ತುಮಕೂರು | ಚಿಪ್ಪಿಗೂ ಚಿನ್ನದ ಬೆಲೆ; ದರ ಏರಿಕೆ ಸುತ್ತ ಹಲವು ಅನುಮಾನ

Date:

ಕಲ್ಪತರು ನಾಡಿನ ಜೀವನಾಡಿ ತೆಂಗು ಸದ್ಯ ಬೆಳೆಗಾರರ ಬುದುಕನ್ನು ಹಸನಾಗಿಸಿದೆ. ತೆಂಗಿನ ಚಿಪ್ಪಿಗೂ ಚಿನ್ನದ ಬೆಲೆ ಬಂದಿದೆ. ಕಳೆದ ಸೋಮವಾರ ಇ-ಟೆಂಡರ್ ನಲ್ಲಿ ಕ್ವಿಂಟಲ್ ಕೊಬ್ಬರಿಗೆ 31 ಸಾವಿರ ದಾಟುವ ಮೂಲಕ ಕೊಬ್ಬರಿ ಬೆಲೆ ಸಾರ್ವಕಾಲಿಕ ದಾಖಲೆ ಬರೆದಿದೆ.

2024ರಲ್ಲಿ 9 ಸಾವಿರದ ಅಸುಪಾಸಿಪಲ್ಲಿದ್ದ ಕೊಬ್ಬರಿ, ಈ ವರ್ಷ 30 ಸಾವಿರ ದಾಟಿ ಗ್ರಾಹಕರ ಹುಬ್ಬೇರಿಸಿದೆ. ಉಂಡೆ ಕೊಬ್ಬರಿ ನಂಬಿ ತುಮಕೂರು ಜಿಲ್ಲೆಯ ಬಹುತೇಕ ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಕೊಬ್ಬರಿ ಬೆಲೆ ನಿರಂತರ ಕುಸಿತದಿಂದ ಬಸವಳಿದಿದ್ದ ತೆಂಗು ಬೆಳೆಗಾರಿಗೆ ದಿಢೀರ್ ಆಗಿ ಕೊಬ್ಬರಿ ಬೆಲೆ ಏರುತ್ತಿರುವುದು ಅತೀವ ಸಂತಸ ತಂದಿದೆ. ಕೊಬ್ಬರಿ ಬೆಲೆಯೇನೋ ಏರಿಕೆಯಾಗಿದೆ ಅದರೆ ರೈತರ ಬಳಿ ಕೊಬ್ಬರಿಯೇ ಇಲ್ಲ, ರೋಗಬಾಧೆ, ಅಡಿಕೆ ಮೇಲಿನ ಆಸಕ್ತಿಯಿಂದ ತೆಂಗು ಬೆಳೆಯ ವಿಸ್ತೀರ್ಣವೂ ಕಡಿಮೆಯಾಗಿದೆ.

ಕರ್ನಾಟಕದಲ್ಲೇ ಅತಿ ಹೆಚ್ಚು ತೆಂಗು ಬೆಳೆಯುವ ಜಿಲ್ಲೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ತುಮಕೂರು ಜಿಲ್ಲೆಯಲ್ಲಿ 2.24 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತದೆ. ತುಮಕೂರಿನಲ್ಲಿ ಬೆಳೆಯುವ ತೆಂಗಿನ ಉಂಡೆ ಕೊಬ್ಬರಿಗೆ ಉತ್ತರ ಭಾರತದಲ್ಲಿ ಬಹು ಬೇಡಿಕೆ ಿದೆ. ಆದರೂ, ಕಳೆದ ಹಲವು ವರ್ಷಗಳಿಂದ ಕೊಬ್ಬರಿ ಬೆಲೆ ಪಾತಾಳ ಕಂಡಿತ್ತು. ತೆಂಗು ಬೆಳೆಗಾರರಂತೂ ಉತ್ತಮ ಬೆಲೆ ಇಲ್ಲದೆ ಆರ್ಥಿಕ ಸಂಕಷ್ಟಕ್ಕೆ ಹೋಗಿದ್ದರು. ಕನಿಷ್ಠ ಬೆಂಬಲ ಬೆಲೆಗೆ ಬೀದಿಗಿಳಿದಿದ್ದರು. ನಿರಂತವಾಗಿ ಪ್ರತಿಭಟನೆಯನ್ನು ಮಾಡಿ ಕಡೆಗೆ ಕೇಂದ್ರದಿಂದ ಬೆಂಬಲ ಬೆಲೆ ಪಡೆದು ನಿಟ್ಟುಸಿರು ಬಿಟ್ಟರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಏಷ್ಯ ಖಂಡದ ಅತಿದೊಡ್ಡ ಕೊಬ್ಬರಿ ಮಾರುಕಟ್ಟೆ ತಿಪಟೂರು ಎಪಿಎಂಸಿಯಲ್ಲಿ ಹರಾಜು ಪ್ರಕ್ರಿಯೆಯಲ್ಲಿ ಹಲವು ಬದಲಾವಣೆ ತರಲಾಗಿದೆ. ಈ ಹಿಂದೆ ಒಬ್ಬ ವರ್ತಕ ನಿಗದಿ ಪಡಿಸಿದ ಬೆಲೆಗೆ ಇತರರು ಕೊಬ್ಬರಿ ಖರೀದಿ ಮಾಡುತ್ತಿದ್ದರು. ಈಗ ಯಾರು ಬೇಕಾದರೂ ಹರಾಜಿನಲ್ಲಿ ಮುಕ್ತವಾಗಿ ಭಾಗವಹಿಸಬಹುದು. ಆನ್ ಲೈನ್ ಮೂಲಕವೂ ಖರೀದಿಗೆ ಅವಕಾಶವಿದೆ. ಈ ಹಿಂದೆ ವಾರಕ್ಕೆ ಮೂರು ದಿನ ಹರಾಜು ಪ್ರಕ್ರಿಯೆ ನಡೆಯುತ್ತಿತ್ತು. ಈಗ ವಾರಕ್ಕೆ ಎರಡು ಬಾರಿ ಹರಾಜು ಮಾಡಲಾಗುತ್ತಿದೆ. ಬೆಲೆ ಏರಿಕೆಗೆ ಈ ಹರಾಜು ವ್ಯವಸ್ಥೆಯೂ ಪರಿಣಾಮ ಬೀರಿದೆ ಎನ್ನುವ ಚರ್ಚೆಗಳು ನಡೆಯುತ್ತಿವೆ.

ರೋಗದ ಕಾರಣಕ್ಕೆ ತೆಂಗು ಇಳುವರಿ ಕಡಿಮೆ ಇರುವ ಸಂದರ್ಭದಲ್ಲೇ ಬೆಲೆ ಏರಿಕೆ ಆಗುತ್ತಿರುವುದು ಹಲವು ಅನುಮಾನ ಹುಟ್ಟು ಹಾಕಿದೆ. ಹಾಗೆ ವರ್ತಕರ ಮೋಸದಾಟದ ಬಗ್ಗೆಯೂ ಶಂಕೆ ಮೂಡಿದೆ. ವರ್ತಕರು ಅಡಗಿಸಿಟ್ಟಿರುವ ಕೊಬ್ಬರಿ ಮಾರಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿವೆ.

ತಿಪಟೂರು ಎಪಿಎಂಸಿ ಮಾರುಕಟ್ಟೆಗೆ ಸೋಮವಾರ 4,182 ಕ್ವಿಂಟಲ್ (9,727 ಚೀಲ) ಉಂಡೆ ಕೊಬ್ಬರಿ ಅವಕ ಬಂದಿದ್ದು, ‘ಮಾದರಿ’ ದರ 31,606 ಹಾಗೂ ಕನಿಷ್ಠ 27 ಸಾವಿರಕ್ಕೆ ಹರಾಜಾಗಿದೆ. ಕೊಬ್ಬರಿ ದರ ಏರಿಕೆ ಆಗುತ್ತಿದಂತೆ ಕೊಬ್ಬರಿ ಎಣ್ಣೆ, ಚಿಪ್ಪು, ಕೊಬ್ಬರಿ ಮಟ್ಟೆಗೂ ಬೇಡಿಕೆ ಸೃಷ್ಠಿಯಾಗಿದೆ. ಹಾಗೆ ಬೆಲೆಯೂ ಏರಿಕೆಯಾಗಿದೆ. ತೆಂಗಿನ ಕಾಯಿಯ ಬೆಲೆಯೂ ಗಗನಕ್ಕೇರಿದೆ.

ಇದನ್ನೂ ಓದಿ: ತುಮಕೂರು | ಸರ್ಕಾರಿ ಭೂಮಿ ಪರಿವರ್ತನೆ ಆರೋಪ: ಡಿಸಿ ಶುಭ ಕಲ್ಯಾಣ್ ವಿರುದ್ಧ ದೂರು

ಉಂಡೆ ಕೊಬ್ಬರಿ ಬೆಲೆ ಏರಿಕೆ ನಡುವೆ ಕೊಬ್ಬರಿ ಚಿಪ್ಪು, ಮಟ್ಟೆ (ಕೊಬ್ಬರಿ ಸಿಪ್ಪೆ)ಗೂ ಬೇಡಿಕೆ ಬಂದಿದೆ. ತೆಂಗಿನ ಚಿಪ್ಪುಗಳನ್ನು ಮನೆಯ ಬಾಗಿಲಿಗೇ ಬಂದು ಖರೀದಿ ಮಾಡುತ್ತಿದ್ದಾರೆ. ತೆಂಗಿನ ಕಾಯಿಯನ್ನು ದಿನ ಬಳಕೆಗೆ ಉಪಯೋಗಿಸಿದ ನಂತರ ಅದರ ಚಿಪ್ಪುಗಳನ್ನು ಜೋಪಾವನ ಮಾಡುತ್ತಿದ್ದಾರೆ. 2021-22 ರಲ್ಲಿ ಟನ್ ಗೆ 18 ಸಾವಿರವಿದ್ದ ಚಿಪ್ಪಿನ ಬೆಲೆ ಇದೀಗ 30 ಸಾವಿರಕ್ಕೆ ಏರಿಕೆಯಾಗಿದೆ.

“ಕೊಬ್ಬರಿ ಬೆಲೆಯೇನೋ ಏರಿಕೆಯಾಗಿದೆ. ಅದರೆ ಅಟ್ಟದಲ್ಲಿ ಕೊಬ್ಬರಿಯೇ ಇಲ್ಲ. ರೋಗಗಳಿಂದ ತೆಂಗು ಇಳುವರಿಯೂ ಕಡಿಮೆಯಾಗಿದೆ. ಕೊಬ್ಬರಿ ಇದ್ದವನು ಸಾಹುಕಾರ ಎನ್ನುವಂತಾಗಿದೆ. ಇರುವವರಿಗೆ ಲಾಭವಾಗಲಿ. ಇದೇ ರೀತಿ ಕೊಬ್ಬರಿ ಬೆಲೆ ಸ್ಥಿರವಾಗಿದ್ದು ಹೆಚ್ಚು ರೖತರಿಗೆ ಅನುಕೂಲವಾಗಲಿ ಎಂದು ತೆಂಗು ಬೆಳೆಗಾರ ಹೆಸರಹಳ್ಳಿ ಮಂಜುನಾಥ್ ಆಶಯಿಸಿದರು.

ಒಟ್ಟಾರೆ ಕೊಬ್ಬರಿ ಬೆಲೆಯೇನೋ ಏರಿಕೆಯತ್ತ ಸಾಗುತ್ತಿದೆ. ಇದೇ ರೀತಿ ಮಾರುಕಟ್ಟೆಗಳಲ್ಲಿ ಬದಲಾವಣೆಗಳನ್ನು ತರುತ್ತಾ ರೈತರು ಬೆಳೆದ ಬೆಳೆಗಳಿಗೆ ವೖಜ್ಙಾನಿಕ ಬೆಲೆ ಸಿಗುವಂತಾಲಿ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...