ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತಾಲೂಕಿನ ಪತ್ರಕರ್ತರೂ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳೂ ಆಗಿರುವ ಗಾಯತ್ರಿ ಶೇಷಗಿರಿ ಅವರು ‘ಸ್ತನ ಕ್ಯಾನ್ಸರ್’ನ ಕುರಿತಾಗಿ ಬರೆದಿರುವ“ಜೋಪಾನ ಸಖಿ ಜೋಪಾನ’ ಪುಸ್ತಕದ ಬಿಡುಗಡೆ ಸಮಾರಂಭ ಅಕ್ಟೋಬರ್ 26ರ ಭಾನುವಾರ ಸಂಜೆ 4 ಗಂಟೆಗೆ ತೀರ್ಥಹಳ್ಳಿ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಜರುಗಲಿದೆ.
ವಿಶ್ರಾಂತ ಪ್ರಾಧ್ಯಾಪಕ ಡಾ.ಸಣ್ಣರಾಮ ಪುಸ್ತಕವನ್ನು ಲೋಕಾರ್ಪಣೆ ಗೊಳಿಸುವರು. ಶಿವಮೊಗ್ಗ ಎನ್.ಹೆಚ್.ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮೆಡಿಕಲ್ ಅಂಕಾಲಜಿಸ್ಟ್ ಡಾ||ಅಪರ್ಣ ಶ್ರೀವತ್ಸಸ್ತನಕ್ಯಾನ್ಸರ್ ಕುರಿತು ಮಾತನಾಡುವರು. ಸಾಹಿತಿ, ನಿವೃತ್ತ ಪ್ರಾಚಾರ್ಯ ಡಾ.ಬಿ.ಗಣಪತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕಸಾಪ ಅಧ್ಯಕ್ಷಟಿ.ಕೆ.ರಮೇಶ್ ಶೆಟ್ಟಿ, ಪುಸ್ತಕದ ಲೇಖಕಿ ಗಾಯತ್ರಿ ಶೇಷಗಿರಿ ಉಪಸ್ಥಿತರಿರುವರು.

ತೀರ್ಥಹಳ್ಳಿ ಸಾಹಿತ್ಯ ಆಸಕ್ತರ ಬಳಗ ಹಾಗೂ ಶಾಯರಿ ಪ್ರಕಾಶನ ಸರ್ವರನ್ನೂ ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಸ್ವಾಗತಿಸಿದ್ದಾರೆ.





