ಶ್ರೀರಂಗಪಟ್ಟಣದ ಶಾರದಾ ವಿಲಾಸ ಕಾನೂನು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ರೋಟರಿ ಸಂಸ್ಥೆ ಸಹಯೋಗದೊಂದಿಗೆ ತಾಲೂಕಿನ ಶ್ರೀನಿವಾಸ ಅಗ್ರಹಾರ ಗ್ರಾಮದಲ್ಲಿ ಆಯೋಜಿಸಲಾಗಿರುವ NSS ವಾರ್ಷಿಕ ವಿಶೇಷ ಶಿಬಿರದಲ್ಲಿ ಶಿಬಿರಾರ್ಥಿಗಳು ಸೇರಿ ಕರೀಘಟ್ಟದ ತಪ್ಪಲಿನಲ್ಲಿರುವ ಪುರಾತನ ಕಾಲದ 3 ಮಂಟಪ ಹಾಗೂ ಕರೀಘಟ್ಟದ ಮೆಟ್ಟಿಲುಗಳ ಬಳಿ ಇದ್ದ ಮಂಟಪವನ್ನು ಸ್ವಚ್ಛಗೊಳಿಸಿ ಸುಣ್ಣ ಬಣ್ಣ ಬಳಿದಿದ್ದಾರೆ.
ಎನ್ಎಸ್ಎಸ್ ಧ್ಯೇಯೋದ್ದೇಶವಾದ ಸ್ಮಾರಕಗಳ ರಕ್ಷಣೆ ಕಾರ್ಯವನ್ನು ನೆರವೇರಿಸಿ ಮಂಟಪದ ಸುತ್ತ ದಟ್ಟವಾಗಿ ಬೆಳೆದು ನಿಂತಿದಂತ ಗಿಡಗಂಟೆಗಳನ್ನ ತೆಗೆದು ಸ್ವಚ್ಛತೆ ಮಾಡಲಾಯಿತು. ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಶಾರದಾ ವಿಲಾಸ ಕಾನೂನು ಕಾಲೇಜಿನ ಎನ್ಎಸ್ಎಸ್ ಘಟಕದ ಎಲ್ಲಾ ಶಿಬಿರಾರ್ಥಿಗಳು, ಶಿಬಿರಾಧಿಕಾರಿ ಸವಿತಾ ಹೆಚ್ ಎಂ ಹಾಗೂ ರೋಟರಿ ಸಂಸ್ಥೆಯ ಅಧ್ಯಕ್ಷ ಡಾ. ರಾಘವೇಂದ್ರ ಹಾಗೂ ಇತರೆ ಸದಸ್ಯರು ಭಾಗವಹಿಸಿ ಸ್ಮಾರಕಗಳ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಘೋಷ ವಾಕ್ಯದೊಂದಿಗೆ ಶ್ರಮದಾನವನ್ನು ಮಾಡಲಾಯಿತು.




