ತುಮಕೂರು | `ಒಲವ ಹಾಡು’ ಕವನ ಸಂಕಲನ ಬಿಡುಗಡೆ

Date:

ಸಿದ್ಧ ಮಾದರಿಗಳನ್ನು ಮೀರುವ ಹಾದಿಯಲ್ಲಿ ದಾರಿಬುತ್ತಿ ಬಳಗ ತನ್ನದೇ ಹೆಜ್ಜೆಗಳನ್ನು ಇಡುತ್ತಿದೆ. ಪ್ರೀತಿಯನ್ನು ಹಂಚುವ ಜತೆ ಜತೆಗೆ ನೇಪಥ್ಯದಲ್ಲಿರಬಹುದಾದ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ನಮ್ಮ ಉದ್ದೇಶವಾಗಿದೆ. ನೋವು ಸಂಕಟ ಮೀರುವಂತೆಯೇ ಸುಖ, ಸಂತೋಷವನ್ನು ಮೀರುವುದಾಗಬೇಕು. ಅದನ್ನು ಕಾವ್ಯ ಕಲಿಸುತ್ತದೆ ಎಂದು ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷೆ ಬಾ ಹ ರಮಾಕುಮಾರಿ ಅಭಿಪ್ರಾಯಪಟ್ಟರು.

ತುಮಕೂರು  ನಗರದ ಜನಚಳವಳಿ ಕೇಂದ್ರದಲ್ಲಿ ದಾರಿಬುತ್ತಿ ಪ್ರಕಾಶನದ ವತಿಯಿಂದ ನಡೆದ ಕೆ ಬಿ ಲಕ್ಷ್ಮೀ ಅವರ `ಒಲವ ಹಾಡು’ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

“ಪ್ರಕ್ಷುಬ್ದ ಬದುಕಿಗೆ ಪ್ರೀತಿಯೂ, ಸಂಕಟಗಳ ಬಿಡುಗಡೆಗೆ ಸಾಹಿತ್ಯವೂ ಅನಿವಾರ್ಯವಾಗಿದೆ. ದಾರಿಬುತ್ತಿ ಒಂದು ಸಾಹಿತ್ಯದ ಓದು ಬಳಗ. ಸಾಹಿತ್ಯದ ಓದು, ಗ್ರಹಿಕೆ ಮತ್ತು ಅಳವಡಿಕೆ ಮೂಲಕ ನಮ್ಮ ಪರಿವರ್ತನೆಯಾದರೆ ನಂತರ ಸಮಾಜ ಪರಿವರ್ತನೆಯಾಗುತ್ತದೆಯೆಂದು ನಂಬಿ ತಿಂಗಳಿಗೊಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪುಸ್ತಕ ಕುರಿತು ಡಾ ಆಶಾರಾಣಿ ಬಗ್ಗನಡು ಮಾತನಾಡಿ, “ಒಲವ ಹಾಡು ಕವನ ಸಂಕಲನದಲ್ಲಿನ ಕವಿತೆಗಳು ಒಲುಮೆಯ ಮಹತ್ತನ್ನು ಕಾಣಿಸುತ್ತವೆ. ಪರಸ್ಪರ ಅಪನಂಬಿಕೆ, ಅನುಮಾನಗಳು ಆಳುತ್ತಿರುವ ಈ ಹೊತ್ತಿನಲ್ಲಿ ಒಲವು ಸಿನೀಮೀಯವಾಗದೆ, ಸೋಗಾಗದೆ ನಮ್ಮ ಜೀವನೋತ್ಸಾಹವನ್ನು ಹೆಚ್ಚಿಸುವ ಅಗತ್ಯವಿದೆ. ಈ ಕೃತಿಯ ಅಷ್ಟೂ ಕವಿತೆಗಳು ಒಲವನ್ನೇ ಹಾಡಾಗಿಸಿ ಓದುಗರನ್ನು ಮುದಗೊಳಿಸುತ್ತವೆ” ಎಂದರು.

ಲೇಖಕಿ ಚಂದ್ರಪ್ರಭ ಕಠಾರಿ ಮಾತನಾಡಿ, “ಇಂದಿನ ಸಾಹಿತ್ಯದಲ್ಲಿ ಆಶಯಗಳಿವೆ, ಆಕೃತಿಗಳಿಲ್ಲ. ಆಶಯಗಳು ಆಕೃತಿಯಾಗಿ ಮೂಡಿದಾಗ ಸಾಹಿತ್ಯದ ಸಾರ್ಥಕತೆ ಆಗುತ್ತದೆ” ಎಂದ ಅವರು ಪುಸ್ತಕ ಪ್ರಕಟಣೆಯಲ್ಲಿ  ಆಗಬಹುದಾದ ವಂಚನೆಗಳ ಎಚ್ಚರಿಕೆ ನೀಡಿದರು.

“ಕವಿಯೊಬ್ಬನಿಗೆ ಪ್ರಕಾಶಕರು ಒತ್ತಾಸೆ ನೀಡುವ ನಿಟ್ಟಿನಲ್ಲಿ ದಾರಿಬುತ್ತಿ ಆಪ್ತವಾಗಿ ಸ್ಪಂದಿಸುವುದು ಅಭಿನಂದನಾರ್ಹ” ಎಂದರು.

ಲೇಖಕಿ ಡಾ. ಜಿ ಸುಧಾ ಮಾತನಾಡಿ, “ಜಗತ್ತು ರೊಟ್ಟಿಗೂ ಹಸಿದಿದೆ, ಪ್ರೀತಿಗೂ ಹಸಿದಿದೆ. ಹಸಿವನ್ನು ಅರ್ಥೈಸಿಕೊಂಡು ಪ್ರೀತಿಯ ಬುತ್ತಿ ಹಂಚುವುದು ನಮ್ಮ ಕರ್ತವ್ಯವೂ ಆಗಬೇಕಿದೆ. ದಾರಿಬುತ್ತಿಯ ಪ್ರಯತ್ನಗಳೆಲ್ಲ ಮನುಷ್ಯತ್ವಕ್ಕೆ ತುಡಿಯುತ್ತಿರುವುದು ಶ್ಲಾಘನೀಯ” ಎಂದು ನುಡಿದರು.

ಕವಯಿತ್ರಿ ಕೆ ಬಿ ಲಕ್ಷ್ಮೀ ಕಾವ್ಯದ ದಾರಿಯ ತಮ್ಮ ಅನುಭವಗಳನ್ನು ಹಂಚಿಕೊಂಡರು. ಕೃಷ್ಣ, ನಾರಾಯಣಗೌಡ, ರಜನಿ, ಭಾಗ್ಯ ಭಾವಗೀತೆಗಳನ್ನು ಹಾಡಿದರು.

ಈ ಸುದ್ದಿ ಓದಿದ್ದೀರಾ? ತುಮಕೂರು | ಸ್ಲಂ ನಿವಾಸಿಗಳ ಕುಂದುಕೊರತೆ ಸಭೆ ನಿಗದಿಗೆ ಒತ್ತಾಯ

ಕಾರ್ಯಕ್ರಮದಲ್ಲಿ ಡಾ. ಗಿರಿಜಾರಾವ್, ಸರ್ಕಾರಿ ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷ ಪುಟ್ಟನರಸಯ್ಯ, ಸಿ ಲಿಂಗಯ್ಯ, ಗಂಗಲಕ್ಷೀ, ಶೈಲಜ, ಲೋಕೇಶ್, ಮನ್ವಿತ್, ಬಿ ಸಿ ಪ್ರವೇಣಿ, ಆನಂದ್, ದಾದಾಪೀರ್, ರಂಜಿತ್, ತಿಲಕ್, ಎಂ ಎನ್ ತರಂಗಿಣಿ, ನಿಮ್ಹಾನ್ಸ್ ಉದ್ಯೋಗಿಗಳು, ಸುಕಾಂಕ್ಷ ಟ್ರಸ್ಟ್‌ನ ಯಶೋಧ, ಜ್ಞಾನೇಂದ್ರ, ಮಧುಸೂದನ ಬೆಳಗುಲಿ, ಲೇಖಕಿ ಗೀತಾಲಕ್ಷ್ಮಿ,  ಪ್ರವೀಣ, ಎಸ್ ಆರ್ ದರ್ಶನ್, ಲೇಖಕಿ ರಂಗಮ್ಮ ಹೊದೆಕಲ್‌, ವಿದ್ಯಾರ್ಥಿ ರಂಜಿತ್, ಕವಯಿತ್ರಿಯ ತಂದೆ ಕೆ ಬಸವರಾಜು, ತಾಯಿ ಎಂ ಹೆಚ್ ದೇವರಾಜಮ್ಮ ಸೇರಿದಂತೆ ಇತರರು ಇದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...