ತುಮಕೂರು | ಬರಗೂರು ರಾಮಚಂದ್ರಪ್ಪ, ರೋಹಿತ್ ಚಕ್ರತೀರ್ಥರ ಪಠ್ಯ ಪುಸ್ತಕಗಳಿಂದ ಉತ್ತಮ ಅಲೋಚನೆಗಳು ಬರಲು ಸಾಧ್ಯವಿಲ್ಲ : ಚೇತನ್ ಅಹಿಂಸಾ

Date:

ಬರಗೂರು ರಾಮಚಂದ್ರಪ್ಪ ಮತ್ತು ರೋಹಿತ್ ಚಕ್ರತೀರ್ಥರ ಪಠ್ಯ ಪುಸ್ತಕಗಳಿಂದ ಉತ್ತಮ ಅಲೋಚನೆಗಳು ಬರಲು ಸಾಧ್ಯವಿಲ್ಲ ಎಂದು ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅಭಿಪ್ರಾಯಪಟ್ಟರು

ತುಮಕೂರು ನಗರದ ಕನ್ನಡ ಭವನದಲ್ಲಿ ಶನಿವಾರ ಆಯೋಜಿಸಿದ್ದ ಡಾ. ಬಿ. ಆರ್. ಅಂಬೇಡ್ಕರ್ ಕೋಚಿಂಗ್ ಸೆಂಟರ್ ದಶಮಾನೋತ್ಸವ ಹಾಗೂ ದಲಿತ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಬೈನರಿ ರಾಜಕೀಯದಲ್ಲಿ ಬಲ ಪಂಥೀಯ ಪಠ್ಯ, ಎಡ ಪಂಥೀಯ ಪಠ್ಯ ಎಂದು ಇವೆ. ಅದರೆ ಇವುಗಳಿಂದ ಸತ್ಯದ ಅಲೋಚನೆ ಬರಲು ಸಾಧ್ಯವಿಲ್ಲ. ಬದಲಾಗಿ ಸೀಮಿತ ಅಲೋಚನೆ ಬರಲು ಸಾಧ್ಯ. ಹಾಗಾಗಿ ಸತ್ಯ ಇತಿಹಾಸವಿರುವ ಸಮಸಮಾಜದ ಪಠ್ಯಗಳನ್ನು ಜನರ ಮುಂದೆ ಇಡಬೇಕಿದೆ ಎಂದರು.

ಎಡ ಮತ್ತು ಬಲ ಪಂಥಗಳು ನ್ಯಾಯಕ್ಕಾಗಿ ನಿಂತಿರುವ ಐಡಿಯಾಲಜಿಗಳು. ಬಲ ಪಂಥ ಅವೈಜ್ಞಾನಿವಾಗಿ ಸತ್ಯವನ್ನು ವ್ಯಾಖ್ಯಾನಿಸುತ್ತ ವೈಜ್ಞಾನಿಕತೆ ಇಲ್ಲದ ಕಥೆಗಳನ್ನು ಕಟ್ಟಿ ದ್ವೇಷವನ್ನು ಹುಟ್ಟಿಸುತ್ತಿದೆ. ಎಡ ಪಂಥ ಬಂಡವಾಳಶಾಹಿ ನಮ್ಮ ಶತ್ರು ಎಂದು ಹೇಳುತ್ತಿದೆ. ಇದು ಒಂದು ಸೀಮಿತ ಅಲೋಚನೆ. ಭಾರತ ದೇಶದಲ್ಲಿ ಬಂಡವಾಳಶಾಹಿ ಜೊತೆ, ಪುರುಷ ಪ್ರಧಾನ ವ್ಯವಸ್ಥೆಯಿದೆ. ಬ್ರಾಹ್ಮಣ್ಯ ಜಾತಿ ವ್ಯವಸ್ಥೆಯಿದೆ. ಸಾಂಸ್ಕೃತಿಕ ತಾರತಮ್ಯವಿದೆ. ಆಧ್ಯಾತ್ಮಿಕ ದಾಳಿ ನಡೆದಿದೆ. ಈ ಎಲ್ಲವನ್ನು ಗುರುತಿಸಿ ಈ ಅನ್ಯಾಯಗಳನ್ನು ಕಿತ್ತು ಹಾಕುವ ಮನಸ್ಥಿತಿ ಇರಬೇಕು. ಈ ದೃಷ್ಠಿಯಲ್ಲಿ ಎಡ ಪಂಥೀಯ ನ್ಯಾಯ ಸೀಮಿತ ನ್ಯಾಯವಾಗಿದೆ. ಹಾಗಾಗಿ ಎಡ ಪಂಥ, ಬಲ ಪಂಥ, ಮಧ್ಯ ಪಂಥ ಅಲ್ಲ, 20 ನೇ ಶತಮಾನದಲ್ಲಿ ಹೋರಾಡಿದ ಅಂಬೇಡ್ಕರ್, ತಂದೆ ಪೆರಿಯಾರ್, ಕಾನ್ಶಿ ರಾಮ್ ಅಂಥವರ ಸತ್ಯ ಪಂಥ ನಮ್ಮದು. ಅಸಮಾನತೆ ಮತ್ತು ಅನ್ಯಾಯ ನಮ್ಮ ಶತ್ರುಗಳು. ಇವುಗಳನ್ನು ಸತ್ಯ ಪಂಥದಿಂದ ದೂರ ಮಾಡಬಹುದು ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸಂವಿಧಾನ ಜಾಥಾ ಮಾಡುವವರು, ಸಂವಿಧಾನ ಪೀಠಿಕೆಯನ್ನು ಮಕ್ಕಳಿಗೆ ಕಂಠಪಾಠ ಮಾಡಿಸುವವರು, ಸಂವಿಧಾನ ಪೀಠಿಕೆಯ ಟೀ ಶಾರ್ಟ್ ಹಾಕಿಕೊಳ್ಳುವವರು ಸಂವಿಧಾನ ಎತ್ತಿ ಹಿಡಿದಿಲ್ಲ. ಯಾರು ಸಮಾನತೆಗಾಗಿ ಕೆಲಸ ಮಾಡುತ್ತಿದ್ದಾರೋ ಅವರು ಸಂವಿಧಾನ ಎತ್ತಿ ಹಿಡಿದ್ದಾರೆ ಎಂದರು. 

ಹಿರಿಯ ಹೋರಾಟಗಾರ ದೊರೆರಾಜು ಮಾತನಾಡಿ ಶಿಕ್ಷಣ, ಉದ್ಯಮವಾದ ಸಂದರ್ಭದಲ್ಲಿ ಅಕ್ಷರ ವಂಚಿತ ಸಮುದಾಯದಿಂದ ಬರುವವರು ಶಿಕ್ಷಣ ಪಡೆಯಲು, ಉದ್ಯೋಗ ಪಡೆಯಲು ಸ್ಪರ್ಧೆ ಮಾಡುವಂತಾಗಿದೆ. ಹೀಗಾಗಿ ತುಮಕೂರಿನಲ್ಲಿ ತರಬೇತಿ ಕೇಂದ್ರ ಸ್ಥಾಪಿಸುವಂತೆ ಹಲವು ಬಾರಿ ಅಧಿಕಾರಸ್ಥರ ಬಳಿ ಮನವಿ ಮಾಡಿದರು ಕಾರ್ಯರೂಪಕ್ಕೆ ಬಂದಿಲ್ಲ ಎಂದರು

 ಪ್ರಸ್ತುತ ತರಬೇತಿ ಕೇಂದ್ರದಲ್ಲೂ ಸ್ಪರ್ಧೆ ಇದೆ. ತುಮಕೂರಿನಲ್ಲಿ ಸ್ಪರ್ಧಾತ್ಮಕ ತರಬೇತಿ ಕೇಂದ್ರ ಅಗತ್ಯವಿದೆ. ಇನ್ನಾದರು ಈ ಕೆಲಸ ಆಗಬೇಕು. ಗುಣಮಟ್ಟದ ತರಬೇತಿ ನೀಡಬೇಕು. ಪ್ರಸ್ತುತ ಯುವಜನತೆ ಬುದ್ದಿವಂತರಾಗಿದ್ದಾರೆ. ಅದರೆ ವರ್ತಮಾನ ಗ್ರಹಿಸುತ್ತಿಲ್ಲ. ವರ್ತಮಾನ ಗ್ರಹಿಸಿದರೆ ಮಾತ್ರ ಭವಿಷ್ಯ ಕಟ್ಟಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಅಕ್ಕ ಐಎಎಸ್ ಅಕಾಡಮಿ ನಿರ್ದೇಶಕ ಶಿವಕುಮಾರ್, ಉಪನ್ಯಾಸಕ ಕೊಟ್ಟಶಂಕರ್, ಡಾ. ಬಿ. ಆರ್. ಅಂಬೇಡ್ಕರ್ ಶೈಕ್ಷಣಿಕ, ಸಾಮಾಜಿಕ ವಿದ್ಯಾಸಂಸ್ಥೆಯ ಅಧ್ಯಕ್ಷ ಪಿ. ಜೆ. ಜಯಶೀಲ್, ತುಮಕೂರು ವಿವಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಎಸ್. ಗುಂಡೂರ, ಕಂಟಲಗೆರೆ ಸಣ್ಣಹೊನ್ನಯ್ಯ, ದಲಿತ ಸಾಹಿತ್ಯ ಪರೀಷತ್ ನ ಗಣಪತಿ ಗೋ ಚನ್ನಸ್ವಾಮಿ, ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಪವನ ಗಂಗಾಧರ್,ಡಾ. ಬಿ ಆರ್ ಅಂಬೇಡ್ಕರ್ ಕೋಚಿಂಗ್ ಸೆಂಟರ್ ನಿರ್ದೇಶಕ ನಾಗರಾಜ್ ಇನ್ನಿತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...