ಅರ್ಧ ಲೀಟರ್ ಹಾಲು ಖರೀದಿಸುವ ಗ್ರಾಹಕರ ಜೇಬಿಗೆ ಕತ್ತರಿ!

Date:

ನಿತ್ಯದ ಬದುಕು ಆರಂಭವಾಗುವುದೇ ಹಾಲಿನೊಂದಿಗೆ. ಬೆಳಗ್ಗೆ ಎದ್ದು ಬಿಸಿ ಬಿಸಿ ಕಾಫಿ-ಚಹಾ ಅಥವಾ ಹಾಲು ಸವಿದು ಉಳಿದ ಕೆಲಸಗಳನ್ನು ಹಲವರು ಆರಂಭಿಸುತ್ತಾರೆ. ಅಂತೆಯೇ, ದಿನನಿತ್ಯ ಜನರ ಜೇಬಿಗೆ ಕತ್ತರಿ ಬೀಳುವುದೂ ಹಾಲಿನಿಂದಲೇ ಆರಂಭವಾಗುತ್ತದೆ.

ಭಾಗಶಃ ಒಂದು ಲೀಟರ್‌ಗೂ ಅಧಿಕ ಹಾಲು ಬಳಕೆ ಮಾಡುವವರು ಅರ್ಧ ಲೀಟರ್‌ನ ಎರಡು ಹಾಲಿನ ಪ್ಯಾಕೇಟ್‌ಗಳನ್ನು ಖರೀದಿಸುವುದು ಹೆಚ್ಚು. ಆ ರೀತಿಯಲ್ಲಿ ಹಾಲು ಖರೀದಿಸುವವರಿಗೆ ನಿತ್ಯವೂ ಲೀಟರ್‌ ಹಾಲಿಗೆ ಎರಡು ರೂಪಾಯಿ ಕತ್ತರಿ ಬೀಳುತ್ತದೆ. ಇದಕ್ಕೆ, ಹಾಲಿನ ಅವೈಜ್ಞಾನಿಕ ದರ ಪರಿಷ್ಕರಣೆಯೇ ಕಾರಣವೆಂದು ಹಲವರು ದೂರುತ್ತಿದ್ದಾರೆ.

ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್‌) ನಂದಿನಿ ಹಾಲಿನ ದರವನ್ನು ಪರಿಷ್ಕರಣೆ ಮಾಡಿದೆ. ಅದರಂತೆ, ‘ಶುಭಂ’ ಹಾಲಿನ ಬೆಲೆಯನ್ನು ಪ್ರತಿ ಲೀಟರ್‌ಗೆ 3 ರೂ. ಹೆಚ್ಚಿಸಲಾಗಿದ್ದು, 45 ರೂ. ಇದ್ದ ಬೆಲೆಯು 48 ರೂ. ಆಗಿದೆ. ಆದರೆ, ಅರ್ಧ ಲೀಟರ್‌ ಹಾಕಿಗೆ 25 ರೂ. ನಿಗದಿ ಮಾಡಲಾಗಿದೆ. ಅಂದರೆ, ಅರ್ಧ ಲೀಟರ್‌ನ ಎರಡು ಪ್ಯಾಕೇಟ್‌ ಹಾಲನ್ನು ಖರೀದಿಸಿದರೆ, ಲೀಟರ್‌ ಹಾಲಿಗೆ 50 ರೂ. ಭರಿಸಬೇಕಾಗುತ್ತದೆ. ಇದರಿಂದ 2 ರೂ.ಗಳನ್ನು ಹೆಚ್ಚುವರಿಯಾಗಿ ಗ್ರಾಹಕರು ವ್ಯಯಿಸಬೇಕಾಗುತ್ತದೆ. ಅರ್ಧ ಲೀಟರ್‌ ಹಾಲಿಗೆ 24 ರೂ. ನಿಗದಿ ಮಾಡಬೇಕಿತ್ತು. ಆದರೆ, 1 ರೂ. ಹೆಚ್ಚಾಗಿ ನಿಗದಿ ಮಾಡಲಾಗಿದೆ ಎಂದು ಗ್ರಾಹಕರು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

‘ಟೋನ್’ ಹಾಲಿನ ಕತೆಯೂ ಅದೇ ಹಾಕಿದ್ದು, ಪ್ರತಿ ಲೀಟರ್‌ ಹಾಲಿನ ಬೆಲೆಯನ್ನು 39 ರೂ.ನಿಂದ 42 ರೂ.ಗೆ ಏರಿಸಲಾಗಿದೆ. ಆದರೆ, ಅರ್ಧ ಲೀಟರ್ ಹಾಲಿಗೆ 21 ರೂ. ಬದಲಾಗಿ, 22 ರೂ. ನಿಗದಿ ಮಾಡಲಾಗಿದೆ. ಇದರಿಂದ ಅರ್ಧ ಲೀಟರ್‌ನ ಎರಡು ಪ್ಯಾಕೆಟ್‌ಗಳನ್ನು ಖರೀದಿಸುವವರು 2 ರೂ. ಹೆಚ್ಚುವರಿ ಮತ್ತವನ್ನು ಭರಿಸಬೇಕಾಗುತ್ತದೆ.

ಹಾಲಿನ ದರ ಪರಿಷ್ಕರಣೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಎಂಎಫ್‌ ಅಧಿಕಾರಿಗಳು, “ಪ್ರತಿ ಲೀಟರ್‌ಗೆ 3 ರೂ. ಏರಿಕೆ ಮಾಡಲಾಗಿದೆ. ಅದರಂತೆ ಅರ್ಧ ಲೀಟರ್‌ಗೆ 1.50 ರೂ. ಏರಿಸಬೇಕಿತ್ತು. ಅಂದರೆ, ಶುಭಂ ಹಾಲಿಗೆ ಅರ್ಧ ಲೀಟರ್‌ಗೆ 23 ರೂ.ನಿಂದ 24.50 ರೂಗೆ, ಅರ್ಧ ಲೀಟರ್‌ ಟೋನ್ಡ್ ಹಾಲಿಗೆ 20ರಿಂದ 21.50 ರೂ.ಗೆ ಏರಿಸಬೇಕಿತ್ತು. ಆದರೆ, ಚಿಲ್ಲರೆ ಸಮಸ್ಯೆಯಿಂದಾಗಿ ಕ್ರಮವಾಗಿ 25 ರೂ. ಮತ್ತು 22 ರೂ. ನಿಗದಿ ಮಾಡಲಾಗಿದೆ. ಹೆಚ್ಚುವರಿ ಮೊತ್ತವನ್ನು ಸರಿದೂಗಿಸಲು ಅರ್ಧ ಲೀಟರ್‌ ಹಾಲಿನ ಜೊತೆಗೆ 10 ಎಂಎಲ್‌ ಹೆಚ್ಚು ಹಾಲನ್ನು ಸೇರಿಸಲಾಗುತ್ತಿದೆ” ಎಂದು ಹೇಳಿದ್ದಾರೆ.

ಕೆಎಂಎಫ್‌ನ ಈ ಸಮರ್ಥನೆ ನ್ಯಾಯಸಮ್ಮತವಾಗಿಲ್ಲವೆಂದು ಗ್ರಾಹಕರು ಕಿಡಿಕಾರಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...