ಶಿವಮೊಗ್ಗ, ರೈಲು ಹತ್ತುವ ಭರದಲ್ಲಿ ಪ್ರಯಾಣಿಕರೊಬ್ಬರು ಶಿವಮೊಗ್ಗ ನಿಲ್ದಾಣದ ಪ್ಲಾಟ್ಫಾರಂನಲ್ಲೇ ಮರೆತು ಹೋಗಿದ್ದ ಬ್ಯಾಗನ್ನು ರೈಲ್ವೆ ಪೊಲೀಸ್ ರಕ್ಷಿಸಿದ್ದಾರೆ.
ವಾರಸುದಾರರನ್ನು ಪತ್ತೆ ಮಾಡಿ ಬ್ಯಾಗ್ ಒಪ್ಪಿಸಿದ್ದಾರೆ.ಸೆ.28ರ ರಾತ್ರಿ ಬೆಂಗಳೂರಿಗೆ ತೆರಳುವ ರೈಲು ಹತ್ತುವಾಗ ಶಿವಮೊಗ್ಗದ ನಾಗರಾಜ್ ಎಂಬುವವರು ಬ್ಯಾಗ್ ಮರೆತು ಹೋಗಿದ್ದರು.
ಪ್ಲಾಟ್ಫಾರಂನಲ್ಲಿ ಭದ್ರತಾ ಜವಾಬ್ದಾರಿ ನಿಭಾಯಿಸುತ್ತಿದ್ದ ರೈಲ್ವೆ ಪೊಲೀಸ್ ಸಿಬ್ಬಂದಿ ಚಂದ್ರಪ್ಪ ಎಂಬುವವರು ಬ್ಯಾಗ್ ವಶಕ್ಕೆ ಪಡೆದಿದ್ದರು. ವಾರಸುದಾರರನ್ನು ಪತ್ತೆ ಮಾಡಿ ಬ್ಯಾಗ್ ಒಪ್ಪಿಸಿದ್ದಾರೆ.
ಬ್ಯಾಗಿನಲ್ಲಿ ₹18,000 ಮೌಲ್ಯದ ಕಾಲು ಗೆಜ್ಜೆ , ಒಂದು ಕೈಗಡಗ, ಬಟ್ಟೆ ಇದ್ದವು.





