ಶಿವಮೊಗ್ಗ, ತುಂಗಾ ನಗರ ಪೊಲೀಸ್ ಠಾಣೆಯ ವ್ಯಾಪ್ತಿಗೆ ಒಳಪಡುವ ದ್ರೌಪದಮ್ಮ ಕನ್ನಡ ಯುವಕರ ಸಂಘದ ಗಣಪತಿ ಮೆರವಣಿಗೆಯಲ್ಲಿ ಮುಸಲ್ಮಾನ್ ಬಾಂಧವರು ಭಾವೈಕತೆ ಮೆರೆದಿದ್ದಾರೆ.
ಜೆಪಿ ನಗರದ ಅಜಂ ಮಸೀದಿ ಕಮಿಟಿಯವರಾದ ಸೈಫುಲ್ಲಾ ಹಾಗೂ ದರ್ಗಾ ಕಮಿಟಿಯ ಸತ್ತಾರ್ ಸಾಬ್ ಹಾಗೂ ಇತರೆ ಮುಸ್ಲಿಂ ಮುಖಂಡರು ಗಣಪತಿಗೆ ಹೂವಿನ ಹಾರ ಹಾಕಿ ನಾವು ನಿಮ್ಮ ಹಬ್ಬದಲ್ಲಿ ಭಾಗಿ ಎಂದು ಭಾವೈಕತೆಗೆ ಸಾಕ್ಷಿಯಾದರು.
ಈ ಸಂದರ್ಭದಲ್ಲಿ ಗಣಪತಿ ಪ್ರತಿಷ್ಟಾನದ ಅಧ್ಯಕ್ಷರಾದ ರಾಮು ಮುಖಂಡರಾದ ವೆಂಕಟೇಶ್ ವಸಂತ್ ,ಭಾಸ್ಕರ್ ಮತ್ತು ತುಂಗಾನಗರದ ಪೋಲಿಸ್ ಇನ್ಸ್ಪೆಕ್ಟರ್ ಕೆ.ಟಿ.ಗುರುರಾಜ ಮತ್ತು ಸಿಬ್ಬಂದಿಯವರು ಉಪಸ್ಥಿತರಿದ್ದರು.





