ಮೈಸೂರು ನಗರ ಪೊಲೀಸ್ ಇಲಾಖೆಯಿಂದ ಕೆಎಸ್ಓಯು ಘಟಿಕೋತ್ಸವ ಭವನದಲ್ಲಿ ನಡೆದ ‘ ಮನೆ ಮನೆಗೆ ಪೊಲೀಸ್ ‘ ಜನಸ್ನೇಹಿ ಕಾರ್ಯಕ್ರಮವನ್ನು ಖ್ಯಾತ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಉದ್ಘಾಟಿಸಿ ‘ ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ಅಂತರ ಕಡಿಮೆಯಾಗಬೇಕು ‘ ಎಂದು ಅಭಿಪ್ರಾಯಪಟ್ಟರು.
” ಪೊಲೀಸರು ಸಾರ್ವಜನಿಕರ ಶತ್ರುಗಳಲ್ಲ. ಅವರೆಲ್ಲ ನಿಮ್ಮ ಹಕ್ಕುಗಳ ರಕ್ಷಕರು. ಪೊಲೀಸರ ಮೇಲೆ ನಂಬಿಕೆ ಬೆಳೆಸಿಕೊಳ್ಳಬೇಕಿದೆ. ಸಾರ್ವಜನಿಕರ ಆತಂಕವನ್ನು ನಿವಾರಿಸಿ. ಪೊಲೀಸರ ಹಾಗೂ ಸಾರ್ವಜನಿಕರ ನಡುವಿನ ನಂಟನ್ನು ಬಲಪಡಿಸುವ ನಿಟ್ಟಿನಲ್ಲಿ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಆಯೋಜನೆ ಶ್ಲಾಘನಿಯ. ಇದರ ಜೊತೆಗೆ ಪೊಲೀಸ್ ಇಲಾಖೆಯ ಸೇವೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ” ಎಂದು ಕರೆಕೊಟ್ಟರು.

ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಮಾತನಾಡಿ ” ಮನೆ ಮನೆಗೆ ಪೊಲೀಸ್ ಜನಸ್ನೇಹಿ ಕಾರ್ಯಕ್ರಮವಾಗಿದ್ದು. ಜನಸ್ನೇಹಿ ಪೊಲೀಸರು, ಭಯವಿಲ್ಲದ ಸಮಾಜದ ಕನಸಾಗಿದೆ. ಈ ಯೋಜನೆಯ ಮೂಲಕ 250 ಮನೆಗಳ ಜವಾಬ್ದಾರಿ ಬೀಟ್ ಪೊಲೀಸರಿಗೆ ನೀಡಲಾಗಿದೆ. ಸಾರ್ವಜನಿಕರೊಂದಿಗೆ ನಿಕಟ ಸಂಪರ್ಕ ಸಾಧಿಸುವ ಯತ್ನ ನಡೆದಿದೆ. ಸಾರ್ವಜನಿಕರ ಆತಂಕ ನಿವಾರಿಸುವುದಕ್ಕಾಗಿ QR ಕೋಡ್ ವ್ಯವಸ್ಥೆ, ಕಚೇರಿ, ಸಭೆ ನಡೆಯುವ ಸ್ಥಳಗಳು, ಮನೆ ಸಮಸ್ಯೆ ನಿವಾರಣೆ, ಮಹಿಳಾ ಕಾನ್ಸ್ಟೇಬಲ್ ನೇಮಕಾತಿ ಮುಂತಾದ ಆನೇಕಾನೇಕ ಹೊಸ ಆಯಾಮಗಳನ್ನು ಯೋಜನೆಯಲ್ಲಿ ಅಳವಡಿಸಲಾಗಿದೆ ” ಎಂದು ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಆಗಸ್ಟ್. 3 ರಂದು ಬನವಾಸಿ ತೋಟದಲ್ಲಿ ‘ ಬೆಳಕಿನ ಬೇಸಾಯ ‘ ಕಾರ್ಯಗಾರ

ಕಾರ್ಯಕ್ರಮದಲ್ಲಿ ಡಿಸಿಪಿಗಳಾದ ಸುಂದರ್ ರಾಜ್, ಬಿಂದುಮಣಿ ಸೇರಿದಂತೆ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಇದ್ದರು.






