ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಕಿವಿಮಾತು

Date:

ನಾಳೆ(ಮೇ.8) ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಲಿದೆ. ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ಮತ್ತು ಪಾಲಕರಲ್ಲಿ  ಫಲಿತಾಂಶದ ಬಗ್ಗೆ ಆತಂಕ, ಮುಂದೇನು? ಎಂಬ ಚಿಂತೆ, ಗೊಂದಲಗಳಿರುವುದು ಸಹಜ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಕೆಲವು ಕಿವಿಮಾತು

ನಾಳೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಲಿದೆ. ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ಮತ್ತು ಪಾಲಕರಲ್ಲಿ ಫಲಿತಾಂಶದ ಬಗ್ಗೆ ಆತಂಕ, ಮುಂದೇನು? ಎಂಬ ಚಿಂತೆ, ಗೊಂದಲಗಳಿರುವುದು ಸಹಜ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಕೆಲವು ಕಿವಿಮಾತುಗಳನ್ನು ಮುಂದೆ ನೀಡಲಾಗಿದೆ.

ಫಲಿತಾಂಶ ಏನೇ ಬರಲಿ. ಅದನ್ನು ವಿದ್ಯಾರ್ಥಿಗಳು ಮತ್ತು ಪಾಲಕರು ಆತ್ಮಸ್ಥೈರ್ಯದಿಂದ ಸ್ವೀಕರಿಸಿ ಮುಂದಿನ ಕಲಿಕೆ ಮತ್ತು ವೃತ್ತಿ ಜೀವನಕ್ಕೊಂದು ದಾರಿಯನ್ನು ಕಂಡುಕೊಳ್ಳುವಂತಾಗಲಿ ಎಂಬುದು ಈ ಬರಹದ ಆಶಯ.

ವಿದ್ಯಾರ್ಥಿಗಳಿಗೆ ಕಿವಿಮಾತು
ಮೊದಲನೆಯದಾಗಿ ಪರೀಕ್ಷೆ ಬರೆದಿರುವ ಎಲ್ಲ ಮಕ್ಕಳಿಗೂ ಶುಭಾಶಯಗಳು. ಇದು ನಿಮ್ಮ ವಿದ್ಯಾರ್ಥಿ ಬದುಕಿನ ಮೊದಲ ಅಥವಾ ಕೊನೆಯ ಪರೀಕ್ಷೆಯಲ್ಲ. ಎಲ್‌ಕೆಜಿ ಅಥವಾ ಒಂದನೇ ತರಗತಿಯಿಂದ ಅನೇಕ ಪರೀಕ್ಷೆಗಳನ್ನು ಬರೆದು ಪಾಸಾಗಿ ಈ ಹಂತವನ್ನು ತಲುಪಿದ್ದೀರಿ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ನಿರೀಕ್ಷಿತ‌ ಫಲಿತಾಂಶ ಬರಲಿ ಅಥವಾ ಬಾರದಿರಲಿ, ಎದೆಗುಂದಬೇಡಿ. ಪಾಸಾಗಲಿ ಅಥವಾ ಫೇಲಾಗಲಿ. ಫಲಿತಾಂಶವನ್ನು ಧೈರ್ಯವಾಗಿ ಸ್ವೀಕರಿಸಿ. ಶಾಲೆಯ‌ ಪರೀಕ್ಷೆಗಳಿಗಿಂತ ಬದುಕಿನ ಪರೀಕ್ಷೆಯಲ್ಲಿ ಪಾಸಾಗೋದು ಮುಖ್ಯ ಎಂಬುದು ತಿಳಿದಿರಲಿ.

ನಿಮಗೆ ಒತ್ತಡಗಳಿರಬಹುದು, ಪರವಾಗಿಲ್ಲ. ಅದನ್ನು ಜಾಣತನದಿಂದ ಎದುರಿಸಿ. ಮೂರ್ಖರಂತೆ ಎಂದೂ ತಪ್ಪು ತೀರ್ಮಾನ ಕೈಗೊಳ್ಳಬೇಡಿ, ಅಡ್ಡದಾರಿ ಹಿಡಿಯಬೇಡಿ. ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ, ಬುದ್ಧಿವಂತರಾಗಿ.

ನಿಮಗಿಂತ ಕಡಿಮೆ ಕಲಿತು ಅಥವಾ ಎಸ್‌ಎಸ್‌ಎಲ್‌ಸಿಯಲ್ಲಿ ಫೇಲಾಗಿ ಸಾಧನೆ ಮತ್ತು ದುಡ್ಡು ಸಂಪಾದನೆ ಮಾಡಿರುವ ಅನೇಕ ಜನರು ನಿಮ್ಮ ಸುತ್ತಮುತ್ತ ಇದ್ದಾರೆ. ನಿಮ್ಮಲ್ಲೂ ಪ್ರತಿಭೆ, ಕೌಶಲ್ಯಗಳಿವೆ. ಆತ್ಮವಿಶ್ವಾಸವೊಂದಿದ್ದರೆ, ನೀವೂ ಎತ್ತರಕ್ಕೆ ಬೆಳೆಯಬಹುದು, ನೆನಪಿರಲಿ.

ನಾಳೆ ಪ್ರಕಟವಾಗುವ ಫಲಿತಾಂಶವನ್ನು ಸ್ವೀಕರಿಸಲು ನೀವು ತಯಾರಿಲ್ಲ ಎಂದಾದರೆ ಚಾಲೆಂಜ್ ಮಾಡಿ. ನಿಮ್ಮ ಉತ್ತರ ಪತ್ರಿಕೆ ತರಿಸಿಕೊಳ್ಳಿ. ರೀ ಟೋಟಲಿಂಗ್, ರೀ ವ್ಯಾಲ್ಯುವೇಶನ್’ಗೆ ಅರ್ಜಿ ಹಾಕಿ. ಅಥವಾ ಪೂರ್ತಿ ಫಲಿತಾಂಶವನ್ನೆ ಧಿಕ್ಕರಿಸಿ ಮರು ಪರೀಕ್ಷೆ ಬರೆಯಿರಿ.

ಈ ಸುದ್ದಿ ಓದಿದ್ದೀರಾ? ನಾಳೆ ಎಸ್ಸೆಸ್ಸೆಲ್ಸಿ ಫಲಿತಾಂಶ; ಪರಿಶೀಲಿಸುವುದು ಹೀಗೆ

ಎಸ್‌ಎಸ್‌ಎಲ್‌ಸಿಯಲ್ಲಿ ಪಾಸಾದರೂ, ಫೇಲಾದರೂ ಕಲಿಯಲು ಸಾವಿರಾರು ಕೋರ್ಸ್’ಗಳಿವೆ. ಗೂಗಲ್ ಸರ್ಚ್ ಮಾಡಿ, ಯೂಟ್ಯೂಬ್’ನಲ್ಲಿ ಹುಡುಕಿ. ಅಥವಾ ತಿಳಿದವರಲ್ಲಿ ಅವುಗಳ ಮಾಹಿತಿ ಪಡೆಯಿರಿ.

ಪಾಲಕರಿಗೆ ಕಿವಿಮಾತು
ಮಕ್ಕಳ ಮೇಲೆ ಒತ್ತಡ ಹೇರಬೇಡಿ. ಮಕ್ಕಳಲ್ಲಿ ಧೈರ್ಯ, ಆತ್ಮವಿಶ್ವಾಸ ತುಂಬಿರಿ. ಜಾಣ ಜಾಣೆಯರಾಗುವಂತೆ ಮಕ್ಕಳನ್ನು ಬೆಳೆಸಿರಿ.

ಒತ್ತಡ, ಆಕರ್ಷಣೆ, ಅವಾಸ್ತವ ಭ್ರಮೆಗೆ ಒಳಗಾಗಿ ಮಕ್ಕಳಿಗೆ ಕೋರ್ಸ್’ಗಳ ಆಯ್ಕೆ ಮಾಡಬೇಡಿ. ಪಕ್ಕಾ ಕರಿಯರ್ ಪ್ಲ್ಯಾನಿಂಗ್ ಮಾಡಿ, ಅದಕ್ಕೆ ಪೂರಕವಾದ ಕೋರ್ಸ್’ಗಳನ್ನ ಆಯ್ಕೆ ಮಾಡಿಕೊಳ್ಳುವಂತೆ ಮಕ್ಕಳನ್ನು ಪ್ರೇರೇಪಿಸಿರಿ. ಸಾಧ್ಯವಾದರೆ ಕರಿಯರ್ ಕೌನ್ಸಿಲರ್‍‌ಗಳ ಮಾರ್ಗದರ್ಶನ ಪಡೆಯಿರಿ.

ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕಗಳಿಸಿದರೆ ಪಿಯುಸಿಯಲ್ಲಿ ವಿಜ್ಞಾನ, ಅಂಕಗಳು ಸಾಧಾರಣವಾದರೆ ವಾಣಿಜ್ಯ ಹಾಗೂ ಕಡಿಮೆ ಅಂಕ ಗಳಿಸಿದರೆ ಕಲಾ ವಿಭಾಗ ಆಯ್ಕೆ ಮಾಡುವ ವಾಡಿಕೆ ಸಮಾಜದಲ್ಲಿದೆ. ಇದು ಸರಿಯಲ್ಲ.

ಮಕ್ಕಳ ಆಸಕ್ತಿ ಮತ್ತು ಸಾಮರ್ಥ್ಯವನ್ನು ನೋಡಿಕೊಂಡು ಪಿಯುಸಿಯಲ್ಲಿನ ವಿಭಾಗಗಳು ಮತ್ತು ಉಪವಿಭಾಗಗಳನ್ನು ಆಯ್ಕೆ ಮಾಡಿ. ಇದವರ ಮುಂದಿನ ಕಲಿಕೆಗೆ ಪೂರಕವಾಗಿರಲಿ.

ಪಿಯುಸಿಯಲ್ಲಿ ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿರುವವರು ಮಾತ್ರ ದುಡ್ಡು ಸಂಪಾದನೆ ಮತ್ತು ಕೀರ್ತಿ ಪಡೆದಿರುವುದಲ್ಲ.

ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಿಂತ ಹೆಚ್ಚು ಅವಕಾಶಗಳು ಕಲಾ ವಿಭಾಗದವರಿಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ.

ಎಲ್ಲ ಮಕ್ಕಳೂ ಪಿಯುಸಿ ಕಲಿಯಲೇ ಬೇಕು ಎಂದೇನಿಲ್ಲ. ಪಿಯುಸಿ ಹೊರತಾಗಿ ಕಲಿಯಬಹುದಾದ ಸಾವಿರಾರು ಕೋರ್ಸ್‌ಗಳಿವೆ.

ಐಟಿಐ, ಪಾಲಿಟೆಕ್ನಿಕ್‌ ಡಿಪ್ಲೊಮಾ, ಪ್ಯಾರಾ ಮೆಡಿಕಲ್‌, ಪ್ಲಾಸ್ಟಿಕ್‌ ಟೆಕ್ನಾಲಜಿ, ಲೆದರ್‌ ಆಂಡ್‌ ಫೂಟ್‌ವೇರ್‌ ಟೆಕ್ನಾಲಜಿ, ಟೂಲ್‌ ಆಂಡ್‌ ಡೈ ಮೇಕಿಂಗ್‌, ಫೈರ್‌ ಆಂಡ್‌ ಸೇಫ್ಟಿ, ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್‌, ಫ್ಯಾಶನ್‌ ಡಿಸೈನಿಂಗ್‌ ಮುಂತಾದ ವಿಭಾಗಗಳಲ್ಲಿ ಪೂರ್ಣ ಕಾಲಿಕ ಮತ್ತು ಅರೆ ಕಾಲಿಕ ಡಿಪ್ಲೊಮಾ, ಸರ್ಟಿಫಿಕೇಟ್ ಮತ್ತು ಜಾಬ್‌ ಓರಿಯೆಂಟೆಡ್‌ ಕೋರ್ಸ್‌ಗಳಿವೆ. ಇವುಗಳ ಮಾಹಿತಿ ಕಲೆಹಾಕಿ, ಮಕ್ಕಳ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ಪೂರಕವಾದ ಕೋರ್ಸ್ ಗಳ ಆಯ್ಕೆ ನಡೆಯಲಿ.

(ಲೇಖಕರು ಕರಿಯರ್ ಕೌನ್ಸಿಲರ್ ಕೂಡ ಆಗಿದ್ದಾರೆ. ಮಾಹಿತಿಗಾಗಿ 9845054191 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು)

WhatsApp Image 2025 11 17 at 3.24.02 PM
ಉಮರ್‌ ಯು ಎಚ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...