ಶಿವಮೊಗ್ಗ | ಪೌರ ಕಾರ್ಮಿಕರಿಗೆ “ಅರಿವೇ ಅಂಬೇಡ್ಕರ” ಪುಸ್ತಕ ನೀಡಿ ಅರ್ಥಪೂರ್ಣ ಹುಟ್ಟುಹಬ್ಬ ಆಚರಣೆ ಮಾಡಿದ ಸಮಾಜ ಸೇವಕ ಜಮೀಲ್

Date:

ಶಿವಮೊಗ್ಗ ನಗರದ ಸಮಾಜ ಸೇವಕರು ಹಾಗೂ ಆರ್ ಎಂ ಎಲ್ ನಗರ ನಿವಾಸಿಯಾದ ಸಯ್ಯದ್ ಜಮೀಲ್ ರವರು ಇಂದು ತಮ್ಮ ಹುಟ್ಟುಹಬ್ಬವನ್ನು ಸರಳತೆಯಿಂದ ಆಚರಿಸಿಕೊಂಡರು.

1001535974

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಮುಖಂಡರು ಹಾಗೂ ಸಮಾಜ ಸೇವಕರಾದ ಸಯ್ಯದ್ ಜಮೀಲ್ 28 ನೆ ವಾರ್ಡ್ ಆರ್ ಎಂ ಎಲ್ ನಗರದ ನಿವಾಸಿಯಾಗಿದ್ದು ತಮ್ಮ 39 ನೆ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಕಾಶ್ಮೀರದಲ್ಲಿ ಪಹಲ್ಗಮ ದಾಳಿಯಲ್ಲಿ ಮೃತರ ಆತ್ಮಕ್ಕೆ ಶಾಂತಿ ನಮನ ಸಲ್ಲಿಸಿದರು.

ನಂತರ ಶಿವಮೊಗ್ಗ ನಗರದ ಪೌರ ಕಾರ್ಮಿಕರಿಗೆ ಈದಿನ ಡಾಟ್ ಕಾಮ್ ಹೊರ ತಂದಿರುವ “ಅರಿವೇ ಅಂಬೇಡ್ಕರ” ವಿಶೇಷ ಸಂಚಿಕೆಯನ್ನು ಉಡುಗೊರೆಯಾಗಿ ನೀಡುವ ಮೂಲಕ ಬಾಬಾ ಸಾಹೇಬರ ವಿಚಾರಧಾರೆ ಎಲ್ಲರ ಮನಸಲ್ಲಿ ಪಸರಿಸಲಿ, ದೇಶದಲ್ಲಿ ಸಂವಿಧಾನ ಆಶಯ ಉಳಿಯುವಂತೆ ಮಾಡುವುದು ಈ ಸಂದರ್ಭದಲ್ಲಿ ಮುಖ್ಯವಾಗಿದೆ ಎಂದರು ಜಮೀಲ್.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
1001536043

ಅರಿವೇ ಅಂಬೇಡ್ಕರ ವಿಶೇಷ ಸಂಚಿಕೆ ತುಂಬಾ ಮಹತ್ವಯುಳ್ಳ ಸಂಚಿಕೆಯಾಗಿದೆ ಇದನ್ನು ಎಲ್ಲರೂ ಖರೀದಿಸಿ ಓದುವ ಮೂಲಕ ದೇಶದ ಏಕತೆ ಹಾಗೂ ಸಂವಿಧಾನದ ಆಶಯ ತಿಳಿಯುವುದು, ಈ ಸಂದರ್ಭದಲ್ಲಿ ಮುಖ್ಯವಾಗಿದೆ ಎಂದು ತಿಳಿಸಿದರು.

ಈ ಒಂದು ಮಹತ್ವಪೂರ್ಣ ಪುಸ್ತಕ ತಂದಿರುವ ಈದಿನ ಡಾಟ್ ಕಾಮ್ ಗೆ ಧನ್ಯವಾದಗಳನ್ನ ತಿಳಿಸಿದರು.ನಂತರ ಮಾತನಾಡಿದ ಸಯ್ಯದ್ ಜಮೀಲ್ ದೇಶದಲ್ಲಿ ಶಾಂತಿ ಸೌಹಾರ್ದತೆ ಮೊದಲ ಆದ್ಯತೆ ಹಾಗಾಗಿ ದುಃಖದ ಸಮಯದಲ್ಲಿ ನನ್ನ ಹುಟ್ಟುಹಬ್ಬದ ಆಚರಣೆ ಮಾಡಬಾರದು ಎಂದು ತೀರ್ಮಾನಿಸಿದ್ದೆ.

ಆದರೆ ಸ್ನೇಹಿತರು ಹಾಗೂ ಹಿತೈಷಿ ಬಳಗದವರು ಹುಟ್ಟುಹಬ್ಬದ ಆಚರಣೆಯನ್ನು ಮುಂಚಿತವಾಗಿ ಸಿದ್ಧತೆ ಮಾಡಿದ್ದ ಕರಣ ಅರ್ಥಪೂರ್ಣವಾಗಿ ಮಾಡಬೇಕು ಎಂದು ನಿರ್ಧಾರ ಮಾಡಿದೆ.

ಇದೆ ಸಂದರ್ಭದಲ್ಲಿ ಏಪ್ರಿಲ್ ತಿಂಗಳು ಅಂಬೇಡ್ಕರ್ ಜಯಂತಿ ಆಗಿರುವ ಸಂತೋಷದ ಜೊತೆಗೆ ನಾನು ಸಹ ಏಪ್ರಿಲ್ ತಿಂಗಳಲ್ಲಿ ಜನನ ಆಗಿರುವ ಕಾರಣ ಅಂಬೇಡ್ಕರ್ ಅವರ ವಿಶೇಷ ಸಂಚಿಕೆ ಈದಿನ ಡಾಟ್ ಕಾಮ್ ಹೊರ ತಂದಿರುವುದನ್ನು ನೋಡಿ ಸಂತೋಷವಾಯಿತು,

ಪೌರ ಕಾರ್ಮಿಕರಿಗೆ “ಅರಿವೇ ಅಂಬೇಡ್ಕರ” ವಿಶೇಷ ಸಂಚಿಕೆಯನ್ನು ಉಡುಗೊರೆಯಾಗಿ ನೀಡುವ ಮೂಲಕ ಅರ್ಥಪೂರ್ಣ ಹುಟ್ಟುಹಬ್ಬದ ಆಚರಣೆ ಮಹತ್ವ ಎನಿಸಿತು ಎಂದರು.

1001536015

ಹಾಗಾಗಿ 10ಕ್ಕು ಹೆಚ್ಚು ಪೌರ ಕಾರ್ಮಿಕರಿಗೆ “ಅರಿವೇ ಅಂಬೇಡ್ಕರ” ವಿಶೇಷ ಸಂಚಿಕೆಯನ್ನು ಉಡುಗೊರೆಯಾಗಿ ನೀಡಿದ್ದೇನೆ ಎಂದರು.

1001535987

ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ವೈ ಎಚ್ ನಾಗರಾಜ್, ಮಾತನಾಡಿ ಮುಂದಿನ ದಿನಗಳಲ್ಲಿ ಇಂತಃ ಒಳ್ಳೇಯ ವ್ಯಕ್ತಿತ್ವಯುಳ್ಳ ಜಮೀಲ್ ಅವರ ಮುಂದಿನ ಜೀವನ ಸುಖಮಯವಾಗಿರಲಿ, ಮುಂದಿನ ದಿನಗಳಲ್ಲಿ ಜಮೀಲ್ ಅವರು ಆರ್ ಎಂ ಎಲ್ ನಗರದ ಮಹಾನಗರ ಪಾಲಿಕೆ ಸದಸ್ಯರಾಗಲಿ ನಾವೆಲ್ಲರೂ ಇವರೊಂದಿಗೆ ಇರುತ್ತೇವೆ ಎಂದು ಶುಭ ಕೋರಿದರು.

ನಂತರ ಕಾಂಗ್ರೇಸ್ ನ ಮಹಿಳಾ ಮುಖಾಂಡಾರದ ಶಮಿಮ್ ಬಾನು ಜಮೀಲ್ ಅವರ ಸಾಮಾಜಿಕ ಕಾಳಜಿ ಹಾಗೂ ಕಾರ್ಯಗಳನ್ನು ಶ್ಲಾಘಿಸಿದರು.ಹುಟ್ಟುಹಬ್ಬದ ದಿನ ಹಾಗೂ ಮುಂದಿನ ದಿನಗಳು ಶುಭವಾಗಲಿ ಎಂದು ಹಾರೈಸಿದರು.

1001536068

ಸಿನಿಮಾ ನಟರು ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ದಾನಮ್ ಶುಭಾಶಯಗಳನ್ನ ಕೋರುತ್ತ ಅಂಬೇಡ್ಕರ್ ವಿಚಾರ ಧಾರೆ ಸಂವಿಧಾನ ಆಶಯ ತಿಳಿಸುವ ಒಂದು ವಿಶಿಷ್ಟ ಹುಟ್ಟುಹಬ್ಬದ ಆಚರಣೆ ಮಾಡಿಕೊಂಡ ಜಮೀಲ್ ಮನೋಸ್ಥಿತಿ ಎಲ್ಲರಲ್ಲಿ ಬರಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಜಮೀಲ್ ಅವರ ಆತ್ಮೀಯ ಗೆಳಯರು ಹಾಗೂ ಬಳಗದವರು ಏರ್ಪಡಿಸಿದ್ದ ಹುಟ್ಟುಹಬ್ಬದ ಕಾರ್ಯಕ್ರಮ ಅರ್ಥಪೂರ್ಣವಾಯಿತು ಎಂದು ನೆರದಿದ್ದವರು ಸಂತಸ ವ್ಯಕ್ತಪಡಿಸಿದರು.

1001536024

ಈ ಸಂದರ್ಭದಲ್ಲಿ ಮೊಹಮ್ಮದ್ ಹಮೀದ್, ನಸ್ರುಲ್ಲ, ರಗಿಬ್ ಶರೀಫ್, ವೈ ಎಚ್ ನಾಗರಾಜ್, ಪಿಒ ಶಿವಕುಮಾರ್, ಮೊಹಮ್ಮದ್ ಯೂಸುಫ್, ಅವೈಜ್, ಮುಷೀರ್ ಉಲ್ ಹಕ್, ನಜಿಮಾ ಮಹಿಳಾ ಕಾಂಗ್ರೆಸ್, ಶಮೀಮ್ ಬಾನು ಎಕ್ಸ್ ಕೌನ್ಸಿಲೋರ್, ಇಮ್ರಾನ್, ನಟ ದನಮ್, ಸಮೀಯುಲ್ಲ, ಅಯೂಬ್, ರಹಿಲ್ ವಾರ್ಡ್ ಪ್ರೆಸಿಡೆಂಟ್, ಝುಲ್ಫೇಹಾನ್, ಇರ್ಫಾನ್ ಜಮೀಲ್ ಅವರಿಗೆ ಶುಭ ಕೋರಿದರು

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...