ತುಮಕೂರು | ಹೇಮಾವತಿ ತರಲು ನಡೆದಂತೆ ಮತ್ತೊಮ್ಮೆ ತೀವ್ರ ಹೋರಾಟ: ಲಿಂಕ್ ಕೆನಾಲ್ ವಿರೋಧಿ ಹೋರಾಟ ಸಮಿತಿ

Date:

ತುಮಕೂರು ಜಿಲ್ಲೆಯ ಜೀವನಾಡಿ ಹೇಮಾವತಿ ನೀರನ್ನು ಕುಣಿಗಲ್ ಮೂಲಕ ಮಾಗಡಿಗೆ ಕೊಂಡೊಯ್ಯುವ ಲಿಂಕ್ ಕೆನಾಲ್ ಕಾಮಗಾರಿ ನಿಲ್ಲಿಸಲು ನಡೆದ ನಿರಂತರ ಹೋರಾಟ ಇದೇ ತಿಂಗಳ 25ರಂದು ಜಿಲ್ಲೆ ಬಂದ್‌ಗೆ ಕರೆ ನೀಡಿ, ಗುಬ್ಬಿ ತಾಲೂಕು ಬಂದ್ ಯಶ್ವಸ್ವಿಯಾಗಿ ನಡೆಸಲು ಸಮಿತಿಯ ಎಲ್ಲ ಮುಖಂಡರು ಸಾಮೂಹಿಕ ನಾಯಕತ್ವದಲ್ಲಿ ಬದ್ದರಾಗಿರುವುದಾಗಿ ತೀರ್ಮಾನಿಸಿದ್ದಾರೆ.

ಗುಬ್ಬಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಹೇಮಾವತಿ ಲಿಂಕ್ ಕೆನಾಲ್ ವಿರೋಧಿ ಹೋರಾಟ ಸಮಿತಿಯ ಸಭೆಯಲ್ಲಿ ಬಿಜೆಪಿ-ಜೆಡಿಎಸ್ ಮುಖಂಡರು, ಎಲ್ಲ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಾಗಿ ಮೂವತ್ತು ವರ್ಷದ ಹಿಂದೆ ಹೇಮಾವತಿ ನೀರು ತರಲು ನಡೆಸಿದ ತೀವ್ರ ಹೋರಾಟದ ಮಾದರಿಯಲ್ಲೇ ಈಗ ನೀರು ಉಳಿಸಿಕೊಳ್ಳಲು ನಿರಂತರ ಹೋರಾಟ ನಡೆಸಲು ಬದ್ಧರಾಗಿದ್ದೇವೆಂದು ತಿಳಿಸಿ ಬಂದ್ ಹೇಗೆ ನಡೆಸಬೇಂಬುದರ ಬಗ್ಗೆ ತಮ್ಮ ಸಲಹೆ ಸೂಚನೆ ನೀಡಿದರು.

ಬಿಜೆಪಿ ಮುಖಂಡ ಎಸ್‌ ಡಿ ದಿಲೀಪ್ ಕುಮಾರ್ ಮಾತನಾಡಿ, “ಈ ಹಿಂದೆ ಲಿಂಕ್ ಕೆನಾಲ್ ಯೋಜನೆಗೆ ಒಪ್ಪಿಗೆ ನೀಡಿದ್ದ ತಾಂತ್ರಿಕ ಸಲಹಾ ಸಮಿತಿಯನ್ನೇ ಮತ್ತೊಮ್ಮೆ ಪರಿಶೀಲನೆಗೆ ನಿಯೋಜಿಸುವ ಸರ್ಕಾರ ಕಣ್ಣೊರೆಸುವ ತಂತ್ರ ಬಳಸಿದೆ. ಕಳ್ಳನ ಮುಂದೆ ಕಣಿ ಕೇಳಿದಂತೆ ಈ ಸಲಹಾ ಸಮಿತಿ ಕಾಮಗಾರಿಗೆ ಅಸ್ತು ನೀಡಲಿದೆ. ಒಂದೆರೆಡು ತಾಲೂಕು ಹಿತಾಸಕ್ತಿಗೆ ಇಡೀ ಜಿಲ್ಲೆಗೆ ಅನ್ಯಾಯ ಮಾಡುವ ಕಾಂಗ್ರೆಸ್ ಸರ್ಕಾರದ ವಿರುದ್ದ ಜನ ಹೋರಾಟವೇ ಆಸ್ತ್ರ. 1440 ಕ್ಯೂಸೆಕ್‌ ನೀರು ಹರಿಯುವ ಆಧುನಿಕ ನಾಲೆಯಲ್ಲಿ ನೀರು ತೆಗೆದುಕೊಂಡು ಹೋಗಲಿ. ಅದನ್ನು ಬಿಟ್ಟು ಲಿಂಕ್ ಕೆನಾಲ್ ಒಮ್ಮೆಲೇ 11 ಟಿಎಂಸಿ ನೀರು ಹರಿಸುವ ಹುನ್ನಾರ ವಿರುದ್ಧ ರೈತರು ದನಿಯಾಗಿ ನಿಲ್ಲಬೇಕು. ಮಂಗಳವಾರ ಬಂದ್ ಯಶ್ವಸ್ವಿಗೆ ಬರಬೇಕು” ಎಂದು ಕರೆ ನೀಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಜೆಡಿಎಸ್ ಮುಖಂಡ ಬಿ ಎಸ್ ನಾಗರಾಜು ಮಾತನಾಡಿ, “ಜಿಲ್ಲೆಯ ಎಲ್ಲ ಶಾಸಕರು ಮೀಟಿಂಗ್‌ನಲ್ಲಿ ವಿರೋಧ ವ್ಯಕ್ತಪಡಿಸಿದ್ದು ಸರಿಯಷ್ಟೇ. ಆದರೆ ಬೀದಿಗಿಳಿದು ಹೋರಾಟ ಮಾಡಿದರೆ ಮಾತ್ರ ಕಾಮಗಾರಿ ನಿಲ್ಲಿಸಲು ಸಾಧ್ಯ. ಎಲ್ಲ ಶಾಸಕರು ಹೋರಾಟಕ್ಕೆ ಬೆಂಬಲ ಸೂಚಿಸಿ ಬೆಂಬಲಿಗರೊಂದಿಗೆ ಬರಬೇಕು. ಕಾಮಗಾರಿ ನಡೆಸಲು ಪೊಲೀಸರನ್ನು ಬಳಸುತ್ತಾರೆ. ನಮ್ಮ ಹೋರಾಟ ಹತ್ತಿಕ್ಕಲು ಜೈಲಿನ ಭಯ ತೋರುತ್ತಾರೆ. ಯಾವುದಕ್ಕೂ ಜಗ್ಗದೆ ಈ ತಿಂಗಳ 25ರಂದು ತಮ್ಮ ಗ್ರಾಮದಲ್ಲಿ ಬಂದ್ ನಡೆಸಿ ಗುಬ್ಬಿಗೆ ಬಂದು ಸಾವಿರಾರು ಜನರ ಶಕ್ತಿ ಪ್ರದರ್ಶನ ಆಗಬೇಕು” ಎಂದರು.

ಎಪಿಎಂಸಿ ಮಾಜಿ ಅಧ್ಯಕ್ಷ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ, “ಕುಣಿಗಲ್, ಮಾಗಡಿ, ಕನಕಪುರ, ರಾಮನಗರ, ಚನ್ನಪಟ್ಟಣ ಈ ಕ್ಷೇತ್ರಗಳನ್ನು ಮಾತ್ರ ಉಳಿಸಿಕೊಳ್ಳಲು ಡಿಸಿಎಂ ನಮ್ಮ ರೈತರ ಮೇಲೆ ದರ್ಪ ತೋರಲು ಸಿದ್ಧರಿದ್ದಾರೆ. ರೈತರ ಶಕ್ತಿ ಏನೆಂದು ಹೋರಾಟದಲ್ಲಿ ತೋರಬೇಕು. ಬಂದ್ ಯಶಸ್ವಿ ಜೊತೆಗೆ ಕಾನೂನು ಹೋರಾಟದ ಆಲೋಚನೆ ಮಾಡಬೇಕು” ಎಂದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಚ್ ಟಿ ಭೈರಪ್ಪ ಮಾತನಾಡಿ, “ರಾಷ್ಟ್ರೀಯ ನೀರಾವರಿ ಸಮಿತಿ ಪ್ರಕಾರ ಯಾವುದೇ ಮುಖ್ಯ ನಾಲೆಯಲ್ಲಿ ಲಿಂಕ್ ಕೆನಾಲ್ ಮಾಡುವಂತಿಲ್ಲ. ಎಲ್ಲ ನೀತಿ ನಿಯಮಗಳನ್ನು ಗಾಳಿಗೆ ತೂರಿ ಈ ಪೈಪ್‌ಲೈನ್ ಮಾಡಿರುವುದು ಅಕ್ರಮ. ಜಿಲ್ಲೆಯ ಏಳೆಂಟು ತಾಲೂಕಿಗೆ ಅನ್ಯಾಯ ಮಾಡುವ ಕಾಂಗ್ರೆಸ್ ಸರ್ಕಾರದ ವಿರುದ್ದ ಹೋರಾಟವನ್ನು ನಿರಂತರ ನಿರ್ಣಾಯಕಗೊಳಿಸಬೇಕಿದೆ” ಎಂದರು.

ರೈತ ಸಂಘದ ತಾಲೂಕು ಅಧ್ಯಕ್ಷ ವೆಂಕಟೇಗೌಡ ಮಾತನಾಡಿ, “ಸರ್ಕಾರದ ವಿರುದ್ಧ ನಡೆಯುವ ಹೋರಾಟ ಗಂಭೀರತೆ ಹೊಂದಿರಬೇಕು. ಬೆಳಿಗ್ಗೆ 7 ರಿಂದ ಸಂಜೆ 7ರವರೆಗೆ ಬಂದ್ ಯಶಸ್ವಿಯಾಗಿ ನಡೆಯಬೇಕು. ಗ್ರಾಮೀಣ ಭಾಗಕ್ಕೆ ಮೊದಲು ಕರಪತ್ರ ಹಂಚಿ ಪ್ರಚಾರ ಮಾಡಬೇಕು. ಮನದಟ್ಟು ಮಾಡಿ ಹೋರಾಟಕ್ಕೆ ಕರೆ ತರಬೇಕು. ಎಲ್ಲ ಕಚೇರಿಗಳು ಬಂದ್ ಮಾಡಬೇಕು. ಸಂತೆಗಳು, ಶಾಲೆಗಳೂ ಕೂಡ ಬಂದ್ ಆಗಬೇಕು” ಎಂದರು.

ಈ ಸುದ್ದಿ ಓದಿದ್ದೀರಾ? ಬೀದರ್‌ | 371(ಜೆ) ವಿರುದ್ಧ ಅಪಸ್ವರ ಖಂಡಿಸಿ ಜೂ.29ರಂದು ಜನಾಂದೋಲನ

ಈ ಸಂದರ್ಭದಲ್ಲಿ ಮುಖಂಡರಾದ ಎಸ್ ನಂಜೇಗೌಡ, ಸಿ ಆರ್ ಶಂಕರ್ ಕುಮಾರ್, ಪಿ ಬಿ ಚಂದ್ರಶೇಖರಬಾಬು, ಜಿ ಡಿ ಸುರೇಶ್ ಗೌಡ, ಯೋಗಾನಂದಕುಮಾರ್, ಹೊನ್ನಗಿರಿಗೌಡ, ಹಾರನಹಳ್ಳಿ ಪ್ರಭಣ್ಣ, ಜಿ ಆರ್ ಶಿವಕುಮಾರ್, ಜಿ ಎನ್ ಅಣ್ಣಪ್ಪಸ್ವಾಮಿ, ಶಶಿಕುಮಾರ್, ಎಚ್ ಡಿ ಯಲ್ಲಪ್ಪ, ವರ್ತಕರ ಸಂಘದ ದಯಾನಂದ್, ಹೋಟೆಲ್ ಮಾಲೀಕರ ಸಂಘದ ಕಾಂತರಾಜ್, ರೈತ ಸಂಘದ ಲೋಕೇಶ್, ಪಾರ್ಥ ಸಾರಥಿ, ಗಂಗಸಂದ್ರ ಮಂಜಣ್ಣ, ಬಿ ಲೋಕೇಶ್ ಸೇರಿದಂತೆ ಇತರರು ಇದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...