ಮೈಸೂರಿನ ಪುರುಭವನದಲ್ಲಿ ನಡೆದ ಪ್ರಭುಲಿಂಗಲೀಲೆ ಎಂಬ ಪೌರಾಣಿಕ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಶಾಸಕರಾದ ಜಿ.ಟಿ. ದೇವೇಗೌಡ, ರಂಗಭೂಮಿ ಸಾಮಾಜಿಕವಾಗಿ ಕಲೆ, ಶಿಕ್ಷಣ, ಸಾಂಸ್ಕೃತಿಕ ಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ ಎಂದು ಹೇಳಿದರು.
ರಂಗಭೂಮಿ ಎನ್ನುವುದು ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಬೆಳೆಸುವುದಕ್ಕೆ ಶ್ರೇಷ್ಠ ಕಲೆ. ಅದನ್ನು ಉಳಿಸಿ ಬೆಳೆಸಬೇಕು. ಇಂದಿನ ಪೀಳಿಗೆಗೆ ಪ್ರೇರಣೆಯಾಗಿರುವ ಕೆರೆಹಳ್ಳಿ ಬಿ. ದೊರೆಸ್ವಾಮಿರವರ ಅತ್ಯದ್ಭುತವಾದ ಕಲೆ ಪ್ರದರ್ಶನ ನಿಜಕ್ಕೂ ಮೈಜುಮ್ ಎನಿಸುವ ನಟನಾ ಕಲೆ ಹೀಗೆ ಮುಂದುವರೆಯಲಿ ಮತ್ತು ಸಾವಿರಾರು ಜನಕ್ಕೆ ಸ್ಪೂರ್ತಿಯಾಗಿರುವ ಇವರಿಗೆ ರಾಜ್ಯ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ದೊರಕಲಿ ಎಂದು ಆಶಿಸಿದರು. ಸಹಕಾರ ರತ್ನ ನಂಜುಂಡಪ್ಪರವರು ಅನೇಕ ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿ ಉತ್ತಮವಾದ ಕಾರ್ಯವನ್ನು ಮಾಡುತ್ತಿದ್ದಾರೆ ಅವರಿಗೆ ಶುಭಕೋರಿದರು.
ಇದೇ ವೇಳೆ ಚಾಮುಲ್, ಯೂನಿಯನ್ ಅಧ್ಯಕ್ಷರು ಮತ್ತು ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಹೆಚ್. ಎಸ್. ನಂಜುಂಡ ಪ್ರಸಾದ್ ಮತ್ತು ಮೈಸೂರು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರುಸ್ಕೃತರಾದ ಹಿರಿಯ ರಂಗಭೂಮಿ ಕಲಾವಿದ ಕೆರೆಹಳ್ಳಿ ಬಿ. ದೊರೆಸ್ವಾಮಿ ಅವರನ್ಮು ಸನ್ಮಾನಿಸಿದರು.
ಈ ವಿಶೇಷ ಸುದ್ದಿ ಓದಿದ್ದೀರಾ? ಒಳಮೀಸಲಾತಿ ಜಾರಿಗೆ ಸಿದ್ದರಾಮನಹುಂಡಿ ಜಾಥಾ: ಸಾಮಾಜಿಕ ನ್ಯಾಯದ ಹೋರಾಟ ಹತ್ತಿಕ್ಕಿದ ಸರ್ಕಾರ
ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಕುದೇರು ಮಠದ ಗುರು ಶಾಂತಮ್ಮ ಸ್ವಾಮಿಜಿ, ರಾಘವೇಂದ್ರ ನಗರ ಮಠದ ಶ್ರೀಗಳು, ಜಯರಾಮು, ಆಯೋಜಕರಾದ ಬಿ.ಸಿ. ಮಹದೇವಸ್ವಾಮಿ, ಚಿಕ್ಕ ರೇಖಾ, ಶಿವಕುಮಾರ್ ಮುರುಡಗಳ್ಳಿ ಶಿವಣ್ಣ, ಜಗದೀಶ್, ಮಲ್ಲು, ಸುರೇಶ್ ಕೋಚನಹಳ್ಳಿ, ಪುರುಷೋತ್ತಮ್ ಸೇರಿದಂತೆ ಇನ್ನಿತರರು ಇದ್ದರು.





