ಎಸ್ಐಆರ್ ಪ್ರಕ್ರಿಯೆ ನೆಪದಲ್ಲಿ ಮುಸ್ಲಿಂ ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಗಿಡುವ ದುರುದ್ದೇಶ ಅಡಗಿದೆ. ತಮ್ಮ ರಾಜಕೀಯ ಲಾಭಕ್ಕೆ ಅನುಕೂಲವಾಗುವಂತೆ ಮತದಾರರ ಯಾದಿ ಸಿದ್ಧಪಡಿಸುವ ವ್ಯವಸ್ಥೆ ನಡೆಯುತ್ತಿದೆ ಎಂದು ಪ್ರಗತಿಪರ ಚಿಂತಕ ಶಿವಸುಂದರ ಹೇಳಿದರು.
ನಗರದ ಟೌನಹಾಲ್ ಭವನದಲ್ಲಿ ಮತದಾರರ ವಿಶೇಷ ಪರಿಷ್ಕರಣೆ ಸಾಧಕ-ಬಾಧಕ ಕುರಿತು ಸಂವಾದ ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ನುಸುಳುಕೋರರಿಗೆ ಮತದಾನದ ಹಕ್ಕು ನೀಡಬಾರದೆಂಬ ನೆಪದಲ್ಲಿ, ಕೇಂದ್ರ ಸರಕಾರ ಆಡಳಿತಾವಧಿಯಲ್ಲಿ ನುಸುಳಿಕೋರರನ್ನು ಪತ್ತೆ ಹಚ್ಚುವಲ್ಲಿ ಸಾಧ್ಯವಾಗಿಲ್ಲ. ಸಮುದಾಯವನ್ನು ಗುರಿಯಾಗಿಸಿಕೊಂಡು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದ್ದು, ಪರಿಷ್ಕರಣೆ ಹೆಸರಿನಲ್ಲಿ ಅನ್ಯಾಯ ನಡೆಯುತ್ತಿದೆ ಎಂದರು.
ಭಾರತ ದೇಶದಲ್ಲಿ ಯಾವ ಧರ್ಮದವರಾಗಿರಲಿ, ಯಾವ ಭಾಷೆಯವರಾಗಿರಲಿ, ದಲಿತರಾಗಲಿ, ಮುಸ್ಲಿಮರಾಗಿರಲಿ, ಹಿಂದುಳಿದ ವರ್ಗದವರಾಗಲಿ, ಮಹಿಳೆಯರಾಗಲಿ ಅಥವಾ ಪುರುಷರಾಗಲಿ ಈ ದೇಶದಲ್ಲಿ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ದೇಶದ ನಾಗರಿಕನೇ ಆಗಿದ್ದಾನೆ. ನಾಗರಿಕತ್ವವನ್ನು ಪತ್ತೆಹಚ್ಚುವ ಅಥವಾ ನಿರ್ಧರಿಸುವ ಅಧಿಕಾರ ಚುನಾವಣಾ ಆಯೋಗಕ್ಕೆ ಇಲ್ಲವೆಂದು ಅವರು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಟ್ರಾಕ್ಟರ್ ಗೆ ಟಿಪ್ಪರ್ ಡಿಕ್ಕಿ; ಓರ್ವ ಸಾವು
ಕಾರ್ಯಕ್ರಮದಲ್ಲಿ ಜಮಾತೆ ಇಸ್ಲಾಂ ಹಿಂದ್ ಮುಖಂಡ ಹುಸೇನಸಾಬ, ರೈತ ಮುಖಂಡರು ಡಿಎಚ್.ಪೂಜಾರ, ಡಿಎಚ್.ಕಂಬಳಿ, ಕರ್ನಾಟಕ ಜನಶಕ್ತಿ ಮುಖಂಡ ಬಸವರಾಜ ಬಾದರ್ಲಿ, ಚಂದ್ರಶೇಖರ ಗೊರೇಬಾಳ, ಮಕ್ಕಳ ತಜ್ಞ ಡಾ.ಕೆ.ಶಿವರಾಜ್,ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾಧ್ಯಕ್ಷ ಮೌನೇಶ ಜಾಲವಾಡಿಗಿ ಇನ್ನಿತರರು ಇದ್ದರು.





