ಸೌಜನ್ಯ ಪ್ರಕರಣ | ಧರ್ಮಸ್ಥಳ ಧರ್ಮಾಧಿಕಾರಿಯ ದರ್ಪ ದೌರ್ಜನ್ಯ ಬಯಲಾಗಿದೆ: ತಿಮರೋಡಿ

Date:

ಸೌಜನ್ಯ ಪ್ರಕರಣ ಧರ್ಮಸ್ಥಳದಲ್ಲಿ ಸುದೀರ್ಘವಾಗಿ ನಡೆದುಕೊಂಡು ಬಂದಿರುವ ಅತ್ಯಾಚಾರ -ಅನಾಚಾರ, ಧರ್ಮಾಧಿಕಾರಿ ಹೆಸರಿನ ದರ್ಪ ದೌರ್ಜನ್ಯಗಳನ್ನು ವಿಶ್ವದ ಮುಂದೆ ಬಯಲು ಮಾಡಿದೆ. ಯಾವ ಹೆಣ್ಣುಮಗುವಿಗೂ ಬರಬಾರದ ಕ್ರೂರ ಸ್ಥಿತಿಯಲ್ಲಿ ಸೌಜನ್ಯ ಅತ್ಯಾಚಾರ ಕೊಲೆ ನಡೆದಿದೆ ಎಂದು ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಹೇಳಿದ್ದಾರೆ.

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಹೋರಾಟಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಒಡನಾಡಿ ಸಂಸ್ಥೆ ಆಯೋಜಿಸಿದ್ದ ‘ಸೌಜನ್ಯ ಸಂವಾದ’ ಕಾರ್ಯಕ್ರಮದಲ್ಲಿಅವರು ಮಾತನಾಡಿದರು. “ನಾವು ಗುರುತಿಸಿರುವಂತೆ ಹಾಗೂ ಸೌಜನ್ಯ ಕುಟುಂಬ ದೂರು ನೀಡಿರುವಂತೆ ಮಲಿಕ್ ಜೈನ್, ಉದಯ್ ಜೈನ್, ಹರ್ಷಿತ್ ಜೈನ್, ನಿಶ್ಚಲ್ ಜೈನ್ – ಇವರೆಲ್ಲ ನಿಜವಾಗಿ ನಿಜವಾದ ಆರೋಪಿಗಳು. ಆದರೆ, ಅವರನ್ನು ವಿಚಾರಣೆಗೆ ಒಳಪಡಿಸಿದರೆ, ನಿರ್ದೋಶಿ ಸಂತೋಷ್‌ ರಾವ್‌ಅನ್ನು ಬಂಧಿಸಿ, ಹಿಂಸೆ ನೀಡಿದರು. ಸಂತೋಷ್ ನಿರಪರಾಧಿ ಎಂದು ಸಿಬಿಐ ಕೋರ್ಟ್‌ ತೀರ್ಪು ನೀಡಿದ ನಂತರವೂ, ಸೌಜನ್ಯ ಕುಟುಂಬ ಗುರುತಿಸಲ್ಪಟ್ಟ ಆರೋಪಿಗಳ ಪರ ವಕೀಲರು ಮಾಧ್ಯಮಗಳ ಮುಂದೆ ಬೊಬ್ಬೆ ಹಾಕುತ್ತಿದ್ದಾರೆ” ಎಂದು ಕಿಡಿಕಾರಿದರು.

“80ರ ದಶಕದಲ್ಲಿ ಧರ್ಮಸ್ಥಳ ಪಂಚಾಯತಿಯಲ್ಲಿ ಚುನಾವಣೆಗೆ ಸ್ಪರ್ಧಿಸದಂತೆ ತಡೆಯಲು ಕುಟುಂಬವೊಂದರ ಯುವತಿ ಪದ್ಮಲತಾ ಎಂಬಾಕೆಯನ್ನು ಅಪಹರಿಸಿ ನಿರಂತರವಾಗಿ 40 ದಿವಸ ಅತ್ಯಾಚಾರ ಎಸಗಿ, ಕೊಲೆ ಮಾಡಲಾಗಿತ್ತು. ವೇದಾವಲ್ಲಿ ಎಂಬ ಶಿಕ್ಷಕಿ ವರ್ಗಾವಣೆಗೆ ಒಪ್ಪಲಿಲ್ಲ ಎಂಬ ಕಾರಣಕ್ಕಾಗಿ ಆಕೆಯನ್ನು ಪೆಟ್ರೋಲ್ ಹಾಕಿ ಸುಟ್ಟುಬಿಟ್ಟರು. ಅದನ್ನು ಕಂಡ ಸಾಕ್ಷಿಗಳಾದ ಇಬ್ಬರು ಹೆಣ್ಣುಮಕ್ಕಳು ಮರುದಿನವೇ ಹೆಣವಾಗಿದ್ದರು” ಎಂದು ಆರೋಪಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಅದೇರೀತಿ ಸೌಜನ್ಯ ಬದಲಿಗೆ ವರ್ಷಾ ಎಂಬ ಬ್ರಾಹ್ಮಣ ಹೆಣ್ಣು ಮಗುವಿನ ಅತ್ಯಾಚಾರ ಕೊಲೆ ಆಗಬೇಕಿತ್ತು. ಆಕೆಯ ಕುಟುಂಬ ಧರ್ಮಸ್ಥಳದವರಿಗೆ ತಮ್ಮ ಭೂಮಿ ಕೊಡದಿದ್ದಕ್ಕೆ ಹೆದರಿಸಿ ಒಕ್ಕಲೆಬ್ಬಿಸಲು ಮಾಡಿದ ತಂತ್ರ ಅದು. ಆದರೆ, ವರ್ಷಾ ಅದೃಷ್ಟವಶಾತ್ ಬಚಾವಾಗಿದ್ದಳು. ಆರೋಪಿಗಳಲ್ಲಿ ಒಬ್ಬನಾದ ಮಲಿಕ್ ಜೈನ್ ಎಂಬಾತ ಸೌಜನ್ಯ ತಾಯಿಯ ಕ್ಲಾಸ್‌ಮೆಟ್. ಆತನನ್ನು ಸೌಜನ್ಯ ಕಾಣೆಯಾದ ದಿನ ಆಕೆ ನೋಡಿದ್ದು ಮಾತ್ರವಲ್ಲ, ಅವರ ಸಂಚು ರೂಪಿಸುತ್ತಿದ್ದದ್ದನ್ನು ಕೇಳಿಸಿಕೊಂಡಿದ್ದರು. ಅದಾಗ್ಯೂ, ಪ್ರಕರಣದ ಪ್ರಮುಖ ಸಾಕ್ಷಿಗಳಾದ ಪರಿಮಳ ಎಂಬ ಶಿಕ್ಷಕಿ ಮತ್ತು ಬಂಟ ಸಮುದಾಯದ ಹುಡುಗಿಯ ಸ್ಟೆಟ್‌ಮೆಂಟ್ ಪಡೆದು ತನಿಖೆ ಮಾಡಿಸಿ ಚಾರ್ಜ್‌ಶೀಟ್ ಹಾಕಲಾಗಿಲ್ಲ. ಆ ಶಿಕ್ಷಕಿ ನೀಡಿದ್ದ ದೂರನ್ನು ಪೊಲೀಸರು ದಾಖಲಿಸಲಿಲ್ಲ. ಪೊಲೀಸರು ಮತ್ತು ಧರ್ಮಸ್ಥಳದವರು ವ್ಯವಸ್ಥಿತವಾಗಿ ಪ್ರಕರಣವನ್ನು ಸಂಪೂರ್ಣವಾಗಿ ಹಳ್ಳ ಇಡಿಸಿದರು” ಎಂದು ದೂರಿದ್ದಾರೆ.

“ಅಕ್ಟೋಬರ್ 11ನೇ ತಾರೀಖು, ಈ ಪ್ರಕರಣದ ಪರ ನೀವು ದನಿ ಎತ್ತಬೇಕು ಅಂತ ಸರ್ಕಲ್ ಇನ್ಸ್‌ಪೆಕ್ಟರ್ ನನ್ನನ್ನ ಕರೆಸುತ್ತಾರೆ. ಆದರೆ, ಎಸ್‌ಪಿ ನನ್ನ ವಿರುದ್ಧ ಎಫ್‌ಐಆರ್‌ ದಾಖಲಿಸಲು ಸೂಚಿಸುತ್ತಾರೆ. ಅದೂ ದೊಡ್ಡವರ (ವೀರೇಂದ್ರ ಹೆಗಡೆ) ಸೂಚನೆಯಂತೆ ಅನ್ನೋದು ಗೊತ್ತಾದಾಗಲಿಂದ ನಾನು ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ್ದೇನೆ. ಸೌಜನ್ಯಗಳಿಗೆ ನ್ಯಾಯ ಕೊಡಿಸದೆ ಬಿಡುವುದಿಲ್ಲ” ಎಂದು ಹೇಳಿದ್ದಾರೆ.

WhatsApp Image 2023 07 13 at 12.14.50 PM

“ಧರ್ಮಸ್ಥಳದಲ್ಲಿ ಅತ್ಯಾಚಾರ-ಕೊಲೆಗಳು ಎಷ್ಟು ಭೀಕರವಾಗಿ ನಡೆಯುತ್ತವೆ ಎಂಬುದನ್ನು ಆ ಊರಿನ ಜನರನ್ನು ಕೇಳಿದರೆ ತಿಳಿಯುತ್ತದೆ. ಧರ್ಮಸ್ಥಳದಲ್ಲಿ ಪೊಲೀಸರು, ಆಡಳಿತ, ಮಾಧ್ಯಮಗಳು ಕೂಡ ಮಾರಾಟವಾಗಿವೆ. ಸೌಜನ್ಯ ಪರ ನ್ಯಾಯಕ್ಕಾಗಿ ಆಗ್ರಹಿಸಿ ಒಂದು ಪ್ರೆಸ್‌ಮೀಟ್ ಕರೆದೂ ಬರುವುದಿಲ್ಲ. ಸೌಜನ್ಯ ಕುಟುಂಬ ಹೊರತಾಗಿ ಇದುವರೆಗೂ ಧರ್ಮಸ್ಥಳದಲ್ಲಿ ವೀರೇಂದ್ರ ಹೆಗ್ಗಡೆ ವಿರುದ್ಧ ಯಾರೂ ನ್ಯಾಯಕ್ಕಾಗಿ ದನಿ ಎತ್ತಿಲ್ಲ. ಧರ್ಮಸ್ಥಳದಿಂದ ಇಲ್ಲಿಗೆ ಬಂದಿರುವ ನನ್ನನ್ನು, ಸೌಜನ್ಯ ಕುಟುಂಬವನ್ನು ಯಾವಾಗ ಬೇಕಿದ್ದರೂ ಕೊಲೆ ಮಾಡಬಹುದು. ನಮಗೆ ಏನೇ ಆದರೂ ಅವರೇ ಕಾರಣ” ಎಂದರು.

“2012ರಲ್ಲಿ ಮುಖ್ಯಮಂತ್ರಿಯಾಗಿದ್ದ ಸದಾನಂದಗೌಡ, ಗೃಹಮಂತ್ರಿಯಾಗಿದ್ದ ಆರ್ ಅಶೋಕ್ ಸೇರಿದಂತೆ ಅಧಿಕಾರದಲ್ಲಿದ್ದ ಯಾರೂ ಸೌಜನ್ಯ ಕುರಿತು ಮಾತಾಡಲಿಲ್ಲ. ಧರ್ಮಸ್ಥಳಕ್ಕೆ ಬಂದು ಸೂಟ್‌ಕೇಸ್ ತೆಗೆದುಕೊಂಡು ಹೋದರು. ಆದ್ದರಿಂದ ಯಾವುದೇ ಸರ್ಕಾರ ಬಂದರೂ ವೀರೇಂದ್ರ ಹೆಗಡೆ ಕೇಸ್ ಮುಚ್ಚಿಸುತ್ತಾರೆ. ಇಡೀ ಸರ್ಕಾರವೇ ಅವರದ್ದು. ಅದಾಗ್ಯೂ, ಇವರ ಹಣೆಬರಹ ವಿಶ್ವಕ್ಕೆ ಗೊತ್ತಾಗಬೇಕು” ಎಂದರು.

“ಸೌಜನ್ಯ ಪ್ರಕರಣದ ಸಾಕ್ಷಿಗಳಾದ ರವಿ ಪೂಜಾರಿ, ಆರೋಪಿಯ ಮನೆ ಕೆಲಸದಾಕೆ ಎಲ್ಲರನ್ನು ಕೊಲೆ ಮಾಡಲಾಗಿದೆ. ನಮ್ಮದು ಯಾವಾಗ ಕೊಲೆ ಆಗತ್ತೊ ಗೊತ್ತಿಲ್ಲ. ಆಕ್ಸಿಡೆಂಟ್ ಎಂದು ಬಿಂಬಿಸಿಬಿಡುತ್ತಾರೆ. ಧರ್ಮಸ್ಥಳದ ಸುತ್ತಮುತ್ತ ಅಥವಾ ಅವರು ಕಣ್ಣು ಹಾಕಿದ ಜಾಗವೆಲ್ಲ ಅವರಿಗೆ ಬೇಕು. ಕೊಡದೆ ವಿರೋಧ ಮಾಡಿದ್ರೆ, ಮರುದಿನ ಅವರ ಕೊಲೆ ಆಗಿರುತ್ತದೆ. ಬಹುತೇಕರನ್ನು ಜಾಗಕ್ಕಾಗಿ ಸ್ಲೋ ಪಾಯಿಸನ್ ಕೊಟ್ಟು ಸಾಯಿಸಿದ್ದಾರೆ. ಇದರ ಬಗ್ಗೆ ಮಾತಾಡಿದರೆ‌,‌ ವಿರೇಂದ್ರ ಹೆಗಡೆ ಮೇಲೆ ಆರೋಪ ಮಾಡಿದರೆ, ಕಂಟೆಂಪ್ಟ್ ಆಫ್ ಕೋರ್ಟ್ ಆಗುತ್ತದೆ. ಪೊಲೀಸ್, ಇಡಿ, ಸಿಬಿಐ, ನ್ಯಾಯಾಲಯ ಎಲ್ಲದರ ಮೇಲೂ ನಂಬಿಕೆ ಕಳೆದುಕೊಂಡಿದ್ದೇವೆ. ಸಮಾಜ, ಜನ ಮಾತ್ರವೇ ನಮಗೆ ಆಶಾವಾದ” ಎಂದು ತಿಮರೋಡಿ ಹೇಳಿದರು.

ಕಾರ್ಯಕ್ರಮದಲ್ಲಿ ಮತಾನಾಡಿದ ಸೌಜನ್ಯ ತಾಯಿ ಕುಸುಮಾವತಿ, “ನನ್ನ ಮಗಳನ್ನು ಅತ್ಯಾಚಾರ ಮಾಡಿದವರು ಅವಳನ್ನು ಸಾಯಿಸದೆ ಹಾಗೆ ಬಿಟ್ಟಿದ್ದರೆ ಸಾಕಿತ್ತು. ತಾಯಿಯಾಗಿ ನನ್ನ ಮಗುವನ್ನು ನಾನು ಸಾಕುತ್ತಿದ್ದೆ. ಆದರೆ, ನನ್ನ ಮಗು ಕ್ರೂರವಾಗಿ ಸತ್ತದ್ದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ” ಎಂದು ಕಣ್ತುಂಬಿಕೊಂಡರು.

“ಮಧ್ಯಾಹ್ನ ಊಟಕ್ಕೆ ಬರುತ್ತೇನೆ ಅಂತ ಹೇಳಿ ಖಾಲಿ ಹೊಟ್ಟೆಯಲ್ಲೇ ಹೋದ ನನ್ನ ಮಗುವಿನ ಮುಖವನ್ನು ಸರಿಯಾಗಿ ನೋಡಲಿಲ್ಲ. ಪರೀಕ್ಷೆ ಮುಗಿಸಿ ಒಂದು ಗಂಟೆಗೆ ಮನೆಗೆ ಬರಬೇಕಾದವಳು ನಾಲ್ಕು ಗಂಟೆಯಾದರೂ ಬರಲಿಲ್ಲ. ಅವಳ ಬಳಿ ಪೋನ್ ಕೂಡ ಇರಲಿಲ್ಲ. ಆದರೂ, ಅವಳ ಶವ ಸಿಕ್ಕ ಜಾಗದಲ್ಲಿ ಪೋನ್‌ ಸಿಕ್ಕಿತು ಎಂದು ಪೊಲೀಸರು ಹೇಳಿದರು. ಒಳ ಉಡುಪನ್ನು ನಮ್ಮ ಮನೆಯಿಂದ ತೆಗೆದುಕೊಂಡು ಹೋಗಿ ಅದೇ ಅವಳು ಧರಿಸಿದ್ದು ಅಂತ ಬಿಂಬಿಸಿದರು. ನನ್ನನ್ನ ಮಾನಸಿಕವಾಗಿ ಅಸ್ವಸ್ಥಳಾಗಿದ್ದಾರೆ ಅಂತ ಹೇಳಿ ಆಸ್ಪತ್ರೆಗೆ ಸೇರಿಸಿದ್ದರು. ನನ್ನ ಮಗುವಿನ ಸಾವಿಗೆ ನ್ಯಾಯ ಸಿಗಬೇಕು” ಎಂದು ಅಳಲು ತೋಡಿಕೊಂಡರು.

ಮೈಸೂರಿನ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಅವರು ಮಾತನಾಡಿ, “ಸೌಜನ್ಯ ನಮ್ಮ ಮಗಳು. ಆಕೆಗೆ ನ್ಯಾಯ ಸಿಗಬೇಕು. ನ್ಯಾಯಕ್ಕಾಗಿನ ಹೋರಾಟದಲ್ಲಿ ಸೌಜನ್ಯ ಕುಟುಂಬದೊಂದಿಗೆ ಒಡನಾಡಿ ಸಂಸ್ಥೆ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದೆ. ಅಪರಾಧಿಗಳಿಗೆ ಶಿಕ್ಷೆ ಕೊಡಿಸಲು ಸಂಸ್ಥೆ ಹೋರಾಟ ಮಾಡಲಿದೆ” ಎಂದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...