ಬಂಗಾರಪೇಟೆ: ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿದ್ದು ಬಂಗಾರಪೇಟೆ-ಕೆಜಿಎಫ್ ತಾಲ್ಲೂಕಿಗೆ ಸಂಬಂಧಪಟ್ಟಂತೆ ಸುಮಾರು 17 ವಿದ್ಯಾರ್ಥಿ ನಿಲಯಗಳಿದ್ದು, ಇಲ್ಲಿ ಪರಿಶಿಷ್ಟ ಜಾತಿ ಮತ್ತು ಪ.ಪಂಗಡದ ವಿದ್ಯಾರ್ಥಿಗಳು ತಮ್ಮ ಜೀವನವನ್ನು ಉಜ್ವಲಗೊಳಿಸಲು ಉನ್ನತ ವಿದ್ಯಾವಂತರಾಗಿ ತಮ್ಮ ಜೀವನಗಳನ್ನು ರೂಪಿಸಿಕೊಳ್ಳಲು ವಿದ್ಯಾರ್ಥಿನಿಲಯಗಳಲ್ಲಿ ದಾಖಲಾಗಿದ್ದು ಇಲ್ಲಿ ಕಾರ್ಯನಿರ್ವಹಿಸುತ್ತಿರುವ ವಾರ್ಡ್ ನ್-ಅಡುಗೆ ಸಹಾಯಕರು ಮಕ್ಕಳಿಗೆ ಸರ್ಕಾರದಿಂದ ಬರುವ ಮೂಲಭೂತ ಸೌಕರ್ಯಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿ ಮಕ್ಕಳ ಹಕ್ಕನ್ನು ಕಸಿಯುತ್ತಿದ್ದಾರೆ ಎಂದು ಅಂಬೇಡ್ಕರ್ ವೀರಸೇನೆ ಅಧ್ಯಕ್ಷ ಭಟ್ರಕುಪ್ಪ ಅರುಣ್ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಶಿವಕುಮಾರಿ ಅವರಿಗೆ ಮನವಿ ನೀಡಿ ಬಟ್ರಕುಪ್ಪ ಅರುಣ್ ಒತ್ತಾಯಿಸಿ ಸುದ್ದಿಗಾರರೊಂದಿಗೆ ಮಾತನಾಡಿ ಅಂಬೇಡ್ಕರ್ ಬಾಲಕಿಯರ ಮೆಟ್ರಿಕ್ಪೂರ್ವ ವಿದ್ಯಾರ್ಥಿನಿಲಯದ ವಾರ್ಡ್ನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಶಿವಲೀಲ ಎಂಬುವವರು ಅಲ್ಲಿನ ಮಕ್ಕಳ ಬೆಡ್ಗಳು ಹಾಗೂ ಪ್ಯಾನ್ ಇತ್ಯಾಧಿ ವಸ್ತುಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವಿಡೀಯೋಗಳು ಅಲೆದಾಡಿರುತ್ತದೆ.
ಆದರೆ ಶಿವಲೀಲ ಅವರು ಮಹೇಶ್ ಅಡುಗೆಯವರಿಗೆ ಇಲ್ಲಿನ ವಸ್ತುಗಳನ್ನು ನೀಡಿದ್ದೇನೆ ಎಂದು ತಿಳಿಸಿದ್ದು ಸಹಾಯಕ ನಿರ್ದೇಶಕರಿಗೆ ಯಾವುದೇ ರೀತಿ ಪತ್ರ ವ್ಯವಹಾರ ಹಾಗೂ ಅನುಮತಿ ಪಡೆಯದೆ ಇಲ್ಲಿನ ವಸ್ತುಗಳನ್ನು ಮಾರಾಟ ಮಾಡಿರುವುದು ಸರ್ಕಾರದ ಕೆಲಸವನ್ನು ದುರುಪಯೋಗ ಪಡಿಸಿಕೊಂಡಿರುತ್ತಾರೆ. ಮಹೇಶ್ ಅವರು ಶಿವಲೀಲ ಅವರಿಗೆ ನೀಡಿರುವ ಪತ್ರದಲ್ಲಿ ನಾನು ಪ್ರಭಾರ ವಾರ್ಡನ್ ಎಂದು ಸಹಿ ಮಾಡಿ ಇಲ್ಲಿನ ವಸ್ತುಗಳನ್ನು ಎತ್ತುವಳಿ ಮಾಡಿಕೊಂಡು ಹೋಗಿರುತ್ತಾರೆ.
ಮಹೇಶ್ ಅವರಿಗೆ ವಾರ್ಡನ್ ಆಗಿ ಮುಂಬಡ್ತಿ ನೀಡಿ ಆದೇಶ ಮಾಡಿರುವುದು ಯಾರು? ಆದರೆ ಇಷ್ಟೆಲ್ಲಾ ನಡೆದ ತಕ್ಷಣ ಶಿವಲೀಲ ಅವರನ್ನು ಕೂಡಲೇ ವರ್ಗಾವಣೆ ಮಾಡಿ ಕೈ ತೊಳೆದುಕೊಂಡಿರುವುದು ಎಷ್ಟರ ಮಟ್ಟಿಗೆ ಸರಿ? ಎಂಬುದು ಪ್ರಶ್ನೆಯಾಗಿದೆ.
ಇದರ ಬಗ್ಗೆ ಸವಿಸ್ತಾರವಾಗಿ ತನಿಖೆ ಮಾಡಿ ಶಿವಲೀಲ ವಾರ್ಡ್ನ್ ಹಾಗೂ ಮಹೇಶ್ ಅಡುಗೆಯವರನ್ನು ಈ ಕೂಡಲೇ ಅಮಾನತ್ತು ಮಾಡಿ ಸರ್ಕಾರದ ಕೆಲಸ ದುರುಪಯೋಗಪಡಿಸಿಕೊಂಡಿರುವುದರ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ನೀಡಿ ಇವರನ್ನು ಕೆಲಸದಿಂದ ವಜಾ ಮಾಡಬೇಕೆಂದು ಸಂಘಟನೆಯು ಒತ್ತಾಯಿಸಿದೆ.
ಇದನ್ನು ಓದಿದ್ದೀರಾ..? ಒಳ ಮೀಸಲಾತಿ:ಬೆಂಗಳೂರಿನ ಬೃಹತ್ ಪ್ರತಿಭಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ತೆರಳಿದ ಮಾದಿಗ ಮುಖಂಡರುಗಳು
10 ದಿನಗಳೊಳಗೆ ತಾವು ಕ್ರಮ ಕೈಗೊಳ್ಳದೆ ಇಲ್ಲವಾದಲ್ಲಿ ಇಲಾಖೆ ಮುಂಭಾಗ ಅನಿಧಿಷ್ಠಾವಧಿ ಧರಣಿಯನ್ನು ಹಮ್ಮಿಕೊಳ್ಳಲಾಗುವುದೆಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಅಂಬರೀಶ್, ಸುಮಂತ್, ರವಿಕುಮಾರ್, ಹಾಗೂ ಇನ್ನಿತರರು ಇದ್ದರು.





