ಶಿವಮೊಗ್ಗದ ಗಾಂಧಿಬಜಾರ್ನ ಎರಡನೇ ತಿರುವಿನಲ್ಲಿರುವ ಉಪ್ಪಾರಕೇರಿ ಬಟ್ಟೆ ಮಾರ್ಕೆಟ್ನಲ್ಲಿರುವ ಸ್ಟಾಲ್ಗಳಲ್ಲಿ ಇತ್ತೀಚೆಗೆ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡು ಅನಾಹುತ ಸಂಭವಿಸಿ, ಏಳಕ್ಕೂ ಹೆಚ್ಚು ಅಂಗಡಿಗಳಿಗೆ ನಷ್ಟವುಂಟಾಗಿತ್ತು.
ಈ ಘಟನೆಯಲ್ಲಿ ಹಲವು ಮಂದಿ ಬಡ ವ್ಯಾಪಾರಸ್ಥರು ನಷ್ಟಕ್ಕೊಳಗಾಗಿದ್ದರು. ಇದನ್ನು ಗಮನಿಸಿದ ಶಿವಮೊಗ್ಗ ಸುನ್ನಿ ಜಾಮಿಯಾ ಮಸೀದಿಯ ಆಡಳಿತ ಮಂಡಳಿಯು ಭೇದ-ಭಾವ ಮಾಡದೆ ಅಂಗಡಿಯ ಮಾಲೀಕರಿಗೆ ಧನ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದೆ.
ಇದನ್ನು ಓದಿದ್ದೀರಾ? ಶಿವಮೊಗ್ಗ | ಉಪ್ಪಾರಕೇರಿ ಬಟ್ಟೆ ಮಾರ್ಕೆಟ್ ಬೆಂಕಿ ಅವಘಡ; ವ್ಯಾಪಾರಸ್ಥರಿಗೆ ಶೀಘ್ರ ನಷ್ಟ ಪರಿಹಾರ ನೀಡಲು ಆಗ್ರಹ
ಪರಿಹಾರ ಮೊತ್ತ ವಿತರಿಸುವ ಕಾರ್ಯಕ್ರಮದಲ್ಲಿ ಶಿವಮೊಗ್ಗ ಎಂ ಎಲ್ ಸಿ ಬಲ್ಕೀಸ್ ಬಾನು ಅತಿಥಿಯಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಸ್ಜಿದ್ ಅಧ್ಯಕ್ಷರಾದ ಮುನ್ನವರ್ ಪಾಶ, ಕಲೀಮ್ ಪಾಶ, ಜಿಲ್ಲಾ ವಖ್ಫ್ ಬೋರ್ಡ್ ಅಧಿಕಾರಿ ಸಯ್ಯದ್ ಮೆಹತಬ್, ಅನ್ವರ್ ಸಾಬ್, ರಹೀಮ್ ತಾಹಿರ್, ಖಲೀಲ್ಉರ್ ರೆಹಮಾನ್, ಇರ್ಫಾನ್ ಖಾನ್, ಅಶ್ರಫ್ ಅಹಮದ್, ಸತ್ತಾರ್ ಬೇಗ್, ಎಜಾಝ್ ಪಾಶ, ಮುಫ್ತಿ ಅಖಿಲ್ ರಜಾ ಮತ್ತಿತರರು ಉಪಸ್ಥಿತರಿದ್ದರು.





