ಶಿವಮೊಗ್ಗ, ಸ್ವಾಮಿ ನಮ್ಮೂರಿನ ಕಡೆಗೆ ಯಾರೇ ಅಧಿಕಾರಿಗಳು, ರಾಜಕಾರಣಿಗಳು ಬಂದ್ರು, ಕಾರು ನಿಲ್ಲಿಸುತ್ತಿರಲಿಲ್ಲ. ಇವರ ಹತ್ರ ಏನ್ ಮಾತಾಡೋದು ಅಂತಾ ಹೋಗ್ತಾ ಇದ್ರು. ಆದ್ರೆ ನೀವು ದೇವರ ರೀತಿ ಬಂದು ನಮಗೆ ಸಹಾಯ ಮಾಡಿದ್ದಿರಾ. ನಿಮಗೆ ದೇವರು ಒಳ್ಳೆದು ಮಾಡಲಿ.
ಹೀಗಂತಾ ಶ್ರೀ ಲಕ್ಷ್ಮಿ ಸೇವಾ ಟ್ರಸ್ಟ್ ಹಾಗೂ ಸಂಸದ ರಾಘಣ್ಣ ಅಭಿಮಾನಿಗಳ ಸಂಘದ ಮುಖಂಡ ಹರೀಶ್ ನಾಯಕ್ ಗೆ ಈ ಭಾಗದ ಜನರು ಆಶೀರ್ವಾದ ಮಾಡಿದ್ದಾರೆ. ಹೌದು, ನೊಂದವರ ಬಾಳಿಗೆ ಬೆಳಕಾಗಿ ಬಂದ ಹರೀಶ್ ನಾಯ್ಕ್, ಶಿವಮೊಗ್ಗದ ಊರಗಡೂರು ಪುಟ್ಟಪ್ಪ ಕ್ಯಾಂಪ್ ನಲ್ಲಿ 20 ಶೌಚಾಲಯ ಕಟ್ಟಿಸಿದ್ದು, ಇದು ಈ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.

ಅಲ್ಲದೇ, ಸಂತ್ರಸ್ತರಿಗೆ ಆಯ್ಕೆ ಮಾಡಿ ಹೊಸಹಳ್ಳಿ ತಾಂಡದಲ್ಲಿ ಒಂದು ಮನೆ, ಸೂಳೆಬೈಲು ಬಡಾವಣೆಯಲ್ಲಿ ಒಂದು ಮನೆ ಸಹ ಕಟ್ಟಿಸಿಕೊಟ್ಟಿದ್ದು, ಇದು ಹರೀಶ್ ನಾಯ್ಕ್ ಅವರ ಬಡವರ, ಜನಪರ ಕಾಳಜಿ ತೋರಿಸಿದೆ.
ಈ ಮನೆಗಳು ಹಾಗೂ ಶೌಚಾಲಯಗಳನ್ನು ಶಿವಮೊಗ್ಗ ಸಂಸದ ರಾಘವೇಂದ್ರ ಉದ್ಘಾಟಿಸಿದರು. ಈ ವೇಳೆ ಹರೀಶ್ ನಾಯ್ಕ್ ಸೇರಿದಂತೆ, ರಾಘಣ್ಣ ಅಭಿಮಾನಿಗಳು ಹಾಗೂ ಟ್ರಸ್ಟ್ ನ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.





