ತುಮಕೂರು | ಪ್ರೀತಿಸುವ ಗಂಡಿನ ರೂಪಿಗೆ ‘ಬಾರಯ್ಯ ಮಮಬಂಧು’ ಕೃತಿ ಹಾದಿ: ಅನುಸೂಯ ಕಾಂಬ್ಳೆ 

Date:

ಪ್ರೀತಿಸುವ ಗಂಡಿನ ರೂಪಿಗೆ ‘ಬಾರಯ್ಯ ಮಮಬಂಧು’ ಕೃತಿ ಒಂದು ವಿಶಿಷ್ಟ ಪ್ರಯೋಗವಾಗಿದೆ ಎಂದು ವಿಮರ್ಶಕಿ ಅನುಸೂಯ ಕಾಂಬ್ಳೆ ಅಭಿಪ್ರಾಪಟ್ಟರು.

ತುಮಕೂರು ನಗರದ ಜನಚಳುವಳಿ ಕೇಂದ್ರದಲ್ಲಿ ಕರ್ನಾಟಕ ಲೇಖಕಿಯರ ಸಂಘ, ಓದು ಲೇಖಕಿ ಬಳಗ, ವಿಚಾರ ಮಂಟಪ ಮತ್ತು ಸಾಕ್ಷಿ ಪ್ರಕಾಶನ ತುಮಕೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ, ಎಚ್ ಎಸ್ ಶ್ರೀಮತಿ ಅವರು ಅನುವಾದಿಸಿರುವ ಬೆಲ್ ಹುಕ್ಸ್ ಅವರ ‘ಬಾರಯ್ಯ ಮಮಬಂಧು’ ಕೃತಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

“ಭಾರತೀಯ ಸ್ತ್ರೀವಾದದ ವಿಸ್ತರಣೆಯಾಗಿ ಈ ಕೃತಿ ಪ್ರಕಟವಾಗಿದ್ದು, ಇಂತಹ ಹಲವು ಕೃತಿಗಳ ಮೂಲಕ ಪಾಶ್ಚಾತ್ಯರ ಸ್ತ್ರೀವಾದಿ ತತ್ವಗಳನ್ನು ನಮಗೆ ಪರಿಚಯಿಸುವ ಕೆಲಸವನ್ನು ಶ್ರೀಮತಿಯವರು ಮಾಡುತ್ತಿದ್ದಾರೆ. ಇದರಲ್ಲಿ ಪುರುಷರನ್ನೂ ಒಳಗೊಳ್ಳುವ ಸ್ತ್ರೀವಾದಿ ಚಿಂತನೆಯಿದೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಸ್ತ್ರೀವಾದದ ಕಣ್ಣಿನಿಂದ ಪುರುಷನನ್ನು ಕಾಣುವ ಮೂಲಕ ಪ್ರೀತಿಸುವ ಗಂಡನ್ನು ನಿರ್ಮಿಸುವ ಹಾದಿಯನ್ನು ಈ ಕೃತಿ ಕಾಣಿಸುತ್ತದೆ. ಇದನ್ನು ಮಹಿಳೆಯರಿಗಿಂತಲೂ ಪುರುಷರು ಹೆಚ್ಚು ಓದಬೇಕನಿಸುತ್ತದೆ. ಏಕೆಂದರೆ, ತಾವು ಏನನ್ನು ಕಳೆದುಕೊಂಡಿದ್ದೇವೆ ಎಂಬುದನ್ನು ಇದರಿಂದ ಪುರುಷರು ಅರಿಯಬಹುದು. ತಾವು ಕಳೆದುಕೊಂಡದ್ದು ಏನೆಂಬುದನ್ನು ಅರಿತಾಗಲೇ ನಾವು ಪಡೆದುಕೊಳ್ಳಬೇಕಾದ್ದು ಏನೆಂಬುದು ನಮಗೆ ತಿಳಿಯುತ್ತದೆ. ಸ್ತ್ರೀವಾದಿ ಪುರುಷತ್ವವನ್ನು ಕುರಿತು ಈ ಕೃತಿ ಮಾತನಾಡುತ್ತದೆ. ಇಂತಹ ಕೃತಿಗಳನ್ನು ಮತ್ತೆ ಮತ್ತೆ ಓದುವ ಮೂಲಕ ನಮ್ಮನ್ನು ನಾವು ಅರಿಯಬೇಕು” ಎಂದರು.

ಕೃತಿಯ ಅನುವಾದಕಿ ಎಚ್ ಎಸ್ ಶ್ರೀಮತಿ ಮಾತನಾಡಿ, “ಇಡೀ ಪಿತೃ ಪ್ರಧಾನತೆಯ ಚಿಂತನೆಗಳು ಕಟ್ಟುವುದೇ ಗಂಡು ಹೆಣ್ಣಿನ ಲೈಂಗಿಕ ಸಂಬಂಧವನ್ನು ರಾಜಕಾರಣಕ್ಕೆ ದಾಳವನ್ನಾಗಿ ಮಾಡಿಕೊಳ್ಳುವ ಮೂಲಕ. ಇದಕ್ಕೆ ಪೂರಕವಾಗಿ ನಿರ್ಮಿಸಲಾಗಿರುವ ಒಂದು ಸಂಸ್ಥೆ ವಿವಾಹ. ಇದಕ್ಕೂ ಮುನ್ನ ಸಮಾಜದಲ್ಲಿ ಲೈಂಗಿಕ ಸ್ವಾತಂತ್ರ‍್ಯವಿತ್ತು. ಮುಂದೆ ಮುಂದೆ ಪ್ರಬಲರಲ್ಲಿ ಅಧಿಕಾರ, ದುರ್ಬಲರಲ್ಲಿ ಅಧೀನತೆ ಹೀಗೆ ಸಾಮಾಜಿಕ ವ್ಯವಸ್ಥೆ ರೂಪುಗೊಳ್ಳುತ್ತಾ ಬಂದು ಇಂದಿನ ಸ್ತ್ರೀ-ಪುರುಷರ ಸಂಬಂಧಗಳು ಅಧಿಕಾರ ಮತ್ತು ಅದೀನತೆಯ ಹಿನ್ನೆಲೆಯಲ್ಲಿ ರೂಪುಗೊಳ್ಳುವಂತಾಗಿದೆ. ಇದರಿಂದ ಸ್ತ್ರೀ-ಪುರುಷರಿಬ್ಬರೂ ಬಿಡಿಗಡೆಯಾಗಬೇಕಿದೆ. ಪ್ರೀತಿ ಮತ್ತು ಮಾನವೀಯತೆಯ ನೆಲೆಯಲ್ಲಿ ಒಬ್ಬರನ್ನೊಬ್ಬರು ಪರಸ್ಪರ ಗೌರವಿಸಿಕೊಂಡು ಬದುಕಬೇಕಾಗಿದೆ. ಈ ಹಿನ್ನೆಲೆಯಲ್ಲಿ ಬೆಲ್ ಹುಕ್ಸ್ ಸೇರಿದಂತೆ ಮೊದಲಾದ ಸ್ತ್ರೀವಾದಿ ಚಿಂತಕರ ಚಿಂತನೆಗಳು ನಮಗೆ ದಾರಿ ತೋರಿಸುತ್ತವೆ” ಎಂದರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸಂವಿಧಾನದ ಉಳಿವಿಗಾಗಿ ʼಶಾಂತಿಯ ತೋಟ ದೇಶ ಉಳಿಸಿʼ ಸಂಕಲ್ಪ ಯಾತ್ರೆ

ಕಾರ್ಯಕ್ರಮದಲ್ಲಿ ಕಲೇಸಂ ಜಿಲ್ಲಾಧ್ಯಕ್ಷ್ಯೆ ಮಲ್ಲಿಕಾ ಬಸವರಾಜು, ಲೇಖಕಿ ಓದು ಬಳಗದ ಸಂಚಾಲಕಿ ಆಶಾ ಬಗ್ಗನಡು, ವಿಚಾರ ಮಂಟಪದ ವರುಣ್ ರಾಜ್, ಡಾ ಅರುಂದತಿ, ಡಾ ಗೋವಿಂದರಾಯ, ಗೀತಾಲಕ್ಷ್ಮಿ, ಸ್ವಾಮಿ ಎಸ್ ಎನ್, ವಾಣಿ ಸತೀಶ್, ಕಲ್ಯಾಣಿ, ರಂಗಮ್ಮ ಹೊದೆಕಲ್, ನವೀನ್ ಕುಮಾರ್ ಪಿ ಅರ್ ಮರಿಯಂ ಬಿ, ರಾಣಿ ಚಂದ್ರಶೇಖರ್ ಸೇರಿದಂತೆ ಇತರರು ಇದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...