ಎಲ್ಲ ಭಾಷೆಗಳನ್ನು ನಾವು ಗೌರವಿಸಬೇಕು. ಕನ್ನಡ ಭಾಷೆ, ನಮ್ಮ ಮಾತೃಭಾಷೆಯನ್ನು ಪ್ರೀತಿಸಬೇಕು. ಕನ್ನಡದ ಅಭಿಮಾನ, ಕಥೆ ಕವನದ ಮೂಲಕ ಕನ್ನಡವನ್ನು ಉಳಿಸಿ ಬೆಳೆಸುವ ಕರ್ತವ್ಯವನ್ನು ಅನೇಕ ಮಹನೀಯರು ಮಾಡಿದ್ದಾರೆ ಎಂದು ಎಂ ಎಸ್ ಸುಧಾಮಣಿಯವರು ಕನ್ನಡ ಭಾಷೆಯ ಮಹತ್ವ ತಿಳಿಸಿದರು.
ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಅಲ್ ಮಹಮ್ಮದ್ ಪ್ರೌಢಶಾಲೆ, ಉರ್ದು ಶಾಲೆಯಲ್ಲಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಆಯೋಜಿಸಿದ್ದ ವಿಶ್ವ ಮಾತೃ ಭಾಷಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಜನರಿಗೆ ಸಂಪರ್ಕಕ್ಕಾಗಿ, ಮುಂದಿನ ವಿದ್ಯಾಭ್ಯಾಸಕ್ಕಾಗಿ, ಕನ್ನಡ ಭಾಷೆಯ ಅಂಕಗಳಿಗಾಗಿ ಕನ್ನಡ ಓದುವುದಲ್ಲದೆ, ಕಥೆ ಕವನದ ಮೂಲಕ ಮಹನೀಯರು ಕನ್ನಡವನ್ನು ಬೆಳೆಸಿದ್ದಾರೆ. ಅನೇಕ ಜ್ಞಾನಪೀಠ ಪ್ರಶಸ್ತಿಗಳೂ ಕೂಡ ಕನ್ನಡಕ್ಕೆ ಸಿಕ್ಕಿವೆ. ಕನ್ನಡವನ್ನು ಉಳಿಸುವ ಪ್ರಯತ್ನ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ವೇದಿಕೆ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಗಳು ಕನ್ನಡ ಸಾಹಿತ್ಯದ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಿವೆ” ಎಂದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸಮ ಸಮಾಜ ಬಯಸಿದ್ದ ಸಾಕ್ಷಿಪ್ರಜ್ಞೆ ತ್ರಿಪದಿ ಬ್ರಹ್ಮ ಸರ್ವಜ್ಞ; ಪ್ರೊ. ಚಿತ್ತಯ್ಯ ಪೂಜಾರ
ನಿವೃತ್ತ ಕನ್ನಡ ಶಿಕ್ಷಕ ಮುನೀರ್ ಭಾಷ್ ಕನ್ನಡದ ಬಗ್ಗೆ ಮಾತನಾಡಿದರು. ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಸಂಘಟನಾ ಕಾರ್ಯದರ್ಶಿ ಕಾಂತಪ್ಪ ಕನ್ನಡದಲ್ಲಿ ಚುಟುಕುಗಳನ್ನು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಕೆ ನಾಗೇಂದ್ರಪ್ಪ, ಸರ್ಕಾರಿ ರಜತ ಮಹೋತ್ಸವ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಡಾ ರಾಜಶೇಖರ್ ಇದ್ದರು.




