ಶಿವಮೊಗ್ಗ | ಲಗಾನ್ ಸ್ಕೈಲೇನ್ ಸಂಸ್ಥೆಯ ಅಕ್ರಮ ಕಟ್ಟಡ ನಿರ್ಮಾಣ ಆರೋಪ : ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಪರಿಶೀಲನೆ

Date:

ಶಿವಮೊಗ್ಗ ನಗರದ ಗೋಪಾಳದಲ್ಲಿರುವ ಲಗಾನ್ ಸ್ಕೈಲೇನ್ ಸಂಸ್ಥೆಯು ನಡೆಸುತ್ತಿರುವ ಕಟ್ಟಡ ನಿರ್ಮಾಣ ಗೊಂದಲದಿಂದ ಕೂಡಿದೆ. ಇಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪ್ರಿಯಾ ದೊಡ್ಡಗೌಡರು ಮತ್ತು ಆರ್ ಐ ಅವರ ಸಮ್ಮುಖದಲ್ಲಿ ಅಳತೆ ನಡೆದಿದೆ. ಅಳತೆ ನಡೆದ ವೇಳೆ ಲಗಾನ್ ಸ್ಕೈಲೈನ್ ಮಾಲೀಕರಾಗಲಿ, ಪಾರ್ಟರ್ನ್ ಆಗಲಿ ಅಥವಾ ಜಿಪಿಎ ಹೋಲ್ಡರ್ ಆಗಲಿ ಜಾಗದಲ್ಲಿ ಹಾಜರಾಗದೆ ಇರುವುದು ಪ್ರಕರಣ ಕುತೂಹಲಕ್ಕೆ ಕಾರಣವಾಗಿದೆ.

ಲಗಾನ ಸ್ಕೈಲೈನ್ ಸಂಸ್ಥೆಯು ಕೆರೆ ಬಫರ್ ಜೋನ್ ನನ್ನ ಒತ್ತುವರಿ ಮಾಡಿಕೊಂಡು ಸುಮಾರು 26 ಅಡಿ ಆಳ ಗುಂಡಿ ತೋಡಿ ಮಣ್ಣನ್ನ ಮಾರಾಟ ಮಾಡಿರುವ ಬಗ್ಗೆ ಮತ್ತು ಅಲ್ಲಿ ಪತ್ತೆಯಾದ ಕಲ್ಲು ಪತ್ತೆಯಾದರೂ ಸಂಬಂಧಪಟ್ಟ ಇಲಾಖೆಗೆ ಮಾಹಿತಿಯೂ ತಿಳಿಸಿಲ್ಲ ಎಂಬ ಆರೋಪ ಕೇಳಿ ಬಂದಿತ್ತು.

1001958359

ಈ ಆರೋಪದ ಹಿನ್ನಲೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಇಂದು ಅಳತೆ ನಡೆದಿದೆ. ಅಳತೆ ನಡೆದ ವೇಳೆ ದೂರುದಾರರು, ಸಂಸ್ಥೆಯ ಇಂಜಿನಿಯರ್ ಹಾಜರಿದ್ದಿದ್ದು ಕಂಡು ಬಂದರೆ ಮಾಲೀಕರಾಗಲಿ, ಪಾಲುದಾರರಾಗಲಿ ಅಥವಾ ಜಿಪಿಎ ಹೋಲ್ಡರ್ ಆಗಲಿ ಹಾಜರಿರಲಿಲ್ಲ. ಸಂಸ್ಥೆಯ ಮಾಲೀಕರಿಗೆ 15 ದಿನಗಳ ಹಿಂದೆ ನೋಟೀಸ್ ನೀಡಿ ಸರ್ವೆಗೆ ಹಾಜರಾಗುವಂತೆ ಸೂಚಿಸಿದರೂ ಮಾಲೀಕರು ಹಾಜರಾಗದಿರುವುದು ಕುತೂಹಲ ಮೂಡಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದು ಒಂದು ರೀತಿಯ ಮಾಲೀಕರ ನಿರ್ಲಕ್ಷತನವೇ ಎಂದು ಹೇಳಬಹುದಾಗಿದೆ. ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಏನು ಮಾಡಲಿದೆ ಕಾದು ನೋಡಬೇಕಿದೆ. ಮಾಲೀಕರ ನಿರ್ಲಕ್ಷತನವನ್ನ ಮಾಫಿ ಮಾಡಿ ಕಾನೂನು ಉಲ್ಲಂಘಿಸಿ ನಿರ್ಮಿಸಲಾಗುತ್ತಿರುವ ಕಟ್ಟಡಕ್ಕೆ ಮಣೆ ಹಾಕುತ್ತಾರೋ ಅಥವಾ ಕಾನೂನು ಉಲ್ಲಂಘಿಸಿ ನಿರ್ಮಿಸುವವರಿಗೆ ಖಡಕ್ ವಾರ್ನಿಂಗ್ ನೀಡುತ್ತದೋ ಕಾದು ನೋಡಬೇಕಿದೆ.

ಸರ್ವೆ ನಂಬರ್ 15 ರಲ್ಲಿ ಕೆರೆ ಬರಲಿದ್ದು ಈ ಕೆರೆಯನ್ನ 2004 ರಲ್ಲಿ ಡಿಸಿ ನೋಟಿಫಿಕೇಷನ್ ಹಾಕಿ ಕೆರೆಯ ಜಾಗವನ್ನ ಕ್ಲಬ್ ವೊಂದಕ್ಕೆ, ಸಾರ್ವಜನಿಕ ರಸ್ತೆಗೆ ಅನುಕೂಲವಾಗುವಂತೆ ಕೆರೆ ಜಾಗವನ್ನ ಒತ್ತುವರಿ ಮಾಡಿಕೊಳ್ಳಲಾಗಿದೆ. ಆದರೆ ಅದರ ಬಫರ್ ಜೋನ್ ಕಬಳಿಸುವಂತಿಲ್ಲ ಎಂಬ ನಿಯಮವಿದೆ. ದಿಶಾಂಕ್ ನ್ನ ನಿರ್ಮಾಣಗೊಳ್ಳುತ್ತಿರುವ ಕಟ್ಟಡದಲ್ಲಿ ನಿಂತು ಒಪನ್ ಮಾಡಿದರೆ ಸುಮಾರು 10 ಅಡಿ ಕೆರೆ ದಂಡೆಯ ಜಾಗವೇ ಒತ್ತುವರಿಯಾಗಿದೆ. ಇನ್ನು ಬಫರ್ ಜೋನ್ ಬಿಟ್ಟಿಲ್ಲವೆಂಬುದು ದೂರುದಾರರ ಆರೋಪವಾಗಿದೆ.

ಇಲ್ಲಿನ ಮಣ್ಣನ್ನ ಪಕ್ಕದಲ್ಲಿ ಹಾಕಲಾಗಿವೆ ಎಂದು ಅಲ್ಲಿನ ಇಂಜಿನಿಯರ್ ತೋರಿಸುತ್ತಾನೆ. ಜಾಗದಲ್ಲಿ ತೋಡಲಾದ ಗುಂಡಿಗೂ ಅದರ ಪಕ್ಕದಲ್ಲಿಯ ಮಣ್ಣು ಸಂಗ್ರಹಕ್ಕೂ ಅಜಗಜಾಂತರ ವ್ಯತ್ಯಾಸ ಕಂಡುಬರುತ್ತಿದೆ. ಒಟ್ಟಿನಲ್ಲಿ ಕಾನೂನು ಬಾಹಿರ ಕಟ್ಟಡ ನಿರ್ಮಾಣವಾಗುತ್ತಿದೆ ಎಂಬುದು ದೂರುದಾರರ ಆರೋಪವಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...