ಶಿವಮೊಗ್ಗ, ನವೆಂಬರ್ 1ರ ಇಂದು ಕನ್ನಡ ರಾಜ್ಯೋತ್ಸವದ ಅಂಗವಾಗಿ ಶಿವಮೊಗ್ಗ ನಗರದಲ್ಲಿ ವಿವಿಧ ಸಂಘ-ಸಂಸ್ಥೆಗಳು ಮತ್ತು ಕನ್ನಡ ಪರ ಸಂಘಟನೆಗಳು ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ನಗರ ಜೆಡಿ(ಎಸ್) ಅಧ್ಯಕ್ಷ ದೀಪಕ್ ಸಿಂಗ್ ಪಾಲ್ಗೊಂಡರು.
ವಿನೋಬನಗರದ ಶ್ರೀ ಮಾತೃ ಭೂಮಿ ಕನ್ನಡ ಯುವಕರ ಸಂಘದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಕ್ಕಳಿಗೆ ಸಿಹಿ ಹಾಗೂ ಅನ್ನ ಸಂತರ್ಪಣೆ ನೆರವೇರಿಸಿ, ಕನ್ನಡ ನಾಡು-ನುಡಿ-ಜಲ-ಸಂಸ್ಕೃತಿಯ ಸಂರಕ್ಷಣೆಗಾಗಿ ತ್ಯಾಗ-ಬಲಿದಾನ ಮತ್ತು ಹೋರಾಟ ನಡೆಸಿದ ಮಹನೀಯರನ್ನು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮಹಾನಗರ ಪಾಲಿಕೆ ಮಾಜಿ ಸದಸ್ಯ ದೀಪಕ್ ಸಿಂಗ್, “ಕನ್ನಡಿಗರಾಗಿ ನಮ್ಮೆಲ್ಲರ ಮೇಲೆ ನಾಡಿನ ಸಂಸ್ಕೃತಿ ಮತ್ತು ಭಾಷೆಯನ್ನು ಕಾಪಾಡುವ ಜವಾಬ್ದಾರಿ ಇದೆ. ಇದಕ್ಕಾಗಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು” ಎಂದು ಕರೆ ನೀಡಿದರು.
ರಾಜ್ಯೋತ್ಸವದ ಸಂದೇಶವನ್ನು ಎತ್ತಿ ಹಿಡಿದ ಅವರು, ಯುವಕರು ಮತ್ತು ಮಕ್ಕಳಲ್ಲಿ ಕನ್ನಡ ಪ್ರೀತಿ ಬೆಳೆಸುವಂತೆ ಒತ್ತಾಯಿಸಿದರು.
ಸಂಘಟನೆಗಳು ಹಮ್ಮಿಕೊಂಡಿದ್ದ ಈ ಕಾರ್ಯಕ್ರಮಗಳು ನಗರದಲ್ಲಿ ಕನ್ನಡ ಉತ್ಸವದ ಸಡಗರಕ್ಕೆ ಮತ್ತಷ್ಟು ಬಣ್ಣ ತಂದಿದ್ದವು.ರಾಜ್ಯೋತ್ಸವದ ಈ ಆಚರಣೆಗಳು ಶಿವಮೊಗ್ಗದಲ್ಲಿ ಕನ್ನಡ ಒಗ್ಗಟ್ಟು ಮತ್ತು ಸಾಂಸ್ಕೃತಿಕ ಅರಿವನ್ನು ತೋರಿಸುತ್ತಿವೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಪಾಲಕ್ಷಿ, ಮಾಲತೇಶ್, ಸಂಘದ ಅಧ್ಯಕ್ಷ ಅಶೋಕ್, ಪ್ರಮುಖರಾದ ಸುರೇಶ್, ವೆಂಕಟೇಶ್, ಆನಂದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.





