ತುಮಕೂರು | ಹೆತ್ತೇನಹಳ್ಳಿ ಗ್ರಾ.ಪಂ.ನ ಪಿಡಿಒ ಅವಾಂತರದಿಂದ ಗ್ರಾಮದಲ್ಲಿ ವೈಷಮ್ಯ; ಆರೋಪ

Date:

ತುಮಕೂರು ತಾಲೂಕು ಪಂಚಾಯ್ತಿ ವ್ಯಾಪ್ತಿಗೆ ಬರುವ ಹೆತ್ತೇನಹಳ್ಳಿ ಗ್ರಾಪಂ ಪಿಡಿಒ ಬಡವರನ್ನು ಅಲಕ್ಷ್ಯದಿಂದ ಕಾಣುತ್ತಿದ್ದು, ನೀತಿ ಬಾಹಿರವಾಗಿ ನಡೆದುಕೊಳ್ಳುತ್ತಿರುವ ಆರೋಪ ಕೇಳಿ ಬಂದಿದೆ.

ಹೆತ್ತೇನಹಳ್ಳಿ ಗ್ರಾಮ ಪಂಚಾಯ್ತಿಗೆ ಒಳಪಡುವ ಕೊಂಡಾಪುರ ಗೋಮಾಳದಲ್ಲಿ ಪುಟ್ಟಸ್ವಾಮಯ್ಯ ಎಂಬುವವರ ಪುತ್ರ ರಾಮಲಿಂಗಪ್ಪ ಎಂಬುವವರು ವಾಸವಿದ್ದು, ತಮ್ಮ ಮನೆಯ ಪಕ್ಕದಲ್ಲೇ ಇರುವ 12 ಅಡಿ ಉಳಿಕೆ ಜಾಗವನ್ನೂ ಒಳಗೊಂಡಂತೆ ಸುಮಾರು 25 ವರ್ಷಗಳಿಂದ ಆ ಸ್ಥಳದ ಸಮೀಪದಲ್ಲೇ ಜೀವನ ಸಾಗಿಸುತ್ತಿದ್ದಾರೆ.

ರಾಮಲಿಂಗಪ್ಪನವರಿಗೆ ಸೇರಿದ ಈ ಜಾಗಕ್ಕೆ ಪಂಚಾಯಿತಿಯಿಂದಲೇ ಮಾಡಿಕೊಟ್ಟ ನಮೂನೆ 11 ಖಾತೆ ಇದ್ದು,, 2021ರವರೆಗೆ ಆ ಸ್ಥಳಕ್ಕೆ ಕಂದಾಯವನ್ನೂ ಕಟ್ಟಿಕೊಂಡು ಬರುತ್ತಿದ್ದಾರೆ‌. ಸ್ಥಳೀಯ ರಾಜಕೀಯ ಒತ್ತಡಕ್ಕೆ ಒಳಗಾಗಿರುವ ಪಿಡಿಒ, ರಾಮಲಿಂಗಪ್ಪ ಅವರನ್ನು ಆ ಸ್ಥಳದಿಂದ ತೆರಳುವಂತೆ ಹರಸಾಹಸ ಪಡುತ್ತಿರುವ ಆರೋಪ ಕೇಳಿ ಬಂದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ರಾಮಲಿಂಗಪ್ಪನವರು, ಕೊಂಡಾಪುರ ಗೋಮಾಳ ಗ್ರಾಮದಲ್ಲಿ ಹಲವು ವರ್ಷಗಳಿಂದ ಮನೆ ಕಟ್ಟಿಕೊಂಡು ಬದುಕು ನಡೆಸುತ್ತಿದ್ದಾರೆ. ಕೃಷಿ ಬದುಕನ್ನೇ ನಂಬಿರುವ ಇವರ ಮನೆ ಗ್ರಾಮದ 4ನೇ ಬೀದಿಯ ಕೊನೆಯಲ್ಲಿದೆ.
ಇವರ ನಿವೇಶನದ ಪಕ್ಕದಲ್ಲಿ 12×30 ಜಾಗವಿದ್ದು, ಅದನ್ನೊಳಗೊಂಡಂತೆ ಅನುಭವದಲ್ಲಿದ್ದಾರೆ. ಅನುಭವದ ಆಧಾರದ ಮೇಲೆ ಹಂಗಾಮಿ ಖಾತೆಯನ್ನು ಹೆತ್ತೇನಹಳ್ಳಿ ಗ್ರಾಮ ಪಂಚಾಯಿತಿ ಇಂದ ಖಾತೆಯನ್ನು ಮಾಡಿಕೊಟ್ಟು ವಿದ್ಯುತ್ ಮೀಟರ್ ಅನ್ನೂ ನೀಡಿದ್ದಾರೆ‌. ಇಷ್ಟೆಲ್ಲಾ ಇದ್ದರೂ ರಾಜಕೀಯ ಉದ್ದೇಶದಿಂದ ಪಿಡಿಒ ಅನುಭವದಲ್ಲಿರಲು ತೊಂದರೆ ನೀಡುತ್ತಿದ್ದಾರೆ ಎನ್ನಲಾಗಿದೆ‌.

ಈಗಿರುವ ಪಿಡಿಒ ಅವರೇ, ನೀವು ಆ ಜಾಗದಲ್ಲಿ ಅನುಭವದಲ್ಲಿರಬಹುದು ಎಂದು ಸಂತ್ರಸ್ತ ಕುಟುಂಬದವರಿಗೆ ಮೌಖಿವಾಗಿ ತಿಳಿಸಿರುವ ಆಡಿಯೋ ಕೂಡ ಲಭ್ಯವಾಗಿದೆ. ಈ ಹಿಂದೆ ಹೆತ್ತೇನಹಳ್ಳಿ ಪಂಚಾಯಿತಿ ಉಸ್ತುವಾರಿ ಪಿಡಿಒ ಆಗಿದ್ದ ನಾಗರಾಜ್ ಅವರೂ ಕೂಡ ಕಾಂಪೌಂಡ್ ನಿರ್ಮಿಸಿಕೊಳ್ಳಲು ಮೌಖಿಕವಾಗಿ ಹೇಳಿದ್ದರು ಎಂದು ಸಂತ್ರಸ್ತರು ತಿಳಿಸಿದರು.

ಈ ಹಿನ್ನೆಲೆಯಲ್ಲಿ ರಾಮಲಿಂಗಪ್ಪನವರು ತಮ್ಮ ಮನೆಗೆ ಸೇರಿದಂತೆ ಉಳಿಕೆ ಜಾಗದಲ್ಲೂ ಜಾನುವಾರುಗಳನ್ನು ಕಟ್ಟಲು ಕಾಂಪೌಂಡ್ ನಿರ್ಮಾಣ‌ ಮಾಡಿಕೊಳ್ಳಲು ಮುಂದಾದಾಗ, ಸ್ಥಳೀಯ ರಾಜಕೀಯ ಒತ್ತಡಕ್ಕೆ ಮಣಿದಿರುವ ಪಿಡಿಒ ಕಾಂಪೌಂಡ್ ನಿರ್ಮಾಣಕ್ಕೆ ತಡೆಯೊಡ್ಡಿದ್ದಾರೆ. ಇದೆಲ್ಲದಕ್ಕೂ ಮೂಲ‌ಕಾರಣ ಸಂತ್ರಸ್ತರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾರೆ ಎಂಬುದಾಗಿದೆ ಎಂದು ತಿಳಿದು ಬಂದಿದೆ.

ಹೆತ್ತೇನಹಳ್ಳಿ 1

ಕೊಂಡಾಪುರ ಗೋಮಾಳ ಗ್ರಾಮದ ಜಾಗವನ್ನು ಕೆ.ಲಕ್ಕಪ್ಪನವರು ಎಂಪಿ ಆಗಿದ್ದ ಸಂದರ್ಭದಲ್ಲಿ ಬಡವರಿಗಾಗಿ ಮೀಸಲಿರಿಸಿದ್ದರು. ಆಗ ಸೂರಿಲ್ಲದ ಬಡವರು ತಮಗೆ ಸ್ಥಳ ತೋರಿಸಿದ ಜಾಗಲ್ಲಿ ಗುಡಿಸಲು ಹಾಕಿಕೊಂಡು ವಾಸವಿರಲು ಅನುಕೂಲವಾಗಿತ್ತು.

ಮುಖ್ಯವಾಗಿ ಇದು ಕಂದಾಯ ಭೂಮಿಯಾಗಿರದೆ ಗ್ರಾಮ ಠಾಣವಾಗಿದ್ದು, ಅರ್ಧಕ್ಕಷ್ಟು ನಿವಾಸಿಗಳಿಗೆ ಇಲ್ಲಿ ಹಕ್ಕು ಪತ್ರಗಳು ದೊರೆತಿಲ್ಲ. ಪಂಚಾಯತ್‌ನ ವತಿಯಿಂದ ಮಾಡಿಕೊಟ್ಟಿರುವ ಹಂಗಾಮಿ ಖಾತೆಯ ದಾಖಲೆಯೇ ಇಲ್ಲಿ ಆಧಾರವಾಗಿದೆ‌. ಜನರು ವಾಸವಿರುವ ನಿವೇಶನಗಳನ್ನು ಸಕ್ರಮ ಮಾಡಿಕೊಳ್ಳಲು ಅರ್ಜಿ ಹಾಕಿಕೊಳ್ಳಬೇಕು‌. ಹೀಗಿರುವಾಗ ಅನುಭವದಲ್ಲಿರುವ ನಿವಾಸಿಗಳನ್ನು ಒಕ್ಕಲೆಬ್ಬಿಸುವ ಪ್ರಯತ್ನ ನೈತಿಕವಾದುದಲ್ಲ ಎಂಬ ಮಾತು ಕೇಳಿಬಂದಿದೆ.

ದಿಕ್ಕು ತಪ್ಪಿಸುತ್ತಿರುವ ಪಿಡಿಒ

ಹೆತ್ತೇನಹಳ್ಳಿ ಪಿಡಿಒ ಓಬಳೇಶ್ ಅವರು ರಾಮಲಿಂಗಪ್ಪನವರು ಅನುಭವದಲ್ಲಿರುವ ಸ್ಥಳಕ್ಕೆ ಭೇಟಿ ನೀಡಿ ವಸ್ತು ಸ್ಥಿತಿ ಪರಿಶೀಲಿಸಿದ್ದರೂ ಬಡವರ ಪರ ನಿಲ್ಲದೆ, ರಾಜಕೀಯ ಬಲಾಢ್ಯರ ಪರ ನಿಲ್ಲುತ್ತಿರುವುದು ಈ ಎಲ್ಲ ಬೆಳವಣಿಗೆಗಳಿಂದ ಸಾಬೀತಾಗಿದೆ ಎಂಬ ಆರೋಪ ಕೇಳಿಬಂದಿದೆ.

ನಿಮ್ಮ ಪಂಚಾಯ್ತಿಯವರೇ ಮಾಡಿಕೊಟ್ಟ ಖಾತೆ 126/A ಇದೆ ನೋಡಿ ಎಂದು ಸಂತ್ರಸ್ತರು ಪಿಡಿಓ ಅವರಿಗೆ ತೋರಿಸಿದರೆ‌, ಮನೆ ನಂಬರ್ 66 ಎಂಬುದು ಇದೆ. ಈ ಸ್ಥಳವೇ ನಿಮ್ಮದಲ್ಲ. ನೀವು ಮೊದಲನೇ ಬೀದಿಗೆ ಹೋಗಿ‌ ಮನೆ ಕಟ್ಟಿಕೊಳ್ಳಬೇಕು ಎಂದು ಬೆದರಿಸುತ್ತಾರೆ. ಇದನ್ನು ಜಿಲ್ಲಾ ಪಂಚಾಯತ್ ಸಿಇಓ ಅವರ ಗಮನಕ್ಕೆ ತೆಗೆದುಕೊಂಡು ಹೋದಾಗ, ನೀವು ಹೆದರುವ ಅಗತ್ಯವಿಲ್ಲ. ಮನೆ ನಂಬರ್‌ಗಳು ಯಾವಾಗ ಬೇಕಾದರೂ ಬದಲಾಗಬಹುದು. ಖಾತೆಯಾಗಿರುವುದು ಮತ್ತು ಅನುಭವದಲ್ಲಿರುವುದು ಅಷ್ಟೇ ಮುಖ್ಯ ಎಂದು ಸಮಾಧಾನಪಡಿಸಿದ್ದಾರೆ. ಆದರೆ ಪಿಡಿಓ ಈ ರೀತಿಯಾಗಿ ಬಡವರನ್ನು ದಿಕ್ಕು ತಪ್ಪಿಸುವ ಮೂಲಕ ಹೆದರಿಸುವ ಪ್ರಯತ್ನ‌ ಮಾಡುತ್ತಿದ್ದಾರೆ ಎಂದು ಸಂತ್ರಸ್ತ ಕುಟುಂಬಸ್ಥರು ದೂರಿದ್ದಾರೆ.

ಇದನ್ನು ಓದಿದ್ದೀರಾ? ದಾವಣಗೆರೆ | ವೈದ್ಯರ ಕರ್ತವ್ಯಕ್ಕೆ ಅಡ್ಡಿ ನೆಪ; ದಲಿತ ಮಹಿಳೆ, ಗ್ರಾಕೂಸ್ ಕಾರ್ಯಕರ್ತರ ಮೇಲೆ ಹಲ್ಲೆ; ಆರೋಪ

ಸಮರ್ಪಕವಲ್ಲದ ಇಓ ಮೇಲುಸ್ತುವಾರಿ

ಒಬ್ಬ ಸರ್ಕಾರಿ ನೌಕರ ನ್ಯಾಯದ ಪರವಿರುವುದರ ಬದಲು ಬಲಾಢ್ಯರೊಂಡಿಗೆ ಕೈ ಜೋಡಿಸುತ್ತಿರುವುದಾಗಿ ಆರೋಪ ಕೇಳಿಬಂದಿದೆ. ಇದು ನಿಜಕ್ಕೂ ವಿಷಾದನೀಯ. ಕಾನೂನು ಮತ್ತು ನಿಯಮಗಳ ಅರಿವು ಪಿಡಿಓಗೆ ಇಲ್ಲದೆ ಮಾಡುವ ಎಡವಟ್ಟಿನಿಂದ ಗ್ರಾಮದಲ್ಲಿ ನಿವೇಶನ ವಿಚಾರವಾಗಿ ಜನಗಳ ನಡುವೆ ವೈಷಮ್ಯ ಬೆಳೆಯುತ್ತಿವೆ. ಪಿಡಿಓಗಳ ಕಾರ್ಯವೈಖರಿ ಮೇಲೆ ಪರಿಣಾಮಕಾರಿಯಲ್ಲದ ಇಓ ಅವರ ತಾಲೂಕು ಪಂಚಾಯ್ತಿ ಮೇಲುಸ್ತುವಾರಿಯಿಂದ ಬಡಜನರು ತೊಂದರೆಗೆ ಸಿಲುಕುತ್ತಿದ್ದಾರೆ ಎಂದು ಮಾತುಗಳು ಕೇಳಿಬಂದಿದೆ.

ಕೊಂಡಾಪುರ ಗ್ರಾಮದಲ್ಲಿ ಒಂದೇ ಮನೆಗೆ ಎರಡು‌ ಮೂರು ಖಾತೆಗಳನ್ನು ಬೇರೆ ಬೇರೆ ಮಾಡಿಕೊಡಲಾಗಿದೆ. ರೀತಿಯ ಉದಾಹರಣೆ ಇರುವ ದಾಖಲೆಯೂ ಲಭ್ಯವಾಗಿದೆ.

ಪಿಡಿಓ ಸುಳ್ಳು ಹೇಳುತ್ತಿರುವುದು ಬಯಲಾಗುತ್ತಿದ್ದಂತೆ. ಇದು ರಿಸರ್ವ್ ಜಾಗ ಎಂಬ ಮತ್ತೊಂದು ಕಥೆ ಕಟ್ಟುತ್ತಿದ್ದಾರೆ‌ ಎಂಬ ಆರೋಪ ಕೂಡ ಕೇಳಿಬಂದಿದೆ.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...