ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧ ಪರಿಸ್ಥಿತಿಯ ಹಿನ್ನೆಲೆದಲ್ಲಿ ರದ್ದುಗೊಂಡಿದ್ದ ವಿಮಾನ ಸೇವೆ ಪುನರಾರಂಭವಾಗುವ ಸೂಚನೆ ಲಭಿಸಿದೆ. ಇದರೊಂದಿಗೆ ಸಿಂಧನೂರು ನಗರದ ಮಕ್ಕಳ ವೈದ್ಯರಾದ ಡಾ. ಕೆ. ಶಿವರಾಜ ಹಾಗೂ ಅವರ ಕುಟುಂಬದವರು ನಿರಾಳರಾಗಿದ್ದಾರೆ.
ಮಂಗಳವಾರ ರಾತ್ರಿ 9 ಗಂಟೆಗೆ ದುಬೈಯಿಂದ ವಿಮಾನ ಹೊರಡಲಿದ್ದು, ಮಾರ್ಚ್ 4ರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ತಲುಪುವ ನಿರೀಕ್ಷೆಯಿದೆ ಎಂದು ವೈದ್ಯರು ವಾಟ್ಸಪ್ ಸ್ಟೇಟಸ್ ನಲ್ಲಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಇರಾನ್ ಮೇಲೆ ಇಸ್ರೇಲ್ ದಾಳಿ: ಅಂತಾರಾಷ್ಟ್ರೀಯ ವಿಮಾನಗಳಿಲ್ಲದೆ ದುಬೈನಲ್ಲಿ ಸಿಲುಕಿದ ರಾಯಚೂರು ವೈದ್ಯ ದಂಪತಿ
ಯುದ್ಧದ ಕಾರಣದಿಂದ ವಿಮಾನ ಸಂಚಾರ ಸ್ಥಗಿತಗೊಂಡಿದ್ದರಿಂದ ಕುಟುಂಬದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇದೀಗ ವಿಮಾನ ಸೇವೆ ಮರುಪ್ರಾರಂಭವಾಗುವ ಸಾಧ್ಯತೆಯಿಂದ ಕುಟುಂಬಸ್ಥರಲ್ಲಿ ನೆಮ್ಮದಿ ಮನೆಮಾಡಿದೆ





