ ಶಿಕ್ಷಣಕ್ಕೆ ಸಹಾಯವಾಗುವ ಯೋಜನೆಗಳನ್ನು ಜಾರಿಗೆ ತರಬೇಕಿದೆ. ಚರ್ಮದ ಕುಟೀರಗಳನ್ನು ಬಡ ಚಮ್ಮಾರರಿಗೆ ಉಚಿತವಾಗಿ ನೀಡಬೇಕಾಗಿದೆ. ಆಧುನಿಕತೆಯ ಸಂದರ್ಭದಲ್ಲಿ ಚರ್ಮ ತಯಾರಿಕೆಯ ತರಬೇತಿ ಕೇಂದ್ರಗಳನ್ನು ಸರ್ಕಾರ ಪ್ರಾರಂಭಿಸಿ ಸಮಗಾರರ ಬದುಕಿಗೆ ಬೆಳಕಾಗಬೇಕಿದೆ. 12ನೇಯ ಶತಮಾನದಲ್ಲಿ ಬಸವಣ್ಣನವರು ಶರಣ ಹರಳಯ್ಯನವರು ತಯಾರಿಸಿದ ಚಮ್ಮಾವುಗೆಗಳು ಪೃಥ್ವಿ ಸಮಬಾರದು ಸರಿಯಲ್ಲ ನೋಡಾ ಎಂದು ಗೌರವಿಸಿದ್ದರು. ಇಂತಹ ಸಮಗಾರ ಸುಮುದಾಯವು ಇಂದು ಸರ್ಕಾರದ ಸಹಾಯದ ನಿರೀಕ್ಷೆಯಲ್ಲಿದೆ. ಸರ್ಕಾರವು ಇನ್ನಾದರೂ ಸಮಗಾರ ಸುಮುದಾಯದ ಅಭಿವೃದ್ಧಿಯ ಬಗ್ಗೆ ಗಮನಹರಿಸಬೇಕಿದೆ.

ಪೋಸ್ಟ್ ಹಂಚಿಕೊಳ್ಳಿ:

ಸುನಿಲ್ ಹಂಪನ್ನವರ
ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಂಡ್ಲುಪೇಟೆ | ಸಿಡಿಪಿಒ ವಿರುದ್ಧ ಜಾರಕಿಹೊಳಿ ಬ್ರಿಗೇಡ್ ಭ್ರಷ್ಟಾಚಾರ ಆರೋಪ; ದೂರು

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಸಿಡಿಪಿಓ ಹೇಮಾವತಿ ವಿರುದ್ದ ಜಾರಕಿಹೊಳಿ ಬ್ರಿಗೇಡ್ ಜಿಲ್ಲಾಧಿಕಾರಿಯವರಿಗೆ...

ಗದಗ | SC ST ಜನರ ನಡುವೆ ಗಲಾಟೆ; ಗಾಯಾಳುಗಳು ಆಸ್ಪತ್ರೆಗೆ ದಾಖಲು

ನೀರು ಕುಡಿದ ವಿಚಾರಕ್ಕೆ ಪರಿಶಿಷ್ಟ ಜಾತಿ(SC) ಪರಿಶಿಷ್ಟ(ST) ಜನಾಂಗದವರ ನಡುವೆ ಗಲಾಟೆ...

ದಾವಣಗೆರೆ | ರಾಜಕಾಲುವೆ ಚರಂಡಿ ಹಾಗೂ ತಡೆ ಗೋಡೆ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ತಹಶೀಲ್ದಾರ್ ಆದೇಶ

ರಾಜಕಾಲುವೆ ಭೂಮಾಪನ ಕಾರ್ಯ ಸಂಪೂರ್ಣಗೊಳ್ಳುವವರೆಗೆ ಹರಿಹರ ನಗರದ ರಾಜ ಕಾಲುವೆಯಲ್ಲಿ ಸಣ್ಣ...

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...