ಉಡುಪಿ | ಕಲ್ಲಚ್ಚು ಪ್ರಕಾಶನದಿಂದ “ದಿ ಬ್ಲಾಕ್ ಈಗಲ್” ತುಳು ಅನುವಾದ ಕಾದಂಬರಿ ಬಿಡುಗಡೆ

Date:

ಕಲ್ಲಚ್ಚು ಪ್ರಕಾಶನ ವತಿಯಿಂದ ಎಂ ಜಾನಕಿ ಬ್ರಹ್ಮಾವರ ಅವರ ತುಳು ಕಾದಂಬರಿ ಕಪ್ಪು ಗಿಡಿ ಇದರ ಎಸ್ ಎನ್ ಡಿ ಪೂಜಾರಿ ಗೋವಾ ಇವರು ಅನುವಾದಿಸಿದ ಇಂಗ್ಲಿಷ್ ಅನುವಾದ ದು ಬ್ಲಾಕ್ ಈಗಲ್ ಇಂದು ಉಡುಪಿಯ ಕಿದಿಯೂರ್ ಹೋಟಲ್ ನಲ್ಲಿ ಬಿಡುಗಡೆಗೊಂಡಿತು.

ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಕೇಂದ್ರ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಹಾಗೂ ಸಾಹಿತಿ ಪ್ರೊ ಮುರುಳಿಧರ್ ಉಪಾಧ್ಯಾಯ 1974ರಲ್ಲಿ ದೇವರಾಜು ಅರಸುರವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಭೂ ಸುಧಾರಣೆ ಕಾಯ್ದೆಯನ್ನು ಜಾರಿಗೆ ತಂದರು ಅದರಿಂದ ಸಮಾಜಕ್ಕೆ ಆದ ಪ್ರಯೋಜನ ಮತ್ತು ತುಳುನಾಡಿನಿಂದ ಮುಂಬೈಗೆ ಕೆಲಸಕ್ಕೆ ಹೋದ ಮತ್ತು ಅಲ್ಲಿಯೇ ಮದುವೆ ಆಗಿ ಸಂಸಾರ ನಡೆಸುತ್ತಿದ್ದ ಕುಟುಂಬದ ಚಿತ್ರಣವನ್ನು ಕಪ್ಪು ಗಿಡಿ ತುಳು ಕಾದಂಬರಿಯಲ್ಲಿ ಬಹಳ ಮಾರ್ನಿಕವಾಗಿ ಬಿಚ್ವಿಡಲಾಗಿದೆ ಈ ಕಾದಂಬರಿ ತುಳು ನಾಟಕ ಅಥವಾ ಚಲನಚಿತ್ರವಾಗಿ ಹೊರ ಬರಲಿ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಕರ್ನಾಟಕ ಸಾಹಿತ್ಯ ಪರಿಷನ್ ಉಡುಪಿ ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ, ಸಾಹಿತಿ ಎಂ ಜಾನಕಿ ಬ್ರಹ್ಮಾವರ್, ಕಾದಂಬರಿ ಅನುವಾದಕ ಎಸ್ ಎನ್ ಡಿ ಪೂಜಾರಿ ಮಾತನಾಡಿದರು. ಕಲ್ಲಚ್ಚು ಪ್ರಕಾಶನ ಮಂಗಳೂರು ಇದರ ಮಹೇಶ್ ಆರ್ ನಾಯಕ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...