ತುಮಕೂರು | ಸಿಪಿಐ ಜನಪರ ಹೋರಾಟಕ್ಕೆ ಜನರ ಬೆಂಬಲ ಬೇಕು : ಡಾ. ಜಿ ರಾಮಕೃಷ್ಣ

Date:

 ದೇಶದಲ್ಲಿ ಕಾರ್ಮಿಕರು ದುಡಿಯುವ ಮತ್ತು ಬಡವರ ಪರವಾಗಿ ಬೀದಿಗಿಳಿದು ಸರ್ಕಾರ ಸ್ಥಳೀಯ ಆಡಳಿತಗಳನ್ನು ಟೀಕಿಸುತ್ತ ಪ್ರತಿಭಟನೆಗಳ ಮೂಲಕ ಎಚ್ಚರಿಕೆ ಗಂಟೆಯಾಗಿರುವ ಸಿಪಿಐ ಪಕ್ಷ ಶತಮಾನದ ಒಸ್ತಿಲಲ್ಲಿ ಇದ್ದು ಅದರ ಸೈದ್ಧಾಂತಿಕ ನಿಲುವುಗಳ ಪ್ರಣಾಳಿಕೆಯನ್ನು ಜನರು ಒಪ್ಪಿಕೊಂಡರೆ ಮುಂಬರುವ ದಿನಗಳಲ್ಲಿ ಸುಧಾರಿತವಾದ ಆಡಳಿತವನ್ನು ದೇಶದಲ್ಲಿ ಕಾಣಬಹುದು ಎಂದು ಹಿರಿಯ ಚಿಂತಕ ಡಾ.ಜಿ ರಾಮಕೃಷ್ಣ ಅವರು ತಿಳಿಸಿದರು.

 ತುಮಕೂರು ನಗರದ ಅಮಾನಿಕೆರೆ ರಸ್ತೆಯ ಕನ್ನಡ ಭವನದಲ್ಲಿ ಸಿಪಿಐ  ಪಕ್ಷದ ನೂರು ವರ್ಷಗಳ ಶತಮಾನದ ಸಂಭ್ರಮ  ಕಾರ್ಯಕ್ರಮದಲ್ಲಿ  ಮಾತನಾಡಿದ  ಅವರು,  ಸಿಪಿಐ ಪಕ್ಷಕ್ಕೆ ನೂರು ವರ್ಷಗಳು ಇದ್ದರೆ ಇದರ ಜೊತೆಯಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ ರೇವಣ್ಣ ಅವರು ಶತಮಾನದ ಸಂಭ್ರಮವನ್ನು ಎದುರು ನೋಡುತ್ತಿದ್ದಾರೆ ಜನರು ಸಿಪಿಐ ಪ್ರಜ್ಞಾಶಿಲಾ ಕಾರ್ಯಕ್ರಮಗಳನ್ನ ಗುರುತಿಸಿ ತಮ್ಮ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಪಕ್ಷ ಸಂಘಟನೆಗೆ ಮುಂದಾಗ ಬೇಕಿದೆ ಎಂದು ತಿಳಿಸಿದರು.

 ಸಿಪಿಐ ಪಕ್ಷದ ಪ್ರಣಾಳಿಕೆ ಚಿಂತನೆ ಹೋರಾಟಗಳು ದುಡಿಯುವ ವರ್ಗದ ಜನಪರ ಕಾಳಜಿಯನ್ನ ಹೊಂದಿವೆ ಆದರೆ ನಮ್ಮ ದೇಶವನ್ನ ದುರಾಡಳಿತದಿಂದ ವಿವಿಧ ಸರ್ಕಾರದವರು ಲೂಟಿ ಹೊಡೆಯುವವರನ್ನು ನೋಡಿದರೆ ಕೇದಕರ ವೆನಿಸುತ್ತದೆ. ಮಿತ್ರ ಪಕ್ಷಗಳು ಸಿಪಿಐ ಪಕ್ಷವನ್ನು ಬಲಪಡಿಸಿ ಜನಸಾಮಾನ್ಯರ ರಕ್ಷಣೆಗೆ ಮುಂದಾಗಬೇಕೆಂದು ನುಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

 ಮಾರ್ಕ್ಸ್ ಮತ್ತು ಲೆನಿನ್ ವಾದವನ್ನು ಒಪ್ಪಿಕೊಂಡ ಅಂದಿನ ಜನನಾಯಕರು 1924ರಲ್ಲಿ ಸಿಪಿಐ ಪಕ್ಷವನ್ನು ಒಗ್ಗೂಡಿಕೊಂಡು ಸಂಘಟನೆ ಮಾಡಿದ ಸಂದರ್ಭದಲ್ಲಿ ಜೈಲುವಾಸ ನೇಣುಗಂಬ ಅನುಭವಿಸಿ ಅನೇಕರು ಜೀವವನ್ನೇ ಕಳೆದುಕೊಂಡರು. ಆದರೆ ಇವರ ಮುಖ್ಯ ಉದ್ದೇಶ ದುಡಿಯುವ ವರ್ಗ ಮತ್ತು ಕಾರ್ಮಿಕರನ್ನು ರಕ್ಷಣೆ ಮಾಡುವುದು ಆಗಿತ್ತು. ಸ್ವಾತಂತ್ರ್ಯಕ್ಕಾಗಿ  ದುಡಿದ ಚಂದ್ರಶೇಖರ್ ಅಜಾದ್ ಅವರು ಇಂದಿನ ಯುವಕರಿಗೆ ಸ್ಪೂರ್ತಿಯಾಗಿದ್ದು, ಸಿಪಿಐ ಪಕ್ಷದ ಸೈದಾಂತಿಕ ನಿಲುವುಗಳನ್ನು ಒಪ್ಪಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಬಂಡವಾಳ ಶಾಹಿ ಆಡಳಿತದ ವಿರುದ್ಧವಾಗಿ ಸಿಪಿಐ ಪಕ್ಷದ ನೂರು ವರ್ಷಗಳ ಹೋರಾಟ ಗುರ್ತಿಸಿ ಜನರು ಎಚ್ಚರಗೊಳ್ಳಬೇಕು  ಎಂದು ತಿಳಿಸಿದರು.

1001868087

 ಸಿಪಿಐ ಪಕ್ಷದ ರಾಜ್ಯ ಕಾರ್ಯದರ್ಶಿ ಕಾಮ್ರೆಡ್ ಸಾತಿ ಸುಂದರೇಶ್  ಮಾತನಾಡಿ 1925 ರಲ್ಲಿ ಕಾನ್ಪುರದಲ್ಲಿ ಜನ್ಮತಾಳಿದ ಸಿಪಿಐ ಪಕ್ಷ ರಾಜ್ಯದಾದ್ಯಂತ ಶತಮಾನದ ಸಂಭ್ರಮವನ್ನು ರೈತರು ದುಡಿಯುವ ವರ್ಗ ಕಾರ್ಮಿಕದ ನಡುವೆ ಆಚರಣೆ ಮಾಡುತ್ತಾ 1950ರಲ್ಲಿ ರಾಜ್ಯದಲ್ಲಿ ಪಕ್ಷ ಸ್ಥಾಪನೆಗೊಂಡಿದೆ. ಪಕ್ಷ ಸಂಘಟಿಸುವ ಸಂದರ್ಭದಲ್ಲಿ ಬ್ರಿಟಿಷ್ ಅವರು ಅನೇಕರನ್ನು ಜೈಲಿಗೆ ಕಳಿಸಿದ್ದಾರೆ, ಕೇಂದ್ರ ಮತ್ತು ರಾಜ್ಯದಲ್ಲಿರುವ ಸರ್ಕಾರಗಳು ಬಡವರ ಬೇಡಿಕೆಗಳನ್ನು ಈಡೇರಿಸದೇ ಹಣ ಮಾಡುವ ದಾರಿಯನ್ನು ಮಾತ್ರ ಯೋಚನೆ ಮಾಡುತ್ತಿದೆ. ಇನ್ನೂ ನಮ್ಮ ರಾಜ್ಯದಲ್ಲಿ 10 ಲಕ್ಷ ಜನರು ಭೂಮಿ ಇಲ್ಲದೆ ಪರದಾಡುತ್ತಿದ್ದಾರೆ. ವಿದೇಶದ ಬಿಳಿಯರು ನಮ್ಮ ದೇಶದ ಕರಿಯರಿಗೆ ಅಧಿಕಾರ ಕೊಟ್ಟು ಹೋಗಿರುವ ಪರಿಣಾಮವಾಗಿ ಬಂಡವಾಳ ಶಾಹಿ ಆಡಳಿತ ಬಡವರ ಮೇಲೆ ದಬ್ಬಾಳಿಕೆಯ ನಡೆಸುತ್ತಾ ಬ್ರಿಟಿಷರಿಗಿಂತ ಕ್ರೂರವಾದ ಆಡಳಿತವನ್ನು ನೀಡುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದ್ದರು.

 ಹಿರಿಯ ಪರಿಸರವಾದಿ ಸಿ ಯತಿರಾಜ್  ಮಾತನಾಡಿ ನಮ್ಮ ದೇಶದಲ್ಲಿ ಭ್ರಮೆಗೆ ಒಳಗಾಗಿರುವ ಜನರು ಉತ್ತಮ ಅಧಿಕಾರ ನೀಡುವ ಪಕ್ಷಗಳನ್ನು ಆಡಳಿತಕ್ಕೆ ತರುವುದಿಲ್ಲ. ಅದರ ಜೊತೆಗೆ ಮೇಲಿನಿಂದ ಮೇಲೆ ಒತ್ತಡ ಏರಿ ತಾಂತ್ರಿಕವಾಗಿ ಹಾಳು ಮಾಡುವ ಯೋಜನೆಗಳನ್ನು ಜನರು ಒಪ್ಪಿಕೊಳ್ಳುತ್ತಾರೆ.  ಇನ್ನು ಮುಂದಾದರೂ ಸಿಪಿಐ ಪಕ್ಷದ ಜನಪರ ಹೋರಾಟಗಳನ್ನು ಒಪ್ಪಿಕೊಂಡು ಜನರು ಅದಕ್ಕೆ ಬೆಂಬಲ ನೀಡಿ ಬಡವರು ಮತ್ತು ದುಡಿಯುವ ವರ್ಗವನ್ನು ರಕ್ಷಣೆ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.

ಶತಮಾನ ಸಂಭ್ರಮದ ಅಧ್ಯಕ್ಷತೆ ವಹಿಸಿದ್ದ ಸಿಪಿಐ ಜಿಲ್ಲಾ ಕಾರ್ಯದರ್ಶಿ ಕಾಮ್ರೆಡ್ ಗಿರೀಶ್  ಮಾತನಾಡಿ ದುಡಿಯುವರ, ಕಾರ್ಮಿಕರ, ಬಡವರ ರೈತರ ಪರವಾಗಿ ಸಿಪಿಐ ಪಕ್ಷ ಪ್ರತಿನಿತ್ಯ ಹೋರಾಟಗಳನ್ನು ನಡೆಸುತ್ತಿದೆ.    ಸಮ ಸಮಾಜದ ನಿರ್ಮಾಣ ಮತ್ತು ಉತ್ತಮ ಆಡಳಿತಕ್ಕಾಗಿ ಸಿಪಿಐ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲರೂ ಶ್ರಮಿಸಬೇಕು ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಹಿರಿಯ ಸ್ವತಂತ್ರ ಹೋರಾಟಗಾರ ಟಿ ಆರ್ ರೇವಣ್ಣ, ಸಿಪಿಐಎಂ ಪಕ್ಷದ ಎನ್ ಕೆ ಸುಬ್ರಹ್ಮಣ್ಯ, ಎಸ್ ಯುಸಿಐಸಿಯ ಎಸ್ ಎನ್ ಸ್ವಾಮಿ, ರೈತ ಸಂಘದ ಜಿಲ್ಲಾಧ್ಯಕ್ಷ ಎ. ಗೋವಿಂದರಾಜು, ಎಐಟಿಯುಸಿ ಕಂಬೇಗೌಡ, ಸಿಪಿಐ ಪಕ್ಷದ ಜಿಲ್ಲಾ ಖಜಾಂಚಿ ಅಶ್ವತ್ ನಾರಾಯಣ, ಚಂದ್ರಶೇಖರ್, ರವಿಪ್ರಸಾದ್, ಆರ್ ಗೋವಿಂದರಾಜು, ರಮೇಶ್, ಜಾಫರ್, ಬಸವರಾಜು ಸೇರಿದಂತೆ ಇತರರು ಇದ್ದರು

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...