ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ವಿದ್ಯಾರ್ಥಿಗಳು ಇದೇ ಅಕ್ಟೋಬರ್.25 ರಂದು ನಡೆಯುವ ‘ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ-2025: ಚಾರಿತ್ರಿಕ ಹಿನ್ನಲೆ, ಅನುಷ್ಠಾನದ ಸವಾಲುಗಳು ಮತ್ತು ನಮ್ಮ ಪಾತ್ರ’ ಕುರಿತಾಗಿ ನಡೆಯುವ ವಿಚಾರಗೋಷ್ಠಿ ಬೆಂಬಲಿಸಿ, ಪ್ರಚಾರ ನಡೆಸಿದರು.
ನಾಳೆ (ಶನಿವಾರ) ಸೆನೆಟ್ ಭವನದಲ್ಲಿ ಜಾಗೃತ ಕರ್ನಾಟಕ, ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘಟನೆಗಳ ಸಹಯೋಗದಲ್ಲಿ ನಡೆಯುತ್ತಿರುವ ಜಾಗೃತಿ ಸಮಾವೇಶವನ್ನು ಬೆಂಬಲಿಸಿ ಕರಪತ್ರ ಹಂಚಿದರು.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಎಲ್ಲಾ ದುರ್ಬಲರನ್ನು ಗುರುತಿಸಿ ಸಾಂವಿಧಾನಿಕ ನೆರವನ್ನು ನೀಡಲು ಅತ್ಯಗತ್ಯ ಪ್ರಕ್ರಿಯೆಯಾಗಿದ್ದು, ಎಲ್ಲಾ ವಿದ್ಯಾರ್ಥಿಗಳೂ ಸಾಮಾಜಿಕ ನ್ಯಾಯದ ಪರವಾಗಿ ನಿಲ್ಲಲು ಬದ್ಧರಿದ್ದೇವೆ ಎಂದು ಘೋಷಣೆ ಕೂಗಿ ಪ್ರಚಾರ ನಡೆಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರಿನಲ್ಲಿ ಅ.25 ರಂದು ‘ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ: ಚಾರಿತ್ರಿಕ ಹಿನ್ನಲೆ, ಅನುಷ್ಠಾನದ ಸವಾಲುಗಳು-ನಮ್ಮ ಪಾತ್ರ’ ವಿಚಾರಗೋಷ್ಠಿ
ಪ್ರಚಾರದಲ್ಲಿ ವಿದ್ಯಾರ್ಥಿಗಳಾದ ದೀಪ, ಅರ್ಚನಾ,ಕೃಷ್ಣಮೂರ್ತಿ ಗಣಿಗನೂರು,ಗೌತಮ್ ಶಾಕ್ಯ, ಸಂಶೋಧಕ ವಿದ್ಯಾರ್ಥಿಗಳಾದ
ಮಲ್ಲೇಶ್, ಮಹೇಶ್ ಮರಳ್ಳಿ, ಪ್ರದೀಪ್ ಮುಮ್ಮಡಿ, ವಿದ್ಯಾರ್ಥಿಗಳಾದ ಕೃಷ್ಣಮೂರ್ತಿ ಗಣಿಗನೂರು, ಗೌತಮ್ ಶಾಕ್ಯ, ಸೇರಿದಂತೆ ಇನ್ನಿತರರು ಇದ್ದರು.





