ಶಿವಮೊಗ್ಗ | ಹುಲಿ ಸಿಂಹಧಾಮಕ್ಕೆ ಶೀಘ್ರದಲ್ಲೇ ಹೊಸ ಅತಿಥಿಗಳ ಆಗಮನ

Date:

ಶಿವಮೊಗ್ಗ, ಪ್ರಾಣಿಗಳ ವಿನಿಮಯ ಕಾರ್ಯಕ್ರಮದಲ್ಲಿ ತಾಲೂಕಿನ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮಕ್ಕೆ ಮೂರು ಹುಲಿ ಮತ್ತು ಎರಡು ಸಿಂಹಗಳು ಆಗಮಿಸಲಿವೆ. ಇದರಿಂದ ಹುಲಿ ಮತ್ತು ಸಿಂಹಧಾಮ ಇನ್ನಷ್ಟು ಜನಾಕರ್ಷಣೆಯ ಕೇಂದ್ರವಾಗಲಿದೆ.

ತ್ಯಾವರೆಕೊಪ್ಪ ಹುಲಿ, ಸಿಂಹಧಾಮ ರಾಜ್ಯದ ಪ್ರಮುಖ ಸಫಾರಿ ಹಾಗೂ ಮೃಗಾಲಯವಾಗಿದ್ದು ಇಲ್ಲಿ ಹುಲಿ, ಸಿಂಹಗಳ ಸಫಾರಿ ಇದ್ದು, ನಂತರದ ದಿನಗಳಲ್ಲಿ ಕಾಡುಕೋಣ, ಜಿಂಕೆಗಳ ಸಫಾರಿಯನ್ನೂ ಪ್ರಾರಂಭಿಸಲಾಗಿದೆ.

ದೇಶದ ಮೃಗಾಲಯಗಳ ನಡುವೆ ಪ್ರಾಣಿಗಳ ವಿನಿಮಯ ನಡೆಯುತ್ತಿರುತ್ತದೆ. ಕೆಲವು ಮೃಗಾಲಯಗಳು ತಮ್ಮಲ್ಲಿರುವ ಹೆಚ್ಚುವರಿ ಪ್ರಾಣಿಗಳ ವಿವರ ಹಂಚಿಕೊಳ್ಳುತ್ತವೆ. ಜೊತೆಗೆ, ತಮಗೆ ಬೇಕಿರುವ ಪ್ರಾಣಿಗಳ ಪಟ್ಟಿ ನೀಡುತ್ತವೆ. ನಂತರ ಮೃಗಾಲಯಗಳ ನಡುವೆ ಒಪ್ಪಂದ ನಡೆದು ಪ್ರಾಣಿಗಳ ವಿನಿಮಯ ನಡೆಯುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದರಂತೆ, ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮಕ್ಕೆ ಮೂರು ಹುಲಿ ಹಾಗೂ ಎರಡು ಸಿಂಹಗಳು ಆಗಮಿಸುತ್ತಿವೆ. ಇದಕ್ಕಾಗಿ ಎರಡು ಮೃಗಾಲಯಗಳ ಮುಖ್ಯಸ್ಥರು ಹಾಗೂ ವೈದ್ಯರು ಅಲ್ಲಿನ ಮೃಗಾಲಯಕ್ಕೆ ಹೋಗಿ ಪ್ರಾಣಿಗಳ ಆರೋಗ್ಯ ಗಮನಿಸಿಕೊಂಡು ಬರುತ್ತಾರೆ. ಪ್ರತ್ಯೇಕ ಗೇಜ್​ಗಳನ್ನು ನಿರ್ಮಿಸಿ ಪ್ರಾಣಿಗಳ ವಿನಿಮಯ ಮಾಡಲಾಗುತ್ತದೆ.ಶಿವಮೊಗ್ಗದ ಹುಲಿ ಮತ್ತು ಸಿಂಹಧಾಮದಲ್ಲಿ ನಾಲ್ಕು ಹೆಣ್ಣು ಹುಲಿಗಳಿವೆ. ಈಗ ಮತ್ತೆ ಮೂರು ಹುಲಿಗಳು ಬಂದರೆ ಒಟ್ಟು 7 ಹುಲಿಗಳಾಗುತ್ತವೆ. ಇಲ್ಲಿಂದ ಎರಡು ಸಿಂಹಗಳು ಹೋಗಿ ಎರಡು ಸಿಂಹಗಳು ಆಗಮಿಸಲಿವೆ.‌

1002005414

ತ್ಯಾವರೆಕೊಪ್ಪ ಹುಲಿ ಸಿಂಹಧಾಮದಿಂದ ಹೋಗುವ ಪ್ರಾಣಿಗಳು

ತ್ಯಾವರೆಕೊಪ್ಪ ಹುಲಿ ಸಿಂಹಧಾಮದಿಂದ 2 ಸಿಂಹ, 2 ನರಿ, 1 ಕರಡಿ , 2 ಆಸ್ಟ್ರಿಚ್ ಪಕ್ಷಿಗಳು ಹಾಗೂ 4 ಕಾಡುಕೋಣಗಳು ಔರಂಗಾಬಾದ್ ಹಾಗೂ ಇಂದೋರ್ ಮೃಗಾಲಯಕ್ಕೆ ರವಾನೆಯಾಗಲಿವೆ.ತಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದ ಕಾರ್ಯಕಾರಿ ನಿರ್ದೇಶಕರಾದ ಅಮರಾಕ್ಷರ ಅವರು ಪ್ರತಿಕ್ರಿಯಿಸಿ, “ಪ್ರಾಣಿಗಳ ವಿನಿಮಯ ಯೋಜನೆಯಡಿ ಹುಲಿ ಮತ್ತು ಸಿಂಹಗಳನ್ನು ತರುತ್ತಿದ್ದೇವೆ. ಔರಂಗಾಬಾದ್ ಹಾಗೂ ಇಂದೋರ್ ಮೃಗಾಲಯದಿಂದ ನಮಗೆ ಪ್ರಾಣಿಗಳ ಬರುವಿಕೆ ಆಗುತ್ತದೆ. ಇಂದೋರ್ ಮೃಗಾಲಯದಿಂದ ಎರಡು ಸಿಂಹಗಳು ಬರುತ್ತಿವೆ.

ಅದೇ ರೀತಿ ಔರಂಗಾಬಾದ್ ಮೃಗಾಲಯದಿಂದ ಮೂರು ಹುಲಿಗಳು ಬರುತ್ತಿವೆ. ಇದರಲ್ಲಿ ಎರಡು ರಾಯಲ್ ಬೆಂಗಾಲ್, ಒಂದು ಬಿಳಿ ಹುಲಿ ಸೇರಿದೆ. ಇದಕ್ಕಾಗಿ ನಾವು ನಮ್ಮ ಮೃಗಾಲಯದಿಂದ ನಾಲ್ಕು ಕಾಡುಕೋಣಗಳು ಹಾಗೂ ಎರಡು ಆಸ್ಟ್ರಿಚ್ ಪಕ್ಷಿ, ಎರಡು ಸಿಂಹ, ಎರಡು ನರಿ ಹಾಗೂ ಕರಡಿಗಳನ್ನು ನೀಡುತ್ತಿದ್ದೇವೆ” ಎಂದು ತಿಳಿಸಿದರು.

“ಕಳೆದ ಏಪ್ರಿಲ್‌ನಲ್ಲಿ​ ನಾವು ಮಾತುಕತೆ ಪ್ರಾರಂಭಿಸಿದ್ದೆವು. ಪ್ರಾಣಿಗಳು ಬಹುದೂರದವರೆಗೂ ಪ್ರಯಾಣ ಮಾಡಬೇಕಾಗಿರುವುದರಿಂದ ಸಾಗಣೆಗೆ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಆಗಸ್ಟ್​ ಮಧ್ಯದಲ್ಲಿ ಔರಂಗಾಬಾದ್​ಗೆ ನಾನು ಮತ್ತು ಸಿಂಹಧಾಮದ ವೈದ್ಯರು ಇಲ್ಲಿಗೆ ಬರಲಿರುವ ಪ್ರಾಣಿಗಳ ಆರೋಗ್ಯದ ಕುರಿತು ಮಾಹಿತಿ ಪಡೆಯಲು ತೆರಳುತ್ತಿದ್ದೇವೆ.

ಅದೇ ರೀತಿ ಅಲ್ಲಿನವರೂ ನಮ್ಮ ಹುಲಿ ಮತ್ತು ಸಿಂಹಧಾಮಕ್ಕೆ ಆಗಮಿಸುತ್ತಿದ್ದಾರೆ. ಪ್ರಾಣಿಗಳ ಆರೋಗ್ಯದ ಮಾಹಿತಿ ಪಡೆದ ನಂತರ ಸೆಪ್ಟೆಂಬರ್ ಮೊದಲ ವಾರದಲ್ಲಿ ಪ್ರಾಣಿಗಳು ಬರಲಿವೆ” ಎಂದು ಹೇಳಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...