ಬೀದರ್‌ | ವೈಚಾರಿಕ ಪ್ರಜ್ಞೆ ಜೀವಂತವಾಗಿಡುವ ಶಕ್ತಿ ಪಠ್ಯಗಳಿಗಿದೆ : ಭೀಮಾಶಂಕರ ಬಿರಾದರ್

Date:

ಸಮಾಜದಲ್ಲಿ ಬೌದ್ಧಿಕತೆ, ವೈಚಾರಿಕತೆ, ಮಾನವೀಯತೆ ಜೀವಂತವಾಗಿ ಇರಿಸುವ ಶಕ್ತಿ ಪಠ್ಯಗಳಿಗಿದೆ. ಒಂದು ಪಠ್ಯ ಕೃತಿ ಹಲವು ಆಯಾಮಗಳಲ್ಲಿ ಚರ್ಚಿತವಾದರೆನೇ ಅದಕ್ಕೊಂದು ಸಾಂಸ್ಕೃತಿಕ ಮಹತ್ವ ದಕ್ಕುತ್ತದೆ ಎಂದು ಬಸವಕಲ್ಯಾಣದ ಅಧ್ಯಾಪಕ ಡಾ. ಭೀಮಾಶಂಕರ ಬಿರಾದಾರ ಹೇಳಿದರು.

ಕರ್ನಾಟಕ ಕಾಲೇಜು ಕನ್ನಡ ವಿಭಾಗ, ಬರಹಗಾರರ ಮತ್ತು ಕಲಾವಿದರ ಸಂಘ ಮತ್ತು ಬೀದರ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಹಯೋಗದಲ್ಲಿ ಬೀದರ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಬೀದರ ವಿಶ್ವವಿದ್ಯಾಲಯ ಕಲಾ ನಿಕಾಯದ ಡೀನ್ ಪ್ರೊ. ಜಗನ್ನಾಥ ಹೆಬ್ಬಾಳೆ ಅವರ ಬದುಕು ಬರಹ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದ ಗೋಷ್ಠಿಯಲ್ಲಿ ಡಾ. ಹೆಬ್ಬಾಳೆ ಅವರ ಪಠ್ಯ ಕೃತಿಗಳು ಕುರಿತು ಮಾತನಾಡಿದರು.

ʼಹಲವು ವಿಶ್ವವಿದ್ಯಾಲಯಗಳಲ್ಲಿ ಪಠ್ಯವಾಗಿ ಅನುಸಂಧಾನ ಮಾಡಿದ ಬೀದರ ಜಿಲ್ಲೆಯ ಬುಲಾಯಿ ಹಾಡುಗಳು, ಜನಪದ ಹಾಡುಗಳ ಸಂಗ್ರಹ, ಜನಪದ ಕತೆಗಳ ಸಂಗ್ರಹ ಕೃತಿಗಳಲ್ಲಿ ನೆಲ ಸಂಸ್ಕೃತಿಯ ಚಿಂತನೆ, ದೇಶಿವಾದದ ನೋಟಕ್ರಮ ಹಾಗೂ ಮಾನವೀಯ ಸಂಬಂಧಗಳ ರೂಪಕಗಳನ್ನು ಕಾಣಿಸುತ್ತವೆ. ಕನ್ನಡ ಸಾಂಸ್ಕೃತಿಕ ಪರಂಪರೆ, ಚಾರಿತ್ರಿಕ ಒತ್ತಡಗಳು, ಅಂದಿನ ಕಾಲಘಟ್ಟದ ಬದುಕಿನ ಮೌಲ್ಯಗಳು ಹಳಗನ್ನಡ ಪಠ್ಯದ ಮೂಲಕ ವಿದ್ಯಾರ್ಥಿಗಳನ್ನು ಮುಖಾಮುಖಿಯಾಗಿಸಿದ್ದಾರೆ. ಸಂಶೋಧನಾ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕೇಂದ್ರಿತವಾದ ಪಠ್ಯ ಕೃತಿಗಳು ಸಂಗ್ರಹಿಸಿ ವಿದ್ಯಾರ್ಥಿಗಳ ಓದಿಗೆ ಪ್ರೊ. ಹೆಬ್ಬಾಳೆ ಒದಗಿಸಿದ್ದಾರೆʼ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ʼಬೀದರ ಮಣ್ಣಿನಲ್ಲಿ ಸಮಾಜವಾದದ ಎಳೆಯೊಂದು ಜೀವಂತವಾಗಿಟ್ಟ, ಲೋಹಿಯಾ ಅವರ ಒಡನಾಡಿ ಆರ್. ವಿ. ಬಿಡಪ್ ಅವರ ಕನ್ನಡ, ಕರ್ನಾಟಕ ಮತ್ತು ಅವರಲ್ಲಿ ಅಡಗಿದ ಈ ನೆಲದ ಪ್ರೀತಿಯ ಹಾಗೂ ಕಾಳಜಿಯ ಕಥನವನ್ನು ಆರ್.ವಿ.ಬಿಡಪ್ ಅವರ ಜೀವನ ಕಥನದಲ್ಲಿ ಹೆಬ್ಬಾಳೆ ಕಟ್ಟಿ ಕೊಟ್ಟಿದ್ದಾರೆ. ದೇಸಿ ಪ್ರಜ್ಞೆ, ನೇಟಿವಿಸಮ್, ಮಾನವೀಯತೆ ಹೆಬ್ಬಾಳೆಯವರ ಪಠ್ಯಕೃತಿಗಳ ತಾತ್ವಿಕತೆಯಾಗಿದೆʼ ಎಂದು ಹೇಳಿದರು.

ಶರಣ ಸಾಹಿತ್ಯ ಪರಿಷತ್ತು ಬೀದರ ಜಿಲ್ಲಾಧ್ಯಕ್ಷ ಪ್ರೊ. ಶಂಭುಲಿಂಗ ಕಾಮಣ್ಣ ಮಾತನಾಡಿ, ʼಜಾನಪದ, ಅಭಿನಂದನಾ, ಸ್ಮರಣ ಸಂಚಿಕೆ ಸೇರಿ ಹಲವು ಕೃತಿಗಳು ಸಂಪಾದಿಸಿದ ಹೆಬ್ಬಾಳೆ ಅವರದು ಸಾಹಿತ್ಯದ ಮುಖ ಒಂದು ಕಡೆಯಲ್ಲಿದ್ದರೆ, ಇನ್ನೊಂದು ಕಡೆಗೆ ಅವರು ಮಾನವೀಯ ಸಂಬಂಧಗಳ ಸಂಪಾದನೆ ಅಪಾರವಾಗಿ ಮಾಡಿಕೊಂಡಿದ್ದಾರೆ. ಅವರ ಸಂಪಾದನ ಕೃತಿಗಳ ಮೂಲಕ ಹಲವು ದಿಗಜ್ಜರ ಸಾಹಿತ್ಯ ಮತ್ತು ಸಾಧನೆ ಬಿಂಬಿಸಿದ್ದಾರೆʼ ಎಂದು ನುಡಿದರು.

ಬೀದರ ವಿವಿ ಕನ್ನಡ ವಿಭಾಗದ ಸಂಯೋಜಕ ಡಾ.ರಾಮಚಂದ್ರ ಗಣಾಪೂರ ಮಾತನಾಡಿ, ʼಹೆಬ್ಬಾಳೆ ಅವರ ಸ್ವತಂತ್ರ ಕೃತಿಗಳ ಕುರಿತು ಹೆಬ್ಬಾಳೆ ಅವರದು ಬರಹ ಮತ್ತು ಬದುಕು ಎರಡೂ ಸೃಜನಶೀಲವಾಗಿವೆ. ಅವರು ಬರೆದ ಕವನ ಸಂಕಲನ ಬದುಕಿನ ಹಲವು ವಾಸ್ತವಗಳನ್ನು ದರ್ಶಿಸುತ್ತವೆ. ಕವಿತೆಗಳು, ಕತೆ, ಜೀವನ ಚರಿತ್ರೆ, ಸ್ಥಳ ಮಹತ್ವ, ಪ್ರಬಂಧ ಸೇರಿ ಸಾಹಿತ್ಯದ ಹಲವು ಪ್ರಕಾರಗಳು ಬರೆದು ಸಾಹಿತ್ಯ ಲೋಕದ ಗಮನ ಸೆಳೆದಿದ್ದಾರೆʼ ಎಂದರು.

ಹೆಬ್ಬಾಳೆಯವರ ಸಂಶೋಧನಾ ಪ್ರಬಂಧಗಳ ಕುರಿತು ಯುವ ಬರಹಗಾರ ಕಿರಣ ವಲ್ಲೆಪೂರೆ ಮಾತನಾಡಿ, ʼಪ್ರೊ. ಜಗನ್ನಾಥ ಹೆಬ್ಬಾಳೆ ಅವರ ಸಂಶೋಧನೆ ಕ್ಷೇತ್ರಕಾರ್ಯ ಕೇಂದ್ರೀತವಾಗಿದೆ. ಅವರ ಮಾರ್ಗದರ್ಶನದಲ್ಲಿ ನಡೆದ ಎಲ್ಲ ಪಿ.ಎಚ್.ಡಿ. ಪ್ರಬಂಧಗಳು ಜಾನಪದ ಜಗತ್ತಿಗೆ ಹಾಗೂ ಬೀದರ ಜಿಲ್ಲೆಯ ಮಹತ್ವ ಸಾರುವ ಸಂಶೋಧನಾ ಪ್ರಬಂಧಗಳಾಗಿವೆ. ಬೀದರ ನೆಲ, ಸಂಸ್ಕೃತಿ ಹಾಗೂ ಜಾನಪದ ಇವೆರಡೂ ಹೆಬ್ಬಾಳೆ ಅವರ ಸಾಹಿತ್ಯದ ಜೀವಾಳವಾಗಿವೆʼ ಎಂದರು.

ಈ ಸುದ್ದಿ ಓದಿದ್ದೀರಾ? ಹೊರಗುತ್ತಿಗೆ ನೇಮಕಾತಿ ನಿಯಮಗಳಲ್ಲಿ ಮಾರ್ಪಾಡು ಮಾಡಿ: ರಾಜ್ಯದ ಹಲವೆಡೆ ದಸಂಸದಿಂದ ಪ್ರತಿಭಟನೆ

ಕಾರ್ಯಕ್ರಮದಲ್ಲಿ ಡಾ.ರಮೇಶ್ ಮೂಲಗೆ ಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೀದರ ವಿವಿ ಮೌಲ್ಯಮಾಪನ ಕುಲಸಚಿವ ಪ್ರೊ. ಪರಮೇಶ್ವರ ನಾಯ್ಕ್, ವಾಣಿಜ್ಯ ನಿಕಾಯದ ಡೀನ ಡಾ. ಶರಣಪ್ಪ ಮಲಗೊಂಡ ಹಾಗೂ ಡಾ.ಪ್ರಭುಶಟ್ಟಿ ಮೂಲಗೆಲಗೆ, ಶಾಂತಕುಮಾರ ಪಾಟೀಲ, ಡಾ.ಸೋಮನಾಥ ಯಾಳವಾರ, ಪ್ರೊ.ಉಮಾಕಾಂತ ಪಾಟೀಲ, ಪ್ರೊ.ಜಗನ್ನಾಥ ಹೆಬ್ಬಾಳೆ, ಡಾ.ಅಶೋಕ ಕೋರೆ ಸೇರಿ ಹಲವರಿದ್ದರು. ಡಾ.ಮಹಾನಂದಾ ಮಡಕಿ ನಿರೂಪಿಸಿದರು. ಡಾ.ಶಿವರಾಜ್ ಪಾಟೀಲ್ ಸ್ವಾಗತಿಸಿದರು. ರಾಜಕುಮಾರ ಶಿಂಧೆ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಔರಾದ್‌ | ಅಪ್ಪಟ ದೇಶಪ್ರೇಮಿ ಶಾಹೀದ್ ಭಗತ್ ಸಿಂಗ್

ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ನಿದ್ದೆಗೆಡಿಸಿದ ಸಿಂಹಾಳಿಯಂತೆ ಗರ್ಜಿಸಿ ಭಾರತದ ಹಿರಿಮೆ ಗರಿಮೆಯನ್ನು...

ಬೀದರ್‌ | ಕಾರಂಜಾ ಸಂತ್ರಸ್ತರಿಗೆ ಕಾಲಮಿತಿಯಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಿ

ಕಾರಂಜಾ ಸಂತ್ರಸ್ತರ ಸಮಸ್ಯೆ ಕುರಿತು ದಶಕಗಳಿಂದ ಹೋರಾಟ ನಡೆಯುತ್ತಿದ್ದು, ಸರ್ಕಾರಕ್ಕೂ ಈ...

ಬೀದರ್‌ನಲ್ಲಿ ಮಾ.25ರಂದು ಉದ್ಯೋಗ ಮೇಳ

ಬೀದರ್ ನಗರದ ನೌಬಾದ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಉದ್ಯೋಗ...

ರಾಯಚೂರು | ಟ್ರಾಕ್ಟರ್ ಗೆ ಬೈಕ್ ಡಿಕ್ಕಿ; ಇಬ್ಬರು ಯುವಕರು ಸಾವು

ರಸ್ತೆ ಬದಿ ನಿಲ್ಲಿಸಿದ್ದ ಟ್ರಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು...