ಶಿವಮೊಗ್ಗ ಜಿಲ್ಲಾ ಅಹಿಂದ ಯುವ ಘಟಕ ಹಾಗೂ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಸೊರಬ ಇವರ ವತಿಯಿಂದ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಪೊಲೀಸ್ ಠಾಣೆಯಲ್ಲಿ ರಕ್ಷಾ ಬಂಧನ ಹಬ್ಬವನ್ನು ಪೊಲೀಸ್ ಸಿಬ್ಬಂದಿಗಳಿಗೆ ರಾಕೀ ಕಟ್ಟುವ ಮೂಲಕ ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ವಕೀಲರು ಹಾಗೂ ಅಹಿಂದ ಯುವ ಘಟಕ ಶಿವಮೊಗ್ಗದ ಅಧ್ಯಕ್ಷರು ಆದ ರಾಜೇಶ್ ಸಿ ಕಾನಡೆ ಅವರು ಮಾತನಾಡಿ ರಕ್ಷಾ ಬಂಧನ ಎಂದರೆ ಒಡಹುಟ್ಟಿದ ಸಹೋದರರಿಗೆ ಮಾತ್ರ ಸೀಮಿತವಾಗಿಲ್ಲ ರಕ್ಷಾ ಬಂಧನ ವು ನಮಗೆ ರಕ್ಷಣೆ ಕೊಡುವಂತಹ ಪ್ರತಿಯೊಬ್ಬರಿಗೂ ಸಂಬಂಧಿಸಿದ್ದು ಪೋಲಿಸ್ ಇಲಾಖೆಯವರು ನಮಗೆ ಯಾವುದೇ ಜನಾಂಗ ಧರ್ಮ ಲಿಂಗ ಜಾತಿ ಎಂಬ ತಾರತಮ್ಯವಿಲ್ಲದೆ ನಮಗೆ ರಕ್ಷಣೆ ನೀಡುವ ಹೊರೆಯನ್ನು ಹೊತ್ತಿದ್ದಾರೆ.
ಆದ್ದರಿಂದ ಖಾಕಿಗೆ ರಾಕಿ ಕಟ್ಟುವ ಮೂಲಕ ರಕ್ಷಾಬಂಧನ ಹಬ್ಬವನ್ನು ಆಚರಿಸರಿಸಿದ್ದೇವೆ. ಈ ರೀತಿಯಾಗಿ ನಾವು ಪೋಲಿಸ್ ಇಲಾಖೆಗೆ ಧನ್ಯವಾದಗಳನ್ನು ತಿಳಿಸಿದ್ದೇವೆ ಎಂದರು.

ಈ ಸಮಯದಲ್ಲಿ ವಿದ್ಯಾರ್ಥಿಗಳಾದ ಮಹಾಲಕ್ಷ್ಮಿ ಎಸ್,ಶಿಲ್ಪಾ ಡಿ,ಸಿಂಧು ಜಿ, ರಕ್ಷಿತಾ ಎನ್, ಸ್ವಪ್ನಾ ಆರ್, ಸೃಷ್ಟಿ ಜಿ, ದೀಪಾ ಎನ್, ಸೃಜನ, ಕೋಕಿಲಾ, ಭಾವನಾ, ಸುಶ್ಮಿತಾ, ಸ್ಪಂದನ ಮುಂತಾದವರು ಉಪಸ್ಥಿತರಿದ್ದರು.





