ಶಿವಮೊಗ್ಗ ನಗರದ ಬೊಮ್ಮನಕಟ್ಟೆಯಲ್ಲಿ ಲಾಂಗ್ ಹಿಡಿದುಕೊಂಡು ಜನರಿಗೆ ಹೆದರಿಸಲು ಹೊರಟ್ಟಿದ್ದ ಬೋಂಡಾ ಗಣೇಶ ಎಂಬಾತನನ್ನು ವಿನೋಬನಗರ ಪೊಲೀಸರು ಬಂಧಿಸಿ ಆತನವಿರುದ್ಧ INDIAN ARMS ACT, 1959 (U/s-25(1)(A)) ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ.
ಒಂಬತ್ತನೇ ತಾರೀಖು ಈತ ಇಲ್ಲಿನ ನಾಗೇಂದ್ರ ಕಾಲೋನಿ ಬಳಿ ಲಾಂಗ್ ಹಿಡಿದು ಓಡಾಡುತ್ತಿದ್ದ. ಈ ಸಂಬಂಧ ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಗಸ್ತಿನಲ್ಲಿದ್ದ ಎಎಸ್ಐ ರಾಮಪ್ಪ , ಸಿಪಿಸಿ ಮಲ್ಲಪ್ಪ ಮತ್ತು ಸಿಪಿಸಿ ಮನುಶಂಕರ್ ಜೊತೆ ಸ್ಥಳಕ್ಕೆ ತೆರಳಿದ್ದಾರೆ.
ಇತ್ತ ಪೊಲೀಸರನ್ನು ನೋಡುತ್ತಲೇ ಓಡಲು ಯತ್ನಿಸಿದ ಆರೋಪಿಯನ್ನು ಹಿಡಿದು ವಶಕ್ಕೆ ಪಡೆದಿದ್ದಾರೆ. ಆ ಬಳಿಕ ಆತನನ್ನು ಠಾಣೆಗೆ ಕರೆದುಕೊಂಡು ಬಂದು ಎಫ್ಐಆರ್ ದಾಖಲಿಸಿದ್ದಾರೆ.





