ಶಿವಮೊಗ್ಗ | ಭಾರತ ದೇಶ ಇಸಂನಲ್ಲಿ ಮುಳುಗಿದೆ : ಕೆ.ದಯಾನಂದ್

Date:

ಶಿವಮೊಗ್ಗ ಭಾರತ ದೇಶ ಸಂಪೂರ್ಣವಾಗಿ ಇಸಂನಲ್ಲಿ ಮುಳುಗಿದೆ.ಅದು ಬದಲಾಗದಿದ್ದರೆ ದೇಶ ಬದಲಾಗುವುದಿಲ್ಲ ಎಂದು ಕೆ ದಯಾನಂದ್ ನೆನ್ನೆ ದಿವಸ ಹೇಳಿದರು.ಅವರು ಬಹುಮುಖಿಯು 55ನೇ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಈ ಇಸಂ ಇದ್ದರೆ ಜನ ಗ್ರಹಿಸುವ ಶಕ್ತಿ ಕಳೆದುಕೊಳ್ಳುತ್ತಾರೆ.ಯುವ ಜನಾಂಗ ಸೀಡ್ ಲೆಸ್ ಆಗಿದೆ ಎಂದರು. ಇಂದು ಹೊಸದನ್ನು ಏನನ್ನು ಕಂಡುಹಿಡಿಯದೆ ಹಳೆಯ ತಮ್ಮದೇ ಸಿದ್ದಾಂತಕ್ಕೆ ಜೋತು ಬೀಳುತ್ತಾರೆ. ನಮ್ಮ ಬದುಕು ನಾಲ್ಕು ಚಕ್ರದ ಕಾರು ಇದ್ದಂತೆ ಅದರಲ್ಲಿ ವೃತ್ತಿ ಮತ್ತು ಪ್ರವೃತ್ತಿಯ ಎಲ್ಲ ಚಕ್ರಗಳು ಇರುತ್ತವೆ. ಆದರೆ ಒಂದು ಚಕ್ರ ಹಾಳಾದರು ಕಾರು ಮುಂದೆ ಚಲಿಸುವುದಿಲ್ಲ.

ನಮ್ಮ ವೃತ್ತಿ ಬದುಕು ಚೆನ್ನಾಗಿರಬೇಕಾದರೆ ಪ್ರವೃತ್ತಿಯ ಬದುಕು ಚೆನ್ನಾಗಿರಬೇಕು. ವೃತ್ತಿ ಬದುಕಿಗೆ ವೇತನ ಬರುತ್ತದೆ ಅದು ಕೇವಲ ಕರ್ತವ್ಯ ಆದರೆ ಅದನ್ನು ಮೀರಿ ಸಾಮಾಜಿಕ ಸೇವೆ ಮಾಡಿದರೆ ಅದು ಸೇವೆ ಆಗುತ್ತದೆ. ಅದು ನಮ್ಮ ವ್ಯಕ್ತಿತ್ವ ಬೆಳೆಸುತ್ತದೆ. ಯಾವ ಪ್ರವೃತ್ತಿಯಿಂದ ಸಮಾಜಕ್ಕೆ ಅನುಕೂಲ ಆಗುತ್ತದೆಯೊ ಅದು ಉತ್ತಮ ಸಾಮಾಜಿಕ ಪ್ರವೃತ್ತಿಯಾಗುತ್ತದೆ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇಂದು ಸಮಾಜಕ್ಕೆ ಕಾನೂನು ಭಯವಿಲ್ಲ ವೈಯಕ್ತಿಕ ಪ್ರತಿಷ್ಠೆಗಾಗಿ ಯುದ್ದವಾಗುತ್ತಿದೆ. ಮನುಷ್ಯರಿಗೆ ಪ್ರಪಂಚವೇ ಗಡಿಯಾಗಿದೆ ಕನ್ನಡಿಗರು ಇಂದು ವಿಶ್ವದಾದ್ಯಂತ ಹಂಚಿ ಹೋಗಿದ್ದಾರೆ.

ನಮಗೆ ಇಂದು ದೈಹಿಕ ಮತ್ತು ಮಾನಸಿಕ ಸಮಸ್ಯೆ ಹೆಚ್ಚಾಗಿದೆ ಕೌಟುಂಬಿಕ ಸಮಸ್ಯೆ ಹೆಚ್ಚಾಗಿದ್ದು ಇಂದು ಯುವಕರು ಬಹುಬೇಗ ವಿಚ್ಚೇದನ ಹೊಂದುತ್ತಾರೆ. ಹಳ್ಳಿಗಳ ಬದುಕು ದುಸ್ತರವಾಗಿದೆ. ಶ್ರಮಪಡದೆ ಹಣ ಪಡೆಯುವ ಮಾರ್ಗವನ್ನು ಯುವಕರು ಯೋಚಿಸುತ್ತಾರೆ.

ಇಂದು ರಾಜಕೀಯ ವ್ಯಕ್ತಿಗಳಿಗಿಂತ ಅಧಿಕಾರಿಗಳು ಹೆಚ್ಚು ಹಾಳಾಗಿದ್ದಾರೆ‌ ಎಂದರು. ಆದರೆ ಅವರು ಬದಲಾಗಲೇ ಬೇಕಾಗಿದೆ. ಹಾಗಾಗಿ ನಾನು ನನ್ನ ಬದುಕಿನ ಕತೆಯನ್ನು ಯುವಕರಿಗೆ ಆಗಾಗ ಭಾಷಣದಲ್ಲಿ ಹೇಳುತ್ತಿದ್ದೆ. ಮುಂದೆ ಅದನ್ನೆ ಹಾದಿಗಲ್ಲು ಎಂಬ ಆತ್ಮಕತೆ ಬರೆದೆ. ಈಗಾಗಲೇ ಅದು 13 ಮುದ್ರಣ ಕಂಡಿದೆ.

2,500ಪುಸ್ತಕಗಳನ್ನು ಉಚಿತವಾಗಿ ಹಾಸ್ಟೆಲ್ ಗಳಿಗೆ ನೀಡಲಾಗಿದೆ. ಇದರ ಉದ್ದೇಶ ಬಡ ಹುಡುಗರು ಓದಿ ಎಷ್ಟೇ ಕಷ್ಟವಿದ್ದರು ಕೂಡ ಪ್ರಯತ್ನ ಶ್ರಮ ಹಾಕಿದರೆ ಯಾರು ಬೇಕಾದರೂ ಕಮೀಷನರ್ ಆಗಬಹುದು ಎಂದರು.

ಬಹುಮುಖಿಯ ಡಾ.ನಾಗಭೂಷಣ್ ರವರು ಕಾರ್ಯಕ್ರಮದ ಸಂಪೂರ್ಣ ನಿರೂಪಣೆ ಮಾಡಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...