ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕರಡಿ ದಾಳಿ ನಡೆಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಎ.ರಾಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕರಡಿ ದಾಳಿಗೆ ಗಾಯಗೊಂಡ ರೈತ ರಾಮಕೃಷ್ಣ ಎಂಬುವರು. ಗುರುವಾರ ಬೆಳಗ್ಗೆ ರೈತ ರಾಮಕೃಷ್ಣ ಅವರು ತಮ್ಮ ತೋಟಕ್ಕೆ ಟ್ರಿಪ್ ಬಳ್ಳಿ ಬಿಡಲು ತೆರಳಿದ್ದ ವೇಳೆ, ಏಕಾಏಕಿ ಕರಡಿ ದಾಳಿ ನಡೆಸಿದೆ. ದಾಳಿಯಲ್ಲಿ ರೈತನ ಕೈ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಮಂಡಿ ಮತ್ತು ಮೊಣಕೈ ಭಾಗಕ್ಕೆ ಕರಡಿ ತೀವ್ರವಾಗಿ ದಾಳಿ ಮಾಡಿದೆ. ಕರಡಿಯೊಂದಿಗೆ ಹೋರಾಡಿ ತೋಟದಿಂದ ತಪ್ಪಿಸಿಕೊಂಡು ಬಂದ ರೈತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಆಟೋ ಚಾಲಕರಿಂದ ಗಣರಾಜ್ಯೋತ್ಸವ ಆಚರಣೆ
ಈ ಘಟನೆ ತರೀಕೆರೆ ತಾಲೂಕಿನ ವಲಯ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದ್ದು, ಗ್ರಾಮಸ್ಥರು ಭಯದ ವಾತಾವರಣಸೃಷ್ಟಿಯಾಗಿದೆ.





