ಪ್ರಜ್ಞಾವಂತ ವೇದಿಕೆ ಹಾಗೂ ಸಮರ್ಪಣಾ ಟ್ರಸ್ಟ್ ಶ್ರೀರಂಗಪಟ್ಟಣ ಸಂಯುಕ್ತಾಶ್ರಯದಲ್ಲಿ ಸ್ಮಾರಕಗಳ ಭೇಟಿ ಮತ್ತು ಸಂರಕ್ಷಣೆ ಕಾರ್ಯಕ್ರಮ ಶ್ರೀರಂಗಪಟ್ಟಣದ ಹೃದಯ ಭಾಗದ ಸಂದಿಲ್ ಕೋಟೆಯಲ್ಲಿ ನಡೆಯಿತು.
ಸಂದಿಲ್ ಕೋಟೆಯು ಟಿಪ್ಪು ಅರಮನೆಯ ಎಡಭಾಗದಲ್ಲಿದೆ. ಸುಮಾರು 100*100 ಮೀಟರ್ ವಿಸ್ತೀರ್ಣವುಳ್ಳ ಸುಮಾರು 20 ಅಡಿ ಎತ್ತರದ ಕೋಟೆ ಇದು. ಶ್ರೀರಂಗಪಟ್ಟಣದ ಗಂಧದ ಮರಗಳಿಂದ ಚಂದದ ಗೊಂಬೆಗಳ ಮತ್ತು ಇನ್ನಿತರ ವಸ್ತುಗಳನ್ನ ತಯಾರಿಸಿ ವಿದೇಶಗಳಿಗೆ ರಫ್ತು ಮಾಡಿ ಅದರಿಂದ ಬಂದ ಆದಾಯದಿಂದ ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುತ್ತಿತ್ತು. ಇಂತಹ ಸ್ಥಳ ಇಂದಿಗೆ ಸಂರಕ್ಷಣೆ ಇಲ್ಲದೆ ಪಾಳು ಬಿದ್ದಿತ್ತು. ಕಳೆದ ವರ್ಷದ ಮುಂಗಾರು ಮಳೆಯಲ್ಲಿ ಕುಸಿದು ಬಿದ್ದ ಬಲ ಪಾರ್ಶ್ವ ಹಾಗೂ ಈ ವರ್ಷದ ಮುಂಗಾರು ಮಳೆಯಲ್ಲಿ ಕುಸಿದು ಬಿದ್ದಿರುವ ಎಡ ಪಾರ್ಶ್ವ ಕೋಟೆಯ ಅಂದವನ್ನು ಹಾಳು ಮಾಡಿತ್ತು. ಇಂಥ ಸ್ಮಾರಕಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸಿಕೊಡಬೇಕೆಂದು ರಾಜ್ಯ ಆರ್ಕಾಲಜಿ ಇಲಾಖೆಗೆ ಒತ್ತಾಯ ಮಾಡಲಾಗುತ್ತಿದೆ ಎಂದು ಪ್ರಜ್ಞಾವಂತ ವೇದಿಕೆಯ ಸಂಚಾಲಕರಾದ ಸಿ ಎಸ್ ವೆಂಕಟೇಶ್ ಹೇಳಿದರು.
ಇದನ್ನೂ ಓದಿ: ಮಂಡ್ಯ | ಅಸಂಘಟಿತ ಕಾರ್ಮಿಕರು ಯೋಜನೆಗಳ ಸದುಪಯೋಗ ಪಡೆದುಕೊಳ್ಳಿ: ಸಚಿವ ಸಂತೋಷ್ ಲಾಡ್
ಈ ಕಾರ್ಯಕ್ರಮದಲ್ಲಿ ಸಮರ್ಪಣಾ ಟ್ರಸ್ಟ್ ಅಧ್ಯಕ್ಷ ಕೆ ಎಸ್ ಜಯಶಂಕರ್, ಮುಸ್ಲಿಂ ಸೌಹಾರ್ದ ವೇದಿಕೆಯ ಅಧ್ಯಕ್ಷ ಅಪ್ಸರ್ ಖಾನ್, ವೇದಿಕೆಯ ಕಾರ್ಯದರ್ಶಿ ಅಬ್ದುಲ್, ಕಬ್ಬು ಬೆಳೆಗಾರರ ರೈತ ಸಂಘಟನೆ ಉಪಾಧ್ಯಕ್ಷ ಸುಕುರ್ ಸಾಬ್ ಮುಂತಾದವರು ಉಪಸ್ಥಿತರಿದ್ದರು.





