ಶಿವಮೊಗ್ಗ, ಕರ್ನಾಟಕದ ಜನಪ್ರಿಯ ಮಾಜಿ ಮುಖ್ಯಮಂತ್ರಿಗಳು, ಹಿಂದುಳಿದ ವರ್ಗದ ಆಶಾಕಿರಣ, ಬಡವರ ಬಂಧು ಧೀಮಂತ ನಾಯಕರಾದ ದಿ || ಎಸ್ ಬಂಗಾರಪ್ಪ ನವರ ಹುಟ್ಟುಹಬ್ಬದ ಅಂಗವಾಗಿ ಕಾಂಗ್ರೆಸ್ ಮುಖಂಡರಾದ ಎಂ ಶ್ರೀಕಾಂತ್ ರವರ ನೇತೃತ್ವದಲ್ಲಿ,
ಶಿವಮೊಗ್ಗ ನಗರದ ಲಕ್ಷ್ಮಿ ಟಾಕೀಸ್ ವೃತ್ತದಲ್ಲಿ 100 ರಕ್ಕೂ ಹೆಚ್ಚು ಆಟೋ ಚಾಲಕರಿಗೆ ಬಟ್ಟೆಯನ್ನು ನೀಡಿ, ಹಾಗೂ ಊಟವನ್ನು ನೀಡುವ ಮುಖಾಂತರ ಹುಟ್ಟುಹಬ್ಬದ ಆಚರಣೆ ಮಾಡಲಾಯಿತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಿ.ಸಿ.ಸಿ ಬ್ಯಾಂಕ್ ನ ಅಧ್ಯಕ್ಷರು ಆದಂತಹ ಮಂಜುನಾಥ್ ಗೌಡ, ಹಿಂದುಳಿದ ವರ್ಗದ ಅಧ್ಯಕ್ಷರಾದ ರಮೇಶ್ ಶಂಕರ್ಘಟ್ಟ, ಮಾಜಿ ಮಹಾಪೌರರಾದಂತಹ ನಾಗರಾಜ್ ಕಂಕಾರಿ,
ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ರೇಖಾ ರಂಗನಾಥ್ , ಪಾಲಾಕ್ಷಿ , ಕಾಂಗ್ರೆಸ್ ಮುಖಂಡರುಗಳಾದಂತಹ ರಂಗನಾಥ್, ಭಾಸ್ಕರ್, ವಿನಯ್ ತಾಂದಲೆ, ಬಸವರಾಜ್, ಪುರಲ್ಲೇ ಮಂಜು, ನಾಗರಾಜ್ ಕುರುವಳ್ಳಿ, ಹಾಗೂ ಇನ್ನು ಹಲವಾರು ಮುಖಂಡರು ಉಪಸ್ಥಿತರಿದ್ದರು.





