ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಗಡಿ ಭಾಗದ ಯಡೂರು ಅಬ್ಬಿಫಾಲ್ಸ್ನಲ್ಲಿ ಪ್ರವಾಸಿಗರೊಬ್ಬರು ನೀರುಪಾಲಾಗಿರುವ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.
ಬೆಂಗಳೂರಿನಿಂದ ಪ್ರವಾಸಕ್ಜೆ ಬಂದ 12 ಮಂದಿ ಯುವಕರು ಅಬ್ಬಿಫಾಲ್ಸ್ಗೆ ಬಂದಿದ್ದಾರೆ. ಅಬ್ಬಿಫಾಲ್ಸ್ನಲ್ಲಿ ಅಧಿಕ ಮಳೆಯಿದ್ದ ಕಾರಣ ಯಾರೂ ಹೋಗದಂತೆ ಕಂದಕಗಳನ್ನು ಹೊಡೆಯಲಾಗಿದೆ. ಇದನ್ನೂ ಲೆಕ್ಕಿಸದೆ ಯುವಕರು ನೀರಿಗೆ ಇಳಿದಿದ್ದಾರೆ.
ಮಳೆಯಿರುವುದರಿಂದ ನೀರಿಗೆ ಇಳಿದ ಯುವಕರಲ್ಲಿ ಬಳ್ಳಾರಿ ಮೂಲದ ವಿನೋದ್(26) ನೀರು ಪಾಲಾಗಿದ್ದಾನೆ. ಅಧಿಕ ಮಳೆಯಿಂದಾಗಿ ಪಾಚಿ ಕಟ್ಟಿದಂತಾಗಿದ್ದು, ಅದರ ಮೇಲೆ ಕಾಲಿಟ್ಟು ಕಾಲು ಜಾರಿ ನೀರಿಗೆ ಬಿದ್ದಿರುವುದಾಗಿ ತಿಳಿದುಬಂದಿದೆ. ಇವರು ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದಾರೆ.
“ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ, ನಗರ ಪೊಲೀಸರು ಭೇಟಿ ನೀಡಿದ್ದು ಶೋಧ ಕಾರ್ಯ ನಡೆಸಿದ್ದಾರೆ. ಈ ಸ್ಥಳದಲ್ಲಿ ಎಚ್ಚರಿಕೆ ನಾಮಫಲಕ ಇದ್ದರೂ ಕೂಡ ಯುವಕರು ಅದನ್ನು ದಾಟಿ ನೀರಿಗೆ ಇಳಿದು ನೀರು ಪಾಲಾಗಿದ್ದಾನೆ” ಎಂದು ಸ್ಥಳೀಯರಿಂದ ಮಾಹಿತಿ ಲಭ್ಯವಾಗಿದೆ.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಇಸ್ರೋ ಮಹತ್ವದ ಸಾಧನೆ; ವಿಆರ್ಎಲ್ ಪುಷ್ಪಕ್ ಮೂರನೇ ಬಾರಿಗೆ ಯಶಸ್ವಿ ಲ್ಯಾಂಡಿಂಗ್
ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮಲೆನಾಡಿನಲ್ಲಿ ಮಳೆಗಾಲವಿ ಇವುದರಿಂದ ಪ್ರವಾಸಿಗರು ಎಚ್ಚರಿಕೆಯಿಂದ ಇರಬೇಕೆಂದು ತಿಳಿಸಲಾಗಿದೆ.





