‘ನ್ಯಾಯ’ವು ಪ್ರತಿಯೊಬ್ಬ ನಾಗರಿಕನ ಹಕ್ಕಾಗಿದ್ದು, ಭಾರತದ ಯಾವುದೇ ಪ್ರಜೆಯು ತನ್ನ ಮೂಲಭೂತ ಹಕ್ಕುಗಳ ಉಲ್ಲಂಘನೆಯ ವಿರುದ್ಧ ಪರಿಹಾರವನ್ನು ಪಡೆಯಬಹುದು ಎಂದು ಕರ್ನಾಟಕ ಕಾನೂನು ವಿಶ್ವ ವಿದ್ಯಾನಿಲಯ ಹುಬ್ಬಳ್ಳಿಯ ಸಹಾಯಕ ಪಾಧ್ಯಪಕ ಡಾ. ರಂಗಸ್ವಾಮಿ ಡಿ ತಿಳಿಸಿದರು.
ಶ್ರೀರಂಗಪಟ್ಟಣದ ಶಾರದಾ ವಿಲಾಸ ಕಾನೂನು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ರೋಟರಿ ಸಂಸ್ಥೆ, ಸಹಯೋಗದೊಂದಿಗೆ ತಾಲೂಕಿನ ಶ್ರೀನಿವಾಸ ಅಗ್ರಹಾರ ಗ್ರಾಮದಲ್ಲಿ ಆಯೋಜಿಸಿದ್ದ ಎನ್ಎಸ್ಎಸ್ನ ವಾರ್ಷಿಕ ವಿಶೇಷ ಶಿಬಿರದ ಎರಡೆನೇ ದಿನದ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.
“ಪ್ರತಿಯೊಬ್ಬ ನಾಗರಿಕರೂ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು. ಆಗ ಮಾತ್ರ ಸಾಂವಿಧಾನಿಕ ಹಕ್ಕುಗಳ ಸಂಪೂರ್ಣ ಅನುಷ್ಠಾನ ಸಾಧ್ಯ. ಯಾವುದೇ ವ್ಯಕ್ತಿ ಅನ್ಯಾಯಕ್ಕೆ ಒಳಗಾದಾಗ, ನ್ಯಾಯ ಪಡೆಯುವ ಹಕ್ಕಿನ ಪುಷ್ಟೀಕರಣಕ್ಕಾಗಿ ನಿರತವಾಗಿ ಶ್ರಮಿಸುತ್ತಿರುವ ಜಿಲ್ಲಾ ಹಾಗೂ ತಾಲೂಕು ಕಾನೂನು ಸೇವಾ ಆಯೋಗದ ಪ್ರಯೋಜನವನ್ನು ಪಡೆದುಕೊಳ್ಳಬೇಕು” ಎಂದು ಕರೆ ನೀಡಿ ಕಾನೂನಿನ ಸಾರ್ವಭೌಮತೆಯನ್ನು ಎತ್ತಿ ಹಿಡಿದರು.
ಕಾರ್ಯಕಮದ ಮತ್ತೋರ್ವ ಅತಿಥಿ ಗಣಂಗೂರು ನಂಜೇಗೌಡ ಅವರು ಮಾತನಾಡಿ, ಶ್ರೀರಂಗಪಟ್ಟಣದ ಐತಿಹಾಸಿಕ ಹಿನ್ನೆಲೆ ಮತ್ತು ಈ ನೆಲದ ವಿಶಿಷ್ಟತೆಯನ್ನು ಸವಿವರವಾಗಿ ತಿಳಿಸಿಕೊಟ್ಟರು.
ಈ ಸುದ್ದಿ ಓದಿದ್ದೀರಾ? ಶ್ರೀರಂಗಪಟ್ಟಣ | ಡಿ.1ರಂದು ಟಿಪ್ಪು ಸುಲ್ತಾನ್ ಜನ್ಮದಿನ: ಟಿಪ್ಪು ಸ್ಮಾರಕಕ್ಕೆ ರೈತ ಸಂಘದಿಂದ ಪುಷ್ಪ ನಮನ
ಮತ್ತೋರ್ವ ಅತಿಥಿ ವಿದ್ಯಾವರ್ಧಕ ಕಾನೂನು ಕಾಲೇಜಿನ ಅಧ್ಯಾಪಕ ಡಾ. ಕುಮಾರ್ ಅವರು ಮಾತನಾಡಿ, “ವಿಧ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಎನ್ಎಸ್ಎಸ್ನ ಪಾತ್ರ ಅಗಾಧ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀರಂಗಪಟ್ಟಣದ ರೋಟರಿ ಸಂಸ್ಥೆಯ ಅಧ್ಯಕ್ಷ ಡಾ.ರಾಘವೇಂದ್ರ, ಶಿಬಿರಾಧಿಕಾರಿ ಕು. ಸವಿತಾ ಎಚ್ ಎಂ, ಸಹಾಯಕ ಪಾಧ್ಯಪಕಿಯರಾದ ಪ್ರತಿಭಾ ಬಿ ಎಸ್ ಮತ್ತು ಮಂಜಳ ಹಾಗೂ ಗ್ರಾಮಸ್ಥರು, ಶಿಬಿರಾರ್ಥಿಗಳು ಇದ್ದರು.





