ಮೈಸೂರು ಕುವೆಂಪುನಗರದ ವಿವೇಕಾನಂದ ಕ್ರೀಡಾಂಗಣದಲ್ಲಿ ಜಿಲ್ಲಾ ಅಮೇಚ್ಯುರ್ ಖೋ-ಖೋ ಅಸೋಸಿಯೇಷನ್ ವತಿಯಿಂದ ನಡೆದ ರಾಜ್ಯ ಮಟ್ಟದ ಖೋ-ಖೋ ಪಂದ್ಯಾವಳಿಯನ್ನು ವೀಕ್ಷಿಸಿ, ವಿಜೇತ ತಂಡಕ್ಕೆ ಬಹುಮಾನ ವಿತರಿಸಿ ಮಾತನಾಡಿದ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ. ಮಹದೇವಪ್ಪ, ‘ಭ್ರಾತೃತ್ವ ಬಿತ್ತಲು ಕ್ರೀಡೆ ಉತ್ತಮ ಹವ್ಯಾಸ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಎರಡು ದಿನದ ರಾಜ್ಯದ ಮಟ್ಟದ ಅಮೇಚ್ಯುರ್ ಖೋ-ಖೋ ಅಂತಿಮ ಪಂದ್ಯಾವಳಿಯಲ್ಲಿ ರಾಯಚೂರು ಹಾಗೂ ಮೈಸೂರು ತಂಡವು ಅತ್ಯಂತ ರೋಚಕವಾಗಿ ಆಡಿದ್ದಾರೆ. ಎರಡು ತಂಡಗಳ ಆಟ ಸಮಬಲದಿಂದ ಕೂಡಿತ್ತು. ಭ್ರಾತೃತ್ವವನ್ನು ಭಿತ್ತುವ ಸಲುವಾಗಿ ಕ್ರೀಡೆಯಲ್ಲಿ ಭಾಗವಹಿಸುವುದು ಉತ್ತಮ ಅಭಿರುಚಿಯಾಗಿದೆ. ಈ ನಿಟ್ಟಿನಲ್ಲಿ ಕ್ರೀಡಾಭಾವನೆಯಿಂದ ಪ್ರತಿಯೊಬ್ಬರೂ ಬದುಕುವ ವಾತಾವರಣ ಸೃಷ್ಟಿಯಾಗಲಿ ಎಂದು ಆಶಿಸಿದರು.

ರಾಜ್ಯಮಟ್ಟದ ಖೋ-ಖೋ ಪಂದ್ಯಾವಳಿಯಲ್ಲಿ ಮೊದಲ ಸ್ಥಾನವನ್ನು ರಾಯಚೂರು, ಎರಡನೇ ಬಹುಮಾನ ಮೈಸೂರು ಜಿಲ್ಲೆ ಹಾಗೂ ತೃತೀಯ ಬಹುಮಾನವನ್ನು ಧಾರವಾಡ ಜಿಲ್ಲೆ ಪಡೆದುಕೊಂಡಿತು.
ಈ ಸುದ್ದಿ ಓದಿದ್ದೀರಾ? ದಲಿತರು ಸಿಎಂ ಸ್ಥಾನ ಬೇಡದೇ; ಹಕ್ಕಾಗಿ ಮಂಡಿಸಬೇಕು: ಲೇಖಕ ಸಿ. ಹರಕುಮಾರ್
ಪಂದ್ಯಾವಳಿ ಬಹುಮಾನ ವಿತರಣೆ ವೇಳೆ ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್, ಅಪರ ಜಿಲ್ಲಾಧಿಕಾರಿ ಪಿ. ಶಿವರಾಜು, ಸಚಿವರ ವಿಷೇಶ ಕರ್ತವ್ಯಾಧಿಕಾರಿ ರವಿಕುಮಾರ್, ಮುಖಂಡರಾದ ಅಹಿಂದ ಜವರಪ್ಪ, ನಾಗರಾಜು ಭೈರಿ, ಪ್ರಕಾಶ್, ದಿನೇಶ್, ಶ್ರೀಪತಿ, ಕೃಷ್ಣಸ್ವಾಮಿ ಸೇರಿದಂತೆ ಹಲವರು ಇದ್ದರು.





