ಶಿವಮೊಗ್ಗ, 2018 ರಲ್ಲಿ ಭದ್ರಾವತಿಯ ಹೃದಯ ಭಾಗವಾದ ಕನಕ ಮಂಟಪ ಮುಂಭಾಗ ಬಿ.ಇ.ಒ ಕಛೇರಿಯ ಪಕ್ಕದಲ್ಲಿ ವಿಶಾಲವಾದ ಬಿ.ಆರ್ ಅಂಬೇಡ್ಕರ್ ಭವನ ನಿರ್ಮಾಣವಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮ ಸಭೆ ಸಮಾರಂಭ ನಡೆಸಲು ವಿದ್ಯಾರ್ಥಿಗಳಿಗೆ, ಸಂಘ ಸಂಸ್ಥೆಗಳಿಗೆ ಹಾಗೂ ಸಾರ್ವಜನಿಕರಿಗೆ ಹೆಚ್ಚು ಉಪಯೋಗವಾಗುತ್ತಿರುವ ಭವನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯಉದ್ಘಾಟಿಸಿ ಮಾನವ ಹಕ್ಕುಗಳ ವೇದಿಕೆ ಮತ್ತು ಅಂಬೇಡ್ಕರ್ ಭವನ ಸಂರಕ್ಷಣಾ ಸಮಿತಿ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, 2018 ರಲ್ಲಿ ಪ್ರಾರಂಭಿಸಿದ ಅಂಬೇಡ್ಕರ್ ಕಾಮಗಾರಿ ಹಲವು ವರ್ಷಗಳಿಂದಲೂ ಆರ್ಥಿಕ ನೆರವು ಇಲ್ಲದೆ. ಪದೇ ಪದೇ ಕಾಮಗಾರಿಯು ನಿಲ್ಲುತ್ತಿದ್ದು, ಈ ಬಗ್ಗೆ ನಿರಂತರ ಹೋರಾಟ ನಡೆಸಿಕೊಂಡುಬಂದು ಭವನ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ.
ರಾಜ್ಯದ 224 ತಾಲ್ಲೂಕಿನಲ್ಲಿಯೇ ವಿಶೇಷವಾದ ಸುಂದರ ಮತ್ತು ವಿಶಾಲವಾದ ಭವನ ಇದಾಗಿದೆ. ಭವನದ ಹಿಂಭಾಗ ಊಟದ ಕೋಣೆ, ವಿಶ್ರಾಂತಿ ಕೊಠಡಿಗಳು ಹಾಗೂ ಪಾರ್ಕಿಂಗ್ ಕಾಮಗಾರಿಯು ಮಾಡಬೇಕಾಗಿದೆ ಎಂದರು.
ಈ ಕಾಮಗಾರಿಗೆ ಸುಮಾರು 200 ಕೋಟಿಗಳನ್ನು ಮಂಜೂರು ಮಾಡಲು ಈಗಾಗಲೇ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಇದರ ಉಸ್ತುವಾರಿಯನ್ನು ನೋಡಿಕೊಳ್ಳಲು 2018 ರಿಂದ ಅಂಬೇಡ್ಕರ್ ಭವನ ಸಂರಕ್ಷಣಾ ಸಮಿತಿಯನ್ನು ರಚಿಸಲಾಗಿದ್ದು, ಪ್ರಧಾನ ಗೌರವ ಅಧ್ಯಕ್ಷರನ್ನಾಗಿ ಹಿರಿಯ ಹೋರಾಟಗಾರ ಡಿ ಸಿ ಮಾಯಣ್ಣನವರು, ಗೌರವ ಅಧ್ಯಕ್ಷರಾಗಿ ಇಂದಿರಾ ಬಿ ಕೃಷ್ಣಪ್ಪ, ವಿಜಯಮ್ಮ ಎನ್ ಗಿರಿಯಪ್ಪ, ರೈತ ಮುಖಂಡ ಕೆ ಟಿ ಗಂಗಾಧರ ಸಮಿತಿಯಲ್ಲಿದ್ದಾರೆ ಎಂದರು.
ಈ ಮಹತ್ವ ಯೋಜನೆಯಾದ ಗ್ರಾಮ ಸಭೆಯನ್ನು 6 ತಿಂಗಳಿಗೊಮ್ಮೆ ನಡೆಸಿ ಎಲ್ಲಾ ಇಲಾಖೆಗಳ ಅಧಿಕಾರಿಗಳೂ ಗ್ರಾಮ ಸಭೆಯಲ್ಲಿ ಕಡ್ಡಾಯವಾಗಿ ಭಾಗವಹಿಸಿ ಎಲ್ಲಾ ಇಲಾಖೆಗಳ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಬೇಕಾಗಿದೆ. ಆದರೂ ಗ್ರಾಮದ ಯಾವುದೇ ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡದೆ ಕನಿಷ್ಟ ಗ್ರಾಮ ಸಭೆಗೂ ಆಹ್ವಾನ ನೀಡದ ಗ್ರಾಮ ಸಭೆಯಲ್ಲಿ ಅನೇಕ ಯೋಜನೆಗಳನ್ನು ಗ್ರಾಮದ ಜನರ ಮುಂದೆಯೇ ಗ್ರಾಮಸ್ಥರೇ ತೀರ್ಮಾನ ಮಾಡುವ ಕಾನೂನುಗಳು ಇದ್ದರೂ ಕಾನೂನುಗಳನ್ನು ಉಲ್ಲಂಘಿಸಿ ಗ್ರಾಮ ಸಭೆಯನ್ನು ತಮ್ಮಿಷ್ಟಕ್ಕೆ ನಡೆಸಿಸುತ್ತಿದ್ದಾರೆ ಎಂದು ದೂರಿದರು.
ಅನೇಕ ಯೋಜನೆಗಳನ್ನು ವಸತಿ ಯೋಜನೆ, ಅಂಬೇಡ್ಕರ್ ನಿಗಮಗಳಂತಹ ಹಲವು ನಿಗಮಗಳು ಅಲ್ಪ ಸಂಖ್ಯಾತ ಇಲಾಖೆ, ಹಿಂದುಳಿದ ವರ್ಗಗಗಳ ಇಲಾಖೆ, ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ, ಮೀನುಗಾರಿಕೆ ಇಲಾಖೆ, ನೂರಾರು ಇಲಾಖೆಗಳಲ್ಲಿ ಇರುವ ಸೌಲಭ್ಯವನ್ನು ಬಡ ಜನರಿಗೆ ನೀಡದೆ ಮೋಸ ಮಾಡುತ್ತಿದ್ದಾರೆ ಎಂದರು. ಡಿ.ಸಿ/ಸಿ.ಎಸ್ ಹಾಗೂ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಹಾಗೂ ತಹಶೀಲ್ದಾರ್ ರವರು ನಿರ್ಲಕ್ಷ್ಯ ವಹಿಸಿ ಮಾನವ ಹಕ್ಕುಗಳ ಹಾಗೂ ಸಂವಿಧಾನ ಹಕ್ಕುಗಳ ಉಲ್ಲಂಘನೆ ಮಾಡುತ್ತಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು.





