ಸಿಂಧನೂರು ನಗರದ ಮಹಾನಂದ ಇಂಡಸ್ಟ್ರಿಸ್ 4ನೇ ಮೈಲ್ ಕ್ಯಾಂಪ್ ಹತ್ತಿರ ಅನಧಿಕೃತ ಫರ್ನಿಚರ್, ಅಲಮಾರಿ ತಯಾರಿಕಾ ಘಟಕವನ್ನು ಬಂದ್ ಮಾಡಿ ಸಂಬಂಧಪಟ್ಟವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಪರಿಸರ ಕಾಪಾಡಿ ಜನರ ಆರೋಗ್ಯ ಉಳಿಸಬೇಕು ಎಂದು ಪರಿಸರ ಮಾಲಿನ್ಯ ಹೋರಾಟ ಸಮಿತಿ ಘಟಕದ ವತಿಯಿಂದ ತಹಶೀಲ್ದಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕೆಲವು ತಿಂಗಳ ಹಿಂದೆ ಜಿಲ್ಲಾ ಸಹಾಯಕ ಪರಿಸರ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದಾಗ ಅಧಿಕಾರಿಗಳು ಎಚ್ಚೆತ್ತುಕೊಂಡು 22.09.2025 ರಂದು ಸ್ಥಳ ಪರಿಶೀಲನೆ ನಡೆಸಿ, ವರದಿಯನ್ನು ಸಂಬಂಧಪಟ್ಟವರಿಗೆ ನೀಡಿದ್ದಾರೆ. ಹಾಗೆಯೇ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸಿಂಧನೂರು ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆದಿದ್ದರು.
ಸ್ಥಳೀಯ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಮೇಲಾಧಿಕಾರಿಗೆ ವರದಿ ಸಲ್ಲಿಸಿದ್ದಾರೆ. ವರದಿಯ ಪ್ರಕಾರ ಕಾನೂನು ವಿರೋಧಿ, ಪರಿಸರ ವಿರೋಧಿ, ಸಾರ್ವಜನಿಕ ವಿರೋಧಿ, ಮಹಾನಂದ ಇಂಡಸ್ಟ್ರಿಜ್ ಉತ್ಪಾದನ ಘಟಕವು ಕಾನೂನು ಬಾಹಿರವಾಗಿದೆ ಎಂದು ತಿಳಿಸಿದರು ಕಂಪನಿ ಹೀಗೆ ಮುಂದುವರೆದಿದೆ ಎಂದು ಸಂಘಟನಾಕಾರರು ಆಗ್ರಹಿಸಿದರು.
ಕೂಡಲೇ ಮಹಾನಂದ ಇಂಡಸ್ಟ್ರಿಜ್ ನ್ನು ಬಂದ್(ಸಿಜ್) ಮಾಡಿ ಜನರ ಆರೋಗ್ಯ ರಕ್ಷಣೆ ಹಾಗೂ ಕಾನೂನುಗಳನ್ನು ಕಾಪಾಡಬೇಕೆಂದು ಪ್ರತಿಭಟನಾಕಾರರು ಮನವಿ ಮೂಲಕ ತಿಳಿಸಿದರು. ಹೀಗೆ ನಿರ್ಲಕ್ಷ್ಯ ಮುಂದುವರೆಸಿದರೆ 10-15 ದಿನಗಳ ಒಳಗೆ ಬೃಹತ್ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಲಿಂಗಸೂಗೂರು | ಕೃಷಿ ಉಪ ನಿರ್ದೇಶಕರ ಕಚೇರಿ ಸ್ಥಳಾಂತರ ಆದೇಶ ರದ್ದುಗೊಳಿಸಲು ಪ್ರತಿಭಟನೆ
ಈ ಸಂಧರ್ಭದಲ್ಲಿ ಜಿಲ್ಲಾ ಸಂಚಾಲಕ ಎಂ ಗಂಗಾಧರ್, ಕನಕಪ್ಪ ಮುರಣಿ, ಹೆಚ್ ಆರ್ ಹೊಸಮನಿ, ಹನುಮಂತಪ್ಪ ಗೋಡಿಹಾಳ, ಬಸವರಾಜ ಗೋಡಿಹಾಳ, ಅಡಿವೆಪ್ಪ, ಧರಗಯ್ಯ, ಮುದಿಯಪ್ಪ, ಗೌಸ್ ಖಾನ್, ವೆಂಕೋಬ ನಾಯಕ ಸೇರಿದಂತೆ ಇತರರು ಇದ್ದರು.




