ತುಮಕೂರು | ಬಸನಗೌಡ ಪಾಟೀಲ್ ಯತ್ನಾಳ್ ಶಾಸಕ ಸ್ಥಾನ ವಜಾಕ್ಕೆ ಪ್ರಗತಿಪರ ಸಂಘಟನೆಗಳ ಒಕ್ಕೂಟ ಒತ್ತಾಯ

Date:

 ತುಮಕೂರು ಪ್ರಗತಿಪರ ಸಂಘಟನೆಗಳಿಂದ ಇತ್ತೀಚೆಗೆ ತುಮಕೂರು ಗಣೇಶ ವಿಸರ್ಜನೆ ಸಂದರ್ಭದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ದಲಿತ ಹಾಗೂ ಅಲ್ಪಸಂಖ್ಯಾತ ಮಹಿಳೆಯರಿಗೆ ಅವಹೇಳಕಾರಿಯಾಗಿ ಅವಮಾನಿಸಿ ಕೋಮು ಸಂಘರ್ಷವನ್ನು ಬಿತ್ತುವ ಪ್ರಚೋಧನಕಾರಿ ಭಾಷಣ ಮಾಡುವ ಮೂಲಕ ತುಮಕೂರು ಸೌಹಾರ್ದತೆಗೆ ದಕ್ಕೆ ತರುವ ಕೆಲಸ ಮಾಡಿದ್ದಾರೆ ಹಾಗೂ 70 ಎಫ್ಐಆರ್ ಆದರು ನನನ್ನು ಕಾನೂನು ಏನು ಮಾಡಕ್ಕಾಗಲ್ಲ ಎಂದು ದುರಂಕಾರದ ನಡೆಯನ್ನು ನಡೆದುಕೊಂಡಿದ್ದು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ವಿಧಾನ ಸಭೆಯ ಸಭಾಪತಿಗಳಿಗೆ ತುಮಕೂರು ಜಿಲ್ಲಾಧಿಕಾರಿಗಳ ಮುಖಾಂತರ ಒತ್ತಾಯಿಸಿಲಾಯಿತು.

ಒಕ್ಕೂಟದ ಭಾಗವಾದ ಸ್ಲಂ ಜನಾಂದೋಲನ ಕರ್ನಾಟಕ ಸಂಚಾಲಕ ಎ.ನರಸಿಂಹಮೂರ್ತಿ ಮಾತನಾಡಿ ಮದ್ದೂರು ಮತ್ತು ತುಮಕೂರು ಗಣೇಶ ವಿಸರ್ಜನಾ ಸಂದರ್ಭದಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ನಾಲಿಗೆಯನ್ನು ಅರಿಬಿಟ್ಟಿದ್ದಾರೆ, ಮೈಸೂರು ದಸರಾ ಉತ್ಸವದ ಉದ್ಘಾಟನೆ ಸಂಬಂಧ ಬಾನುಮುಷ್ತಾಕ್ ಉದ್ಘಾಟಕರಾಗಿ ಆಗಮಿಸುವ ಹಿನ್ನೆಲೆಯಿಂದ ರಾಜ್ಯದ ದಲಿತ ಅಲ್ಪಸಂಖ್ಯಾತ ಮಹಿಳೆಯರು ಪುಷ್ಪ ನಮನ ಸಲ್ಲಿಸಲು ಯಾವ ಅಧಿಕಾವು ಇಲ್ಲವೆಂದು ತುಚ್ಚವಾಗಿ ಮಾತನಾಡಿದ್ದಾರೆ ಸಾಂವಿಧಾನಿಕವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಆಯ್ಕೆಯಾಗಿ ಪ್ರಮಾಣ ವಚನ ಸ್ವೀಕರಿಸಿ ಶಾಸಕ ಸ್ಥಾನ ಗಳಿಸಿದ ಯತ್ನಾಳ್ ಸದಾ ಸಮಾಜದ ಸ್ವಾಸ್ತ್ಯ ಆಳು ಮಾಡುವ ಮತ್ತು ಯುವಜನರಿಗೆ ಕೋಮು ಪ್ರಚೋದನೆ ಬಿತ್ತುವ ಪ್ರೌವೃತ್ತಿ ಬಿಡಬೇಕು, ಸಮಾಜಕ್ಕೆ ಉದ್ರೇಕಕಾರಿ ಹೇಳಿಕೆಗೆ ಕಡಿವಾಣ ಹಾಕುವ ಉದ್ದೇಶದಿಂದ ವಿಧಾನಸಭೆಯ ಸಭಾಪತಿಗಳು ಶಾಸಕ ಸ್ಥಾನದಿಂದ ಯತ್ನಾಳ್ ರನ್ನು ವಜಾಗೊಳಿಸಲು ಮುಂದಗಾಬೇಕೆಂದು ಒತ್ತಾಯಿಸಿದರು.

ನಂತರ ಸಿಐಟಿಯು ಸಂಘಟನೆಯ ಜಿಲ್ಲಾಧ್ಯಕ್ಷ ಸೈಯದ್ಮುಜೀಬ್ ಮಾತನಾಡಿ ಆಚಾರವಿಲ್ಲದ ನಾಲಿಗೆ ನೀಚ ಬುದ್ದಿಯ ಬಿಡು ನಾಲಿಗೆ, ನುಡಿದರೇ ಮಾಣೀಕ್ಯದ ದೀಪ್ತಿಯಂತಿರಬೇಕು ಯಾತ್ನಾಳ್ ರವರು ನಾಲಿಗೆಯ ನೀಚ ಬುದ್ದಿಯನ್ನು ಬಿಡಬೇಕು ಅವರು ಶರಣ ಚಳುವಳಿಯ ಪರಂರಪರೆಯಿಂದ ಬಂದಂತಹವರು ಎಲ್ಲವನ್ನು ವೈದಿಕ ಪರಂಪರೆಗೆ ಗುಲಾಮರಾಗಿ ನಡೆದುಕೊಳ್ಳುವುದನ್ನು ಬಿಟ್ಟು ಸಂವಿಧಾನದತ್ತವಾಗಿ ಮಾಡಿರುವ ಪ್ರಮಾಣವಚನಕ್ಕೆ ಬದ್ದರಾಗಿ ನಡೆದುಕೊಳ್ಳಬೇಕು.ಇಲ್ಲವಾದರೆ ಶಾಸಕ ಸ್ಥಾನದಿಂದ ಹೊರಗುಳಿಯಬೇಕು ಎಂದರು.  

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

 ರೈತ ಸಂಘಟನೆಯ ಬಿ.ಉಮೇಶ್ ಮಾತನಾಡಿ ಸಾಂಸ್ಕೃತಿಕ ಹಬ್ಬಗಳಲ್ಲಿ ಎಲ್ಲಾರು ಒಂದು ಗೂಡಿ ಆಚರಿಸುವ ಸಂದರ್ಭಗಳಲ್ಲಿ ದ್ವೇಷ ಹರಡುವುದು ಒಬ್ಬ ಶಾಸಕರ ನಡೆಯಾಗಬಾರದು, ಯತ್ನಾಳ್ ರವರ ಮಾನಸೀಕ ಅಸ್ವಸ್ತತೆಗೆ ಸಭಾಪತಿಗಳು ವೈದ್ಯಕಿಯ ಚಿಕಿತ್ಸೆ ಕೊಡಿಸಲಿ, ಹಿಂದೂ ಮುಸ್ಲಿಂ, ದಲಿತರೆಲ್ಲರು ಸೌಹಾರ್ಧತೆಯಿಂದ ಕೂಡಿರುವ ನಾಡಿನಲ್ಲಿ ಜಾತಿ, ಧರ್ಮದ ವೈಶಮ್ಯದ ಪ್ರಧೋನೆ ನೀಡುವುದು ಜವಾಬ್ದಾರಿಯುತ ಶಾಸಕರಿಗೆ ಸರಿಯಾದುದ್ದಲ್ಲ. ಕಾನೂನು ಕ್ರಮಗಳನ್ನು ಲೆಕ್ಕಿಸದೇ ದ್ವೇಷವನ್ನು ಹರಡುವ ಮೂಲಕ ತಮ್ಮ ಮಾನಸೀಕ ಅಸ್ವಸ್ತತೆಯನ್ನು ಯತ್ನಾಳ್ ಹೊರಹಾಕುತ್ತಿದ್ದಾರೆ. ತುಮಕೂರು ಕಲ್ಪತರ ನಾಡು ಶಾಂತಿಯನ್ನು ಬಯಸುವ ಎಲ್ಲರು ಯತ್ನಾಳ್ರವರನ್ನು ಶಾಸಕ ಸ್ಥಾನದಿಂದ ಕೈಬಿಡಬೇಕಂದು ಸ್ಪೀಕರ್ ರವರನ್ನು ಒತ್ತಾಯಿಸುತ್ತೇವೆ ಎಂದರು

ಇದೇ ಸಂದರ್ಭದಲ್ಲಿ ಸಿಐಟಿಯು ಸಂಘಟನೆಯ ಕಾರ್ಯದರ್ಶಿ ಸುಬ್ರಮಣ್ಯ, ಜನಸಂಗ್ರಾಮ ಪರಿಷತ್ ನ ಸಿ.ಯತಿರಾಜ್, ಪಿಯುಸಿಎಲ್ ಸಂಘಟನೆಯ ಅರುಣ್, ಎಪಿಸಿಆರ್ ನಗರ ಸಂಚಾಲಕರಾದ ತಾಜುದ್ದೀನ್ ಷರೀಫ್, ಅಫ್ತರ್ ಖಾನ್, ಎಐಟಿಯುಸಿ- ಕಂಬೇಗೌಡ, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೋಂಡಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...