ಶಿವಮೊಗ್ಗ, “ಸ್ತನ್ಯಪಾನಕ್ಕೆ ಮೊದಲ ಆದ್ಯತೆ ಹಾಗೂ ನಿರಂತರ ಬೆಂಬಲದ ವ್ಯವಸ್ಥೆ ಎಂಬ ವಾಕ್ಯದೊಂದಿಗೆ ಹಾಗೂ “ಹುಟ್ಟಿದ ಮಗುವಿಗೆ ಎದೆಹಾಲು ಕುಡಿಸುವುದರಿಂದ ಅವರ ಮುಂದಿನ ಭವಿಷ್ಯವು ಉಜ್ವಲವಾಗಿರುತ್ತದೆ ” ಎಂಬ ಘೋಷವಾಕ್ಯದೊಂದಿಗೆ ಈ ವರ್ಷದ ಸ್ತನ್ಯಪಾನ ಸಪ್ತಾಹವನ್ನು ಆಚರಿಸಲಾಗುತ್ತಿದೆ.
ಸುದ್ದಿಗೋಷ್ಠಿಯಲ್ಲಿ ಬಗ್ಗೆ ಮಾಹಿತಿ ನೀಡಿದ ಭಾರತೀಯ ಮಕ್ಕಳ ವೈದ್ಯರ ಸಂಘದ ಜಿಲ್ಲಾ ಅಧ್ಯಕ್ಷ ಡಾ | ಬಿ ಎಲ್ ಯತೀಶ್, ಸಮುದಾಯದಲ್ಲಿ ಸ್ತನ್ಯಪಾನದ ಮಹತ್ವದ ಬಗ್ಗೆ ಅರಿವು ಹಾಗು ಅದರ ಬಗೆಗಿನ ತಪ್ಪು ಕಲ್ಪನೆಯನ್ನು ನಿವಾರಿಸುವ ಸಲುವಾಗಿ ವಿವಿಧ ಶಾಲಾ-ಕಾಲೇಜುಗಳು, ಸಾರ್ವಜನಿಕ ಆಸ್ಪತ್ರೆಗಳು ಹಾಗು ಸಾರ್ವಜನಿಕ ಕಛೇರಿಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ ಎಲ್ಲರಿಗೂ ಜಾಗೃತಿಯನ್ನು ಮೂಡಿಸಲಾಯಿತು ಎಂದರು.
ತಾಯಿಯ ಹಾಲನ್ನು ಕುಡಿಯುವ ಮಗುವಿಗೆ ಅಗತ್ಯಕ್ಕೆ ಅನುಗುಣವಾಗಿ ಬೇಕಾಗುವ ಸಕಲ ಪೌಷ್ಟಿಕಾಂಶಗಳು ದೊರಕುತ್ತದೆ ಇದರಿಂದ ರೋಗನಿರೋಧಕ ಶಕ್ತಿಯು ಹೆಚ್ಚುತ್ತದೆ ಹಾಗೂ ಮಗುವು ಆರೋಗ್ಯಕರವಾಗಿ ಬೆಳೆಯುವುದಕ್ಕೆ ಸಹಕಾರಿಯಾಗುತ್ತದೆ, ಅದು ಮಾತ್ರವಲ್ಲದೆ ತಾಯಿಗೂ ಅನೇಕ ಆರೋಗ್ಯಕರ ಲಾಭಗಳನ್ನು ಒದಗಿಸುತ್ತದೆ ಎಂದರು.
ಎದೆಹಾಲಿನಲ್ಲಿ ಮಗುವಿಗೆ ಪ್ರೋಬಯಾಟಿಕ್ಸ್ ಅಂಶವು ಲಭಿಸುತ್ತದೆ. ಇದರಿಂದ ಮಗುವಿನ ಜೀಣಾರ್ಂಗ ವ್ಯವಸ್ಥೆಯಲ್ಲಿನ ಸೋಂಕುಗಳನ್ನು ತಡೆದು ಆರೋಗ್ಯಕರವಾಗಿ ಇರಿಸುತ್ತದೆ. ಮಗುವಿಗೆ ಶ್ವಾಸಕೋಶಕ್ಕೆ ಸಂಬಂಧಿಸಿದ ಅನೇಕ ಉಸಿರಾಟದ ತೊಂದರೆಗಳು ಬಾರದಂತೆ ತಡೆಯುತ್ತದೆ ಎಂದರು.
ಎದೆಹಾಲು ಉಣಿಸುವ ಮಗುವಿಗೆ ಟೈಪ್ 1 ಹಾಗೂ ಟೈಪ್ 2 ಡಯಾಬಿಟಿಸ್, ದೇಹದಲ್ಲಿ ಅಧಿಕ ಕೊಲೆಸ್ಟಾಲ್ ಕಾಯಿಲೆಗಳು ಇಂತಹ ಕಡಿಮೆಮಾಡುತ್ತದೆ ಹಾಗೂ ಕರುಳಿನ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದರು.
ಇಷ್ಟೆಲ್ಲ ಪ್ರಯೋಜನ ಇರುವ ಸ್ತನ್ಯಪಾನವನ್ನು ಯಾವಾಗ ಬೇಕಾದರೂ ಎಲ್ಲಿ ಬೇಕಾದರೂ ಮಗು ಕೇಳಿದಾಗಲೆಲ್ಲ ನೀಡಲು ನೈಸರ್ಗಿಕವಾಗಿ ಲಭ್ಯವಿರುತ್ತದೆ. ಹಾಗಾಗಿ ಎದೆಹಾಲನ್ನು ಅಮೃತಕ್ಕೂ ಮಿಗಿಲು ಎನ್ನಬಹುದು ಎಂದರು.





