ಥ್ಯಾಕರೆಯ ತಲೆಗೆ ಗುಂಡಿಟ್ಟಿದ್ದ ವೀರ ಅಮಟೂರು ಬಾಳಪ್ಪನವರ ಇತಿಹಾಸವನ್ನು ದೇಶಕ್ಕೆ ತಿಳಿಸಬೇಕಿದೆ

Date:

ಸ್ವಾತಂತ್ರೋತ್ಸವದ ಈ ಸಂದರ್ಭದಲ್ಲಿ ಸ್ವಾತಂತ್ರ್ಯಕ್ಕಾಗಿ ಪ್ರಾಣ ನೀಡಿದ ವೀರರನ್ನು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯ. ರಾಣಿ ಚೆನ್ನಮ್ಮಳ ಕಿತ್ತೂರು ಸಂಸ್ಥಾನಕ್ಕೆ ಮೊದಲ ಜಯ ತಂದುಕೊಟ್ಟ ವೀರರಲ್ಲಿ ಅಮಟೂರು ಬಾಳಪ್ಪನವರು ಸಹ ಒಬ್ಬರಾಗಿದ್ದಾರೆ.

ಅಕ್ಟೋಬರ್‌ 21, 1824. ಬ್ರಿಟಿಷ್‌ ಅಧಿಕಾರಿ, ಧಾರವಾಡದ ಕಲೆಕ್ಟರ್‌ ಆಗಿದ್ದ ಥ್ಯಾಕರೆ ನೇತೃತ್ವದಲ್ಲಿ ಬ್ರಿಟೀಷ್‌ ಸೈನ್ಯವು ಕಿತ್ತೂರಿನ ಮೇಲೆ ಆಕ್ರಮಣ ಮಾಡಲು ಸನ್ನದ್ಧವಾಗಿ ಕಿತ್ತೂರು ಕೋಟೆಯ ಮೇಲೆ ಯುದ್ದ ಸಾರಿತ್ತು. ಅಕ್ಟೋಬರ್ 23ರಂದು ಕಿತ್ತೂರು ಕೋಟೆ ಮೇಲೆ ಬ್ರಿಟೀಷರು ಫಿರಂಗಿ ದಾಳಿ ನಡೆಸಿದ್ದರು. ಇನ್ನೇನು ಬ್ರಿಟಿಷರಿಗೆ ಯುದ್ದದಲ್ಲಿ ಜಯವಾಗಲಿದೆ ಎನ್ನುವ ಸಂದರ್ಭದಲ್ಲಿಯೆ ಸರದಾರ ಗುರುಸಿದ್ದಪ್ಪನವರ ನಾಯಕತ್ವದಲ್ಲಿ ಕಿತ್ತೂರಿನ ಸೈನ್ಯ, ಬ್ರಿಟಿಷರ ಸೈನ್ಯದ ಮೇಲೆ ಮುಗಿಬಿದ್ದಿತ್ತು.

ರಾಣಿ ಚನ್ನಮ್ಮಳನ್ನು ಸೆರೆ ಹಿಡಿಯಬೇಕು ಇಲ್ಲವೆ ಹತ್ಯೆ ಮಾಡಬೇಕು ಎಂಬುದು ಬ್ರಿಟೀಷ್‌ ಅಧಿಕಾರಿಗಳ ಸಂಚಾಗಿತ್ತು. ಈ ಸಂದರ್ಭದಲ್ಲಿ ರಾಣಿ ಚೆನ್ನಮ್ಮಳ ಅಂಗರಕ್ಷಕನಾಗಿದದ್ದು ಅಮಟೂರು ಬಾಳಪ್ಪ. ಯುದ್ದದ ಸಂದರ್ಭದಲ್ಲಿ ಥ್ಯಾಕರೆಯು ರಾಣಿ ಚೆನ್ನಮ್ಮಳಿಗೆ ಗುರಿಯಿಟ್ಟಿದ್ದನ್ನು ಗಮನಿಸಿದ ಅಮಟೂರು ಬಾಳಪ್ಪ ನೇರವಾಗಿ ಥ್ಯಾಕರೆಯ ತಲೆಗೆ ಗುರಿಯಿಟ್ಟು ಗುಂಡು ಹಾರಿಸಿದ್ದರ ಪರಿಣಾಮ ಥ್ಯಾಕರೆಯು ರಕ್ತದ ಮಡುವಿನಲ್ಲಿ ಬಿದ್ದು ಪ್ರಾಣ ಬಿಟ್ಟಿದ್ದ. ಈ ಮೂಲಕ ಕಿತ್ತೂರಿನ ರಾಣಿ ಚೆನ್ನಮ್ಮಳ ಜೀವ ಉಳಿಸುವುದರೊಂದಿಗೆ ಕಿತ್ತೂರಿಗೆ ಮೊದಲ ಜಯ ತಂದುಕೊಡುವಲ್ಲಿ ಅಮಟೂರು ಬಾಳಪ್ಪನವರ ಸಾಹಸವು ಪ್ರಮುಖವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
ಬೆಳಗಾವಿ 25

ಈ ಘಟನೆಯಿಂದ ಕೋಪಗೊಂಡ ಭ್ರಿಟೀಷರು 1824 ಡಿಸೆಂಬರ್ ತಿಂಗಳಲ್ಲಿ ಕಿತ್ತೂರು ಕೋಟೆಯ ಮೇಲೆ ಆಕ್ರಮಣ ಮಾಡುತ್ತಾರೆ. ಈ ಸಂದರ್ಭದಲ್ಲಿ ಮಲ್ಲಪ್ಪ ಶೆಟ್ಟಿ ಮತ್ತು ವೆಂಕಟರಾಯರ ಕುತಂತ್ರದಿಂದ ಕಿತ್ತೂರು ಸಂಸ್ಥಾನದ ಫಿರಂಗಿಗಳನ್ನು ಅಶಕ್ತಗೊಳಿಸುತ್ತಾರೆ.

ಈ ಯುದ್ದದಲ್ಲಿ ರಾಣಿ ಚೆನ್ನಮ್ಮಳ ಅಂಗರಕ್ಷಕನಾಗಿದ್ದ ಅಮಟೂರು ಬಾಳಪ್ಪ, ಕಿತ್ತೂರಿನ ರಾಣಿಯ ಕಡೆಗೆ ಗುಂಡು ತಗುಲದಂತೆ ನೋಡಿಕೊಂಡು ಹೋರಾಡುತ್ತಾನೆ. ಆದರೆ 1824 ಡಿಸೆಂಬರ್ 4 ರಂದು ಕಿತ್ತೂರಿನ ವಾಚ್ ಟವರ್ ಅಂದರೆ ಗಡಾದ ಮರಡಿಯಲ್ಲಿ ಬ್ರಿಟೀಪ್ ಅಧಿಕಾರಿ ಚ್ಯಾಂಪ್ಲಿಯನ್ ರಾಣಿ ಚೆನ್ನಮ್ಮಳಿಗೆ ಗುಂಡು ಹಾರಿಸಲು ಮುಂದಾದಾಗ, ಆ ಗುಂಡಿಗೆ ಎದೆ ಕೊಟ್ಟು ಅಮಟೂರು ಬಾಳಪ್ಪ ವೀರಮರಣ ಹೊಂದುತ್ತಾನೆ.

WhatsApp Image 2024 08 14 at 12.28.56 AM

ಈ ಸಂದರ್ಭದಲ್ಲಿ ಸರ್ದಾರ್ ಗುರುಸಿದ್ದಪ್ಪ, ಸಂಗೊಳ್ಳಿ ರಾಯಣ್ಣ ಮತ್ತು ಸಹಚರರನ್ನು ಬಂಧಿಸಿ ಧಾರವಾಡದದ ಬಂಧೀಖಾನೆಯಲ್ಲಿ ಇಡಲಾಗುತ್ತದೆ. 1825 ಜನೇವರಿ 23ರಂದು ಸರ್ದಾರ ಗುರುಸಿದ್ದಪ್ಪನವರ ಹೊರತು ಪಡಿಸಿ ಉಳಿದವರನ್ನು ಬಿಡುಗಡೆ ಮಾಡಲಾಗುತ್ತದೆ‌.

ಇತಿಹಾಸದಲ್ಲಿ ಶತ್ರು ಸೈನ್ಯದ ಜೊತೆ ಹೋರಾಡಿ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಸ್ವಾತಂತ್ರ್ಯ ಹೋರಾಟಗಾರ ಅಮಟೂರು ಬಾಳಪ್ಪನವರ ಇತಿಹಾಸವನ್ನು ರಾಷ್ಟಕ್ಕೆಲ್ಲ ಮುಟ್ಟಿಸಬೇಕಾದ ನೈತಿಕ ಹೊಣೆಗಾರಿಕೆ ಈ ಭಾಗದ ವ್ಯವಸ್ಥೆಯ ಮೇಲಿದೆ.

WhatsApp Image 2025 11 17 at 5.27.06 PM
ಸುನಿಲ್ ಹಂಪನ್ನವರ
+ posts

ಬೆಳಗಾವಿ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ಸುನಿಲ್ ಹಂಪನ್ನವರ
ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...