ಅಂಗನವಾಡಿಗೊಂದು ನಾಮಫಲಕವಿಲ್ಲ, ಗ್ರಾಮಕ್ಕೆ ರಸ್ತೆಯಿಲ್ಲ; ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ

Date:

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಬಿ ದಾಸರಹಟ್ಟಿ ಗ್ರಾಮ ಸಮಸ್ಯೆಗಳ ಗೂಡಾಗಿದೆ. ಆರು ವರ್ಷದೊಳಗಿನ ಪುಟಾಣಿ ಮಕ್ಕಳಿಗೆ ಪೌಷ್ಠಿಕ ಆಹಾರ, ಆರೋಗ್ಯ ತಪಾಸಣೆ, ಚುಚ್ಚುಮದ್ದು ಮತ್ತು ಪೂರ್ವ ಪ್ರಾಥಮಿಕ ಶಿಕ್ಷಣ ಒದಗಿಸುವ ಹೊಣೆ ಹೊತ್ತಿರುವ ಇಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಮೂಲಸೌಕರ್ಯಗಳೇ ಇಲ್ಲ.

ಕಡೂರಿನಿಂದ ಕೇವಲ ಐದು ಕಿಲೋಮೀಟರ್ ದೂರದಲ್ಲಿ ಇರುವ ಹುಲ್ಲೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿ. ದಾಸರಹಟ್ಟಿಯಲ್ಲಿ ಉಪ್ಪಾರ ಸಮುದಾಯದ 55–60 ಕುಟುಂಬಗಳು ವಾಸಿಸುತ್ತಿವೆ. ಹಲವು ವರ್ಷಗಳಿಂದ ಇಲ್ಲಿ ಅಂಗನವಾಡಿ ಕಾರ್ಯನಿರ್ವಹಿಸುತ್ತಿದ್ದರೂ, ಕೇಂದ್ರದ ಅಸ್ತಿತ್ವವನ್ನು ತೋರಿಸುವ ಫಲಕವನ್ನೇ ಇನ್ನೂ ಸ್ಥಾಪಿಸಲು ಸಾಧ್ಯವಾಗಿಲ್ಲ.

Screenshot 2025 11 21 13 24 38 49 99c04817c0de5652397fc8b56c3b3817
ಬಿ.ದಾಸರಹಟ್ಟಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಕಲಿಕೆ ಪಡೆಯುತ್ತಿರುವ ಮಕ್ಕಳು

ಅಂಗನವಾಡಿ ಕೇಂದ್ರದಲ್ಲಿ ದಿನವೂ 8-10 ಮಕ್ಕಳು ಪಾಠಕ್ಕೆ ಬರುತ್ತವೆ. ಆ ಮಕ್ಕಳು ಬರುವ ರಸ್ತೆಯೂ ಸರಿಯಾಗಿಲ್ಲ. ಮಳೆಗಾಲದಲ್ಲಿ ಹಳ್ಳ, ಬೇಸಿಗೆಯಲ್ಲಿ ಧೂಳಿನ ಕಂದಕವಾಗುತ್ತದೆ ಎನ್ನುವುದು ಗ್ರಾಮಸ್ಥರ ಆರೋಪ. ಶುದ್ಧ ಕುಡಿಯುವ ನೀರು, ವಿದ್ಯುತ್‌ ಯಾವ ಸೌಲಭ್ಯವೂ ಇಲ್ಲ. ಇದು ಸಾಲದೆಂಬಂತೆ ಅಂಗನವಾಡಿ ಆವರಣದ ಸುತ್ತ ಹಾವುಗಳ ಹಾವಳಿ. ಹುಲ್ಲು, ಗಂಟಿಗಳಿಂದ ತುಂಬಿರುವ ಪ್ರದೇಶದಲ್ಲಿ ಹಾವು ಕಾಣುವುದು ಸಾಮಾನ್ಯ. ಆದರೆ ಇದೇ ಸ್ಥಳದಲ್ಲಿ ಮಕ್ಕಳು ದಿನವೂ ಸಮಯ ಕಳೆಯುತ್ತಿರುವುದು ಇದಕ್ಕಿಂತ ಭಯಾನಕ ಎನ್ನುವುದು ಪೋಷಕರ ಇನ್ನೊಂದು ಆತಂಕ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅಂಗನವಾಡಿ ಸಹಾಯಕಿ ಹಾಗೂ ಕಾರ್ಯಕರ್ತೆಯರ ಕೊರತೆಯಿಂದ ಸೇವೆಗಳ ಗುಣಮಟ್ಟ ಕೂಡ ಕುಸಿದಿದೆ. ಪೌಷ್ಠಿಕ ಆಹಾರ ವಿತರಣೆ, ಆರೋಗ್ಯ ತಪಾಸಣೆ, ಚುಚ್ಚುಮದ್ದಿನ ಮಾಹಿತಿ ಎಲ್ಲವೂ ಕಾಗದದಲ್ಲಿ ಮಾತ್ರ ನಡೆಯುವಂತಾಗಿದೆ.

Screenshot 2025 11 21 13 24 49 02 99c04817c0de5652397fc8b56c3b3817
ಅಂಗನವಾಡಿ ಸುತ್ತಲೂ ಬೆಳೆದು ನಿಂತಿರುವ ಗಿಡ ಗಂಟಿಗಳು

ಸಮಸ್ಯೆ ಕುರಿತು ಈ ದಿನಕ್ಕೆ ಪ್ರತಿಕ್ರಿಯಿಸಿದ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಗೀತಾ, “ಸಮಸ್ಯೆಗಳ ಕುರಿತು ಅನೇಕ ಬಾರಿ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಸರಿಯಾದ ಸ್ಪಂದನೆ ಇಲ್ಲ. ಅಂಗನವಾಡಿ ಕೇಂದ್ರಕ್ಕೆ ನಾಮಫಲಕ ಹಾಕಿಸಿಕೊಡಿ, ರಸ್ತೆ ದುರಸ್ತಿ ಮಾಡಿಕೊಡಿ ಎಂದು ಸಾಕಷ್ಟು ಬಾರಿ ಅವಲತ್ತುಕೊಂಡಿದ್ದೇವೆ. ಬಲ್ಬ್‌ ಹೋಗಿದೆ, ಹೊಸ ಬಲ್ಬ್‌ ಕೊಡಿಸಿ ಎಂದರೆ, ಕೊಡೋಣ, ಅಷ್ಟು ಅರ್ಜೆಂಟ್‌ ಏನು? ಎನ್ನುತ್ತಾರೆ. ಹಲವು ದಿನಗಳಿಂದ ಇದೇ ಪರಿಸ್ಥಿತಿ ಎದುರಿಸುತ್ತಿದ್ದೇವೆ. ಮಕ್ಕಳಿಗೆ ಸುಂದರ ಭವಿಷ್ಯ ರೂಪಿಸಬೇಕಾದ ಅಧಿಕಾರಿಗಳೇ ಹೀಗೇ ಬೇಜವಾಬ್ದಾರಿ ತೋರಿದರೆ, ಸಮಸ್ಯೆ ಹೇಳುವುದಾದರೂ ಯಾರಿಗೆ?” ಎಂದು ಅಳಲು ತೋಡಿಕೊಂಡರು.

Screenshot 2025 11 21 13 24 25 87 99c04817c0de5652397fc8b56c3b3817
ಬಿ ದಾಸರಹಟ್ಟಿ ಅಂಗನವಾಡಿ ಕೇಂದ್ರದ ಶಿಕ್ಷಕಿ ಹಾಗೂ ಸಹಾಯಕಿ ಗೀತಾ

“ಅಂಗನವಾಡಿ ಸುತ್ತಲೂ ಹಾವುಗಳು ಬರುತ್ತಿವೆ. ಮೊನ್ನೆ ಕೂಡ ಹಾವು ಬಂದಿತ್ತು. ಇದರಿಂದ ಮಕ್ಕಳು ಭಯ ಪಡುತ್ತಿದ್ದಾರೆ. ಆವರಣದ ಸುತ್ತಲೂ ಪೊದೆ, ಗಿಡ ಗಂಟಿಗಳೇ ತುಂಬಿವೆ. ಎರಡ ಮೂರು ಬಾರಿ ಕಳೆ ನಾಶಕ ಸಿಂಪಡಿಸಿದ್ದೆವು. ಸ್ವಚ್ಛಗೊಳಿಸಿ ಕೊಡಿ ಎಂದು ಕೇಳಿದರೆ, ಉಡಾಫೆ ಉತ್ತರ ನೀಡುತ್ತಾರೆ. ಈ ಅಂಗನವಾಡಿಯಲ್ಲಿ ನಾನೇ ಶಿಕ್ಷಕಿ ಮತ್ತು ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ನಾನು ಕೆಲಸದಲ್ಲಿ ತೊಡಗಿಕೊಂಡಿದ್ದಾಗ ಸದ್ದಿಲ್ಲದೇ ವಿಷಜಂತುಗಳು ಒಳಗೆ ನುಗ್ಗಿ ಮಕ್ಕಳಿಗೆ ತೊಂದರೆ ಮಾಡಿದರೆ ಯಾರು ಹೊಣೆ? ಪೋಷಕರು ನಮ್ಮ ಮೇಲೆ ನಂಬಿಕೆ ಇರಿಸಿ ಮಕ್ಕಳನ್ನು ಕಳಿಸುತ್ತಾರೆ. ಗೊತ್ತಿಲ್ಲದೇ ಅನಾಹುತಗಳಾದರೆ ಯಾರನ್ನ ದೂರಬೇಕು?” ಎಂದು ಆತಂಕ ವ್ಯಕ್ತಪಡಿಸಿದರು.

Screenshot 2025 11 21 13 23 50 70 99c04817c0de5652397fc8b56c3b3817
ಸಿಗಬೇಕಾದ ಮೂಲಭೂತ ಸೌಕರ್ಯವಿಲ್ಲದೆ ಶಾಲೆಯನ್ನು ಮುಚ್ಚಲಾಗಿದೆ.

ಗ್ರಾಮದ ನಿವಾಸಿ, ರೈತ ಮುಖಂಡ ಚಂದ್ರ ಶೇಖರ್ ಮಾತನಾಡಿ, “ಈ ಹಿಂದೆ ನಮ್ಮೂರಲ್ಲಿ ಶಾಲೆ ಐದನೇ ತರಗತಿವರೆಗೆ ಚನ್ನಾಗಿ ನಡೆಯುತ್ತಿತ್ತು. ಶಿಕ್ಷಕರ ಬೇಜವಾಬ್ದಾರಿ ಹಾಗೂ ಮೂಲ ಸೌಕರ್ಯಗಳ ಕೊರತೆಯಿಂದ ಈಗ ಶಾಲೆ ಮುಚ್ಚಿದ್ದಾರೆ. ಶಾಲೆ ಮುಚ್ಚಿದ ಹಾಗೆ ಈ ಅಂಗನವಾಡಿಯನ್ನೂ ಮುಚ್ಚುವ ಹುನ್ನಾರ ನಡೆಸುತ್ತಿದ್ದಾರೆಯೇ ಎನ್ನುವ ಅನುಮಾನ ಮೂಡಿದೆ. ಈ ಊರಲ್ಲಿ ವಯಸ್ಸಾದವರು ಓಡಾಡಲೂ ರಸ್ತೆ ಸರಿಯಾಗಿಲ್ಲ. ಮಳೆಗಾಲದಲ್ಲಂತೂ ಜನ ಜೀವನ ಅಸ್ತವ್ಯಸ್ತವಾಗುತ್ತದೆ. ಎಷ್ಟೋ ಜನ ಬಿದ್ದು ಕಾಲು ಮುರಿದುಕೊಂಡಿದ್ದಾರೆ. ಮಾನಗೆಟ್ಟ ಅಧಿಕಾರಿಗಳು, ಆಳ್ವಿಕೆ ಮಾಡುತ್ತಿರುವ ಶಾಸಕರಿಗೇನಾಗಬೇಕು. ಬಡವರು ಸಾಯುತ್ತಿರುವುದು ಇಲ್ಲಿ, ಶ್ರೀಮಂತರು ಚನ್ನಾಗಿಯೇ ಇದ್ದಾರೆ. ಇವ್ರಿಗೆ ಮಾರ್ರ್ಯಾದೆ ಅನ್ನೋದು ಇದ್ರೆ ನಮಗೆ ಸಿಗಬೇಕಿದ್ದ ಹಕ್ಕು ಸೌಲಭ್ಯವನ್ನು ಒದಗಿಸಬೇಕಿತ್ತು” ಎಂದು ಆಕ್ರೋಶ ಹೊರಹಾಕಿದರು.

Screenshot 2025 11 21 13 24 12 16 99c04817c0de5652397fc8b56c3b3817
ಬಿ. ದಾಸರಹಟ್ಟಿ ಗ್ರಾಮದ ನಿವಾಸಿ ಚಂದ್ರಶೇಖರ್

“ತುಂಬು ಗರ್ಭಿಣಿಯರನ್ನು ಈ ರಸ್ತೆಯಲ್ಲಿ ಕರೆದುಕೊಂಡು ಹೋಗುವಾಗ ಸಾಕಷ್ಟು ಬಾರಿ ಅನಾಹುತಗಳಾಗಿವೆ. ಶಾಲೆಗೆ ಹಾಗೂ ಅಂಗನವಾಡಿಗೆ ಹೋಗುವಂತಹ ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿದೆ. ಸೂಕ್ತವಾದ ಕಾಂಕ್ರೀಟ್ ರಸ್ತೆ ಮಾಡಿಕೊಡಿ ಎಂದು ಕೇಳಿದರೆ ಉಡಾಫೆ ಉತ್ತರ ನೀಡುತ್ತಾರೆ. ಇಲ್ಲಿವರೆಗೂ ನಮ್ಮೂರಿಗೆ ಡಾಂಬರ್ ಕಾಣದ ರಸ್ತೆಯಿಂದ ಕಂಗಾಲಾಗಿದ್ದೇವೆ. ಓಟ್ ಕೇಳಾಕ್ ಮಾತ್ರ ಬರ್ತಾರೆ ಅಷ್ಟೆ. ಬಾಕಿ ಸಮಯದಲ್ಲಿ ಇತ್ತ ತಿರುಗಿಯೂ ನೋಡಲ್ಲ” ಎನ್ನುತ್ತಾರೆ ಗ್ರಾಮದ ವೃದ್ಧೆಯೊಬ್ಬರು.

Screenshot 2025 11 21 13 23 38 92 99c04817c0de5652397fc8b56c3b3817
ನಮ್ಮೂರಿಗೆ ಒಂದಿಷ್ಟು ರಸ್ತೆ ಮಾಡಿಕೊಡಿ ಎಂದು ಅಂಗಲಾಚಿ ಬೇಡುತ್ತಿರುವ ವೃದ್ದೆ

“ನಮ್ಮ ಮತ ತೆಗೆದುಕೊಂಡು ಆಯ್ಕೆಯಾಗಿರುವ ಶಾಸಕರು ಕೂಡ ನಮ್ಮ ಹಳ್ಳಿಗೆ ಬಂದಿಲ್ಲ. ನಮ್ಮೂರಿನ ಸಮಸ್ಯೆ ಹಾಗೂ ಅಭಿವೃದ್ಧಿ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲವೆಂದು ಅವರ ನಡಯೇ ತೋರುತ್ತಿದೆ. ಇನ್ನಾದರೂ ನಮ್ಮೂರಿಗೆ ಡಾಂಬರ್ ರಸ್ತೆ ಹಾಗೂ ಅಂಗನವಾಡಿಗೆ ಸಿಗಬೇಕಾದ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ನಮ್ಮ ಗ್ರಾಮಸ್ಥರೆಲ್ಲ ಅಧಿಕಾರಿಗಳಿಗೆ ಹಾಗೂ ಶಾಸಕರಿಗೆ ಮನವಿ ಮಾಡುತ್ತೇವೆ” ಎಂದರು.

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ರಾಸಾಯನಿಕ ಸಿಂಪರಣೆ; ಸಾವಿರಾರು ಜೇನು ಹುಳುಗಳು ಸಾವು

ವರ್ಷಗಳಿಂದಲೂ ಮಾಡುತ್ತಿರುವ ಮನವಿಗಳಿಗೆ ಅಧಿಕಾರಿಗಳ ಪ್ರತಿಕ್ರಿಯೆ ಕೇವಲ ನಿರ್ಲಕ್ಷ್ಯ ಎಂದಾದರೆ ಆ ಸ್ಥಾನದಲ್ಲಿದ್ದು ಮಾಡುವುದಾದರೂ ಏನು? ಬಿ. ದಾಸರಹಟ್ಟಿಯಂತಹ ಗ್ರಾಮಗಳು ಅಭಿವೃದ್ಧಿಯ ಮುಖ್ಯ ವಾಹಿನಿಗೆ ಬರುವುದು ಯಾವಾಗ? ಎನ್ನುವುದು ಸದ್ಯದ ಪ್ರಶ್ನೆ. ಚಿಕ್ಕದೋ ದೊಡ್ಡದೋ ಸಮಸ್ಯೆಯಂತೂ ಸಮಸ್ಯೆಯೇ. ಸಂಬಂಧಪಟ್ಟವರು ಅಸಡ್ಡೆ ತೋರುವುದಂತೂ ಸಲ್ಲದು. ಈ ಗ್ರಾಮಸ್ಥರ ಅಳಲನ್ನು ಗಂಭೀರವಾಗಿ ಪರಿಗಣಿಸಿ ಅಧಿಕಾರಿಗಳು ಆದ್ಯತೆ ಮೇರೆಗೆ ತಕ್ಷಣ ಕ್ರಮ ಕೈಗೊಳ್ಳುವುದು ಅಗತ್ಯ. ಪುಟಾಣಿ ಮಕ್ಕಳ ಹಕ್ಕುಗಳನ್ನು ಕಾಪಾಡುವುದು ಸರ್ಕಾರದ ಹಾಗೂ ಸ್ಥಳೀಯ ಸಂಸ್ಥೆಗಳ ಪ್ರಾಥಮಿಕ ಜವಾಬ್ದಾರಿ. ಇದು ಅಂಗನವಾಡಿಯ ವಿಷಯ ಮಾತ್ರವಲ್ಲ, ಗ್ರಾಮೀಣ ಮಕ್ಕಳ ಭವಿಷ್ಯದ ಪ್ರಶ್ನೆ ಎನ್ನುವುದನ್ನು ಸದಾ ನೆನಪಿನಲ್ಲಿಡಬೇಕು ಎನ್ನುತ್ತಾರೆ ಗ್ರಾಮಸ್ಥರು.

WhatsApp Image 2024 10 24 at 12.02.30
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಂಡ್ಲುಪೇಟೆ | ಸಿಡಿಪಿಒ ವಿರುದ್ಧ ಜಾರಕಿಹೊಳಿ ಬ್ರಿಗೇಡ್ ಭ್ರಷ್ಟಾಚಾರ ಆರೋಪ; ದೂರು

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಸಿಡಿಪಿಓ ಹೇಮಾವತಿ ವಿರುದ್ದ ಜಾರಕಿಹೊಳಿ ಬ್ರಿಗೇಡ್ ಜಿಲ್ಲಾಧಿಕಾರಿಯವರಿಗೆ...

ಗದಗ | SC ST ಜನರ ನಡುವೆ ಗಲಾಟೆ; ಗಾಯಾಳುಗಳು ಆಸ್ಪತ್ರೆಗೆ ದಾಖಲು

ನೀರು ಕುಡಿದ ವಿಚಾರಕ್ಕೆ ಪರಿಶಿಷ್ಟ ಜಾತಿ(SC) ಪರಿಶಿಷ್ಟ(ST) ಜನಾಂಗದವರ ನಡುವೆ ಗಲಾಟೆ...

ದಾವಣಗೆರೆ | ರಾಜಕಾಲುವೆ ಚರಂಡಿ ಹಾಗೂ ತಡೆ ಗೋಡೆ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ತಹಶೀಲ್ದಾರ್ ಆದೇಶ

ರಾಜಕಾಲುವೆ ಭೂಮಾಪನ ಕಾರ್ಯ ಸಂಪೂರ್ಣಗೊಳ್ಳುವವರೆಗೆ ಹರಿಹರ ನಗರದ ರಾಜ ಕಾಲುವೆಯಲ್ಲಿ ಸಣ್ಣ...

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...