ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದಲ್ಲಿ ಗುಪ್ತದಳದ ಮಾಹಿತಿ ಆಧರಿಸಿ ಆನಂದಪುರ ಪೊಲೀಸ್ ಠಾಣೆಯ ಪೊಲೀಸರು ರೇಡ್ ನಡೆಸಿದ್ದು ಅಕ್ರಮವಾಗಿ ಸಾಗಿಸ್ತಿದ್ದ ಮರಳನ್ನ ಸೀಜ್ ಮಾಡಿದ್ದಾರೆ.
ಸಾಗರ ತಾಲ್ಲೂಕು ಆನಂದಪುರದ ಬಳಿಯಲ್ಲಿ ಅಕ್ರಮವಾಗಿ ಮರಳು ಸಾಗಿಸಲಾಗುತ್ತಿದೆ ಎಂದು ಐಜಿ ಸ್ಕ್ವಾಡ್ ನ ಗುಪ್ತದಳದಿಂದ ಸ್ಥಳೀಯ ಪೊಲೀಸರಿಗೆ ಮಾಹಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ರೇಡ್ ಮಾಡಿದ್ದಾರೆ.
ಇಲ್ಲಿನ ಬಸವನಹೊಂಡ ಗ್ರಾಮದ ಬಳಿ ಕೆಂಜಿಗಾಪುರ ಕ್ರಾಸ್ ಬಳಿ ಹೊಸನಗರ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿ ಕಾಯುತ್ತಿದ್ದ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದರು. ಇದೇ ವೇಳೆ ಗುಪ್ತದಳದ ಮಾಹಿತಿಯಂತೆ ಅಲ್ಲಿಗೆ ಬಂದ ಲಾರಿಯನ್ನು ಪೊಲೀಸರು ತಡೆದಿದ್ದಾರೆ.
ಈ ವೇಳೆ ಲಾರಿಯಲ್ಲಿದ್ದ ಚಾಲಕ ಲಾರಿಯನ್ನ ಸೈಡ್ಗೆ ಹಾಕಿ, ಕೆಳಕ್ಕೆ ಇಳಿದು ಎಸ್ಕೇಪ್ ಆಗಿದ್ದಾನೆ. ಬಳಿಕ ಪೊಲೀಸರು ಲಾರಿಯನ್ನು ಸೀಜ್ ಮಾಡಿ ಕೇಸ್ ದಾಖಲಿಸಿದ್ದಾರೆ.,





